ಹೊಡೆಯಿರೋ ನಗಾರಿ
ಗಡಗಡನೆ ಮೂರು ಬಾರಿ ಪ
ದೃಢಭಕ್ತ ಸಮೂಹವ ಸಿರಿ
ಯೊಡೆಯನು ಕೈಬಿಡನೆಂದು ಅ.ಪ
ವಿಧಿಸೃಷ್ಟಿಯೊಳಿಲ್ಲದರೂ-
ಪದಿ ಬಂದು ನಖದಿ ಅಸುರನ
ಉದರ ಬಗೆದು ಕರುಳ ತೆಗೆದು
ಮುದದಿ ಗಳದಿ ಧರಿಸಿದನೆಂದು 1
ಪರರು ತನ್ನ ಹಿಂಸೆಗೈ
ದರು ಸಹಿಸಿ ಸಮಾಧಾನದಿ
ಸಿರಿಯರಸನ ನೆನೆವಗೆ ಭಯ
ವಿರದಿರದಿರದಿರದೆಂದು 2
ದ್ವೇಷಿಗಳನುದಿನ ಯೋಚಿಪ
ಮೋಸಗಳನು ತಿಳಿಯುತ ಲ-
ಕ್ಷ್ಮೀಶನು ಪರಿಹರಿಸಿ ತನ್ನ
ದಾಸರಿಗೊಶವಾಗುವನೆಂದು 3
ತಿಳಿಯಗೊಡನು ಸತ್ಯವಿದೆಂದು 4
ಕಾಮಾದಿಗಳನು ಗೆದ್ದು ಮ-
ಹಾಮಹಿಮರೆನಿಸುವರ ಯೋಗ-
ಕ್ಷೇಮವನ್ನು ವಹಿಸಿಹ ಗುರು-
ರಾಮವಿಠಲ ನರಹರಿಯೆಂದು 5