ಬಾರೆಂದು ಹಸೆಗೆ ಕರೆವೆÀನು
ಕ್ಷೀರಾಬ್ಧಿಶಯನನೆ ಸಾರಸನಯನನೇ ಪ.
ಕ್ಷೀರಾಬ್ಧಿಜಾವರ ಮೇರುಗಂಭೀರನೆ
ನೀರಜಭವಪಿತ ಮಾರಹರಾರ್ಚಿತ
ಚಾರುನೀರದಗಾತ್ರ ಪರಮ ಪವಿತ್ರ ಅ.ಪ
ಧರಣೀಸುರರ ಮೊರೆಗಳನಾಲಿಸಿ
ಧರೆಯೊಳಗವತರಿಸಿ ನರರೂಪಧರಿಸಿ
ಧರಣಿಪ ದಶರಥತರಳನೆಂದೆನಿಸಿ
ಧರೆಯ ಭಾರವನಿಳಿಸಿ ಕರುಣಿಸು ಮನವೆರಸಿ 1
ಅಸುರೆ ತಾಟಕಿಯ ಅಸುವನಳಿದು ದುಷ್ಟ
ನಿಶಿಚರರನು ಸದೆದು ಅನುಜನೊಡಗೊಂಡು
ಕುಶಿಕನಂದನನ ಕ್ರತುವನು ತಾ ಕಾಯ್ದು
ಅಸಮ ಶೂರನೆನಿಸಿ ಅಮರರ ಮನತಣಿಸಿ 2
ಶಿಲೆಯ ಶಾಪವಕಳೆದು ಲಲನೆಯ ಪೂಜೆಗೊಲಿದು
ಬಲುಹಿನಿಂದಲೆ ಬಂದು ಹರಧನು ಮುರಿದು
ಲಲನೆ ಜಾನಕಿಯ ನಲವಿನಿಂ ಕೈಪಿಡಿದು
ಬಲುಗರ್ವಿತ ಭಾರ್ಗವ ಮದಮುರಿದೆ ಸಲಹೆನ್ನ 3
ಈಶವಿನುತ ಶ್ರೀ ಶೇಷಾಚಲ ನಿಲಯನೆ
ದಾಸರಮನದೊಳು ವಾಸವಾಗಿಹನೇ
ವಾಸವಾದ್ಯಮರ ಪೋಷಕನೆನಿಸಿಹನೆ
ಭಾಸುರವದನನೆ ಶ್ರೀಸತೀಸದನನೆ ನೀಂ ನಲಿದು 4