ಉದದಿ ಮೇಖಳೆಯ ಭಾರವನಿಳುಹುವನೆಂದು
ವಿಧಿಪೂರ್ವಸುರರು ಬಂದು ಕ್ಷೀರಾಬ್ಧಿಯ
ಸಿಂಧು ಪ.
ಶೌರಿ ಗೃಹದ
ಗೋಪಿ ಜನಕೆ ನಾನಾ
ವಿಧದ ಲೀಲಿಯ ತೋರಿ ದೈತ್ಯರ
ಸದೆದು ಗೋವುಗಳ ಕಾಯ್ದ ಕೃಷ್ಣಗೆ
ಪದುಮದಾರತಿಯ ಬೆಳಗಿರೆ ಶೋಭಾನೆ 1
ಮೆಲ್ಲನೆ ಮಧುರೆಗೆ ಹೋಗಿ ಮಾವನ ದೊಡ್ಡ
ಬಿಲ್ಲ ಮಧ್ಯದಿ ನಿಂದು ರಂಗದಿ ಹಸ್ತ
ಮಲ್ಲಾದಿಗಳ ತರಿದು ಕೈದೋರಿ ಮೆರೆದು
ಖುಲ್ಲನನು ಮಡುಹಿ ಬಂಧುಗ-
ಳೆಲ್ಲರನು ಸಂರಕ್ಷಿಸಿದ ಸಿರಿ
ನಲ್ಲ ಗೋಪೀ ವಲ್ಲಭನ ಪದ
ಪಲ್ಲವಗಳನು ಪಾಡಿ ಪೊಗಳುತ
ಮಲ್ಲಿಗೆಯಾರತಿಯ ಬೆಳಗಿರಿ ಶೋಭಾನೆ 2
ಮಂದಿಮಾಗದ ಮೊದಲಾದ ರಾಯರ ಮದ
ಕುಂದಿಸಿ ರಥದೊಳಂದು ಭೈಷ್ಮಿಯ ಕರ
ತಂದು ದ್ವಾರಕೆಗೆ ಬಂದು ಭಾಮಾದಿ ಮಹಿಷೀ
ವೃಂದ ಸಂಗ್ರಹಿಸಿದ ಪರಾಪರ
ವಂದ್ಯ ಶೇಷಗಿರೀಂದ್ರನಾಥನ
ಚಂದನಾತ್ಮಕ ಮೂರುತಿಯ ಹೃ-
ನ್ಮಂದಿರದ ಮಧ್ಯದಲಿ ಮಂಡಿಸಿಕುಂದಣದಾರತಿಯ ಬೆಳಗಿರೆ ಶೋಭಾನೆ 3