ರಾಮಮಂತ್ರದ ನೆನಪು ಮನಕಂಟಬೇಕು
ರಾಮನಾಮದಿ ರಸನೆ ನಲಿಯುತಲಿರಬೇಕು ಪ
ರಾಮಮೂರ್ತಿಯ ಕಣ್ಣು ಕಾಣುತಲಿರಬೇಕು
ರಾಮಕಥೆಯ ಕಿವಿ ಕೇಳುತಲಿರಬೇಕು ಅ.ಪ
ರಾಮಪಾದದ ತೀರ್ಥ ಕಂಠಕಿಳಿಯಬೇಕು
ರಾಮ ಪ್ರಸಾದವು ತುಳಸಿಯಾಗಿರಬೇಕು
ರಾಮನ ನಿಲಯವೇ ಕ್ಷೇತ್ರವೆನಿಸಬೇಕು
ರಾಮನ ಭಜನೆಯೆ ದಿನಚರಿಯಾಗಬೇಕು 1
ರಾಮನಯೋಧ್ಯೆಯೆ ಹೃದಯವಾಗಲಿಬೇಕು
ರಾಮಮಂತ್ರದ ಜಪ ಚಿತ್ತದಿ ನಿಲಬೇಕು
ರಾಮನೇ ಮಾಂಗಿರಿರಂಗನೆನಲಿಬೇಕು
ರಾಮಗೆ ಸಕಲವ ಅರ್ಪಿಸಬೇಕು2