ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕ್ಷೀರಶರಧಿಶಯನ ನಾರಾಯಣ ಪ ತೋರೊ ಎನ್ನಲಿ ಕರುಣ ನಾರಾಯಣ ಅ.ಪ ಕ್ಷಿತಿಯೊಳೆನಗೆ ಸ್ಥಿತಿ ಗತಿಯು ಬೇರಿಲ್ಲವೊ ಶ್ರಿತಜನ ಕಲ್ಪತರು ಶ್ರೀರಮಣ 1 ಅರಿಷಡ್ಪರ್ಗವ ಮುರಿದು ಎನಗೆ ನಿನ್ನ ವರ ಸೇವೆಯ ನೀಡೊ ಶ್ರೀ ನರಹರಿ 2 ಪಾಮರ ಭಕುತರ ಕ್ಷೇಮವಹಿಸಿ ಅವರ ಕಾಮಿತಗಳ ನೀಡೊ ಕಾಮಧೇನು 3 ಸಂತತ ಹೃದಯದಿ ನೆಲೆಸಿ ಎನಗೆ ಮನ ಶಾಂತಿಯ ದಯಮಾಡೊ ಚಿಂತಾಮಣಿ 4 ನಿನ್ನ ದಾಸರದಾಸನೆನ್ನಲಿ ದಯದಿ ಪ್ರ ಸನ್ನ ನಾಗೊ ಶ್ರೀಶ ಲಕ್ಷ್ಮೀಶ5
--------------
ವಿದ್ಯಾಪ್ರಸನ್ನತೀರ್ಥರು
ಜಯಮಂಗಳಂ ಶ್ರೀ ರಘುಕುಲಾಬ್ಧಿಚಂದ್ರ ಭವತು ತೇ ಶುಭಮಂಗಳಂ ಶ್ರೀರಘುಕುಲಾಬ್ದಿಚಂದ್ರ ಪ. ಸುರರಿಪುಶಮನ | ಕ್ಷೀರಶರಧಿಶಯನಾ ಕರಿವರನಮನ ಮುರಹರ ಶ್ರೀ | ಸುರವೈರಿಭಯಂಕರ ಮಾವರಶ್ರೀ | ಸರಸಿಜಾಕ್ಷ ಸಾಧುಪಕ್ಷ ದುರಳಶಿಕ್ಷ ಶ್ರೀಕಟಾಕ್ಷ 1 ಹರಣ ಭುವಿರ ಜಾರಮಣ ಭಯಹರ | ಪವನಾತ್ಮಜ ಕವಿಜನಾಳಿಪೂರ್ಣಕಾಮ 2 ದಾಸ ಹೃದಯಾವಾಸ | ದಶಶಿರಧ್ವಂಸ ಶಶಿನಿಭಹಾಸ | ದಶರಥಸುತ | ಶ್ರೀ ವಸುಮತೀಶ ಕುಲವಿಭೂಷ | ಶೇಷಶೈಲ ಶಿಖರಾವಾಸ ಜಯಮಂಗಳಂ3
--------------
ನಂಜನಗೂಡು ತಿರುಮಲಾಂಬಾ