ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀನಿವಾಸ ಭಕ್ತಪೋಷಣಭೂಷ ಮನ್ಮಂದಿರವಾಸ ಶ್ರೀನಿವಾಸ ಪಾದಾತನ ಜನರನು ಸಾನುರಾಗದೊಳ್ಮಾನಿಸಿ ಸಲಹುವ ಪ. ಬಾಲತ್ವದಿಂದ ಬಹುವಿಧವಾದ ಭಕ್ತಿಯನಿತ್ತು ಲಾಲಿಸಿ ಪೊರೆದ ಪೂಜ್ಯಪಾದ ಈ ಮಧ್ಯದೊಳಾದ ಧಾಳಿಗಳನು ನಿರ್ಮೂಲಗೈದ ಕರು- ಣಾಳು ರಾಜ ನಿನ್ನಾಳಾಗಿಹೆನು 1 ಪಂಚಭೌತಿಕವಾದ ತನುವಿಂದ ಆಗುವ ತಪ್ಪ ಕಿಂಚಿನ ವರದ ನೀ ದಯದಿಂದ ಕ್ಷಮಿಸೈ ಗೋವಿಂದ ವಂಚಿಸಿ ದಾನವದಿತಿಜರ ಸುರರಿಗೆ ಹಂಚಿದಿ ಸುಧೆಯನು ಶುಭಕರದಿಂದ 2 ಕಮಲಾಬ್ಜಭವರುದ್ರೇಂದ್ರಾದಿಗಳು ಪಾದಯುಗ ಕಲ್ಪ ದ್ರುಮ ನಿನ್ನ ನೆಳಲನಾಶ್ರೈಸಿಹರು ಕರುಣಾರಸದೋರು ನಮಿಸುವೆ ಎಂಬೀ ಮಮತೆಯಿಂದ ಎ- ನ್ನಮಿತಪರಾಧವ ಕ್ಷಮಿಸುವ ಹರಿಯೆ 3 ಇಂದ್ರಿಯಂಗಳ ಭಾವನೆ ಬಹುಘೋರ ಅದರಲ್ಲಿ ಮುಳುಗಿದ- ರಿಂದಿರಾಧವ ನೀನೆ ಬಹುದೂರ ಆ ರೀತಿಯ ಭಾರ ಹೊಂದಿದ ದಾಸರಿಗೆಂದು ತಾರಾ- ಮಂದರಾದ್ರಿಧರಾ ಮಾಧವಧೀರ 4 ಚರಣ ಸಂಸ್ಮರಣೆ ಮಾತ್ರ ಬೇಕು ಇದರಿಂದ ಸರ್ವ ಪುರುಷಾರ್ಥ ಲಬ್ಧಿಗಿನ್ನು ಸಾಕು ಇರುವುದೆ ಈ ನಾಕು ಉರಗ ಗಿರೀಂದ್ರನ ಶಿರದಲಿ ಮಂಡಿಸಿ ಮೆರೆವ ಸುಖಾಂಬುಧಿ ಸುರವರ ನಾಥ5
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀಹರಿ ಸಂಕೀರ್ತನೆ ಪತಿತ ಪಾವನ ಗೋವಿಂದ ನಮ್ಮ ಪದುಮದಳಾಕ್ಷ ಸದಾನಂದ ಪ ಸತಿಪತಿ ನುತ ಸಾರ್ವಭೌಮ ಸು ವೃತಾ ಚರಣ ಘನ ರಾಜಿತ ಸುಂದರ ಅ.ಪ ಧೀರನಮೋ ಸುವಿಚಾರ ನಮೋ ಯದುವೀರ ನಮೋ ರಜದೂರ ನಮೊ ಮಾರನಮೋ ಗಂಭೀರ ನಮೊ ಭವಹಾರ ನಮೋ ದಧಿ ಚೋರ ನಮೊ 1 ಜನನ ಮರಣ ಜರ ರಹಿತ ನಮೋ ಪಾವನ ಪದ ಪಂಕೇರುಹ ನಯನ ನಮೋ ಮನ ವಚನಕೆ ಸಿಗದ ನಿಮಿಷ ಪತಿ ನಿನ್ನನೆ ಬೇಡುವೆ ಪೊರೆಯೆನುತ ಕರಮುಗಿದು 2 ಶೌರಿ ಶುಭ ನಾಮ ಭಕ್ತ ಜನ ಹಿತಕಾರಿ ಸುತ್ರಾಮ ಅನುಜ ನಿ ಸ್ಸೀಮ ಮಹಿಮ ಶಿರಿಧಾಮ ಅನಘ ನಮೊ 3 ಅನ್ಯನೆ ನಾ ನಿನ್ನಗೆ ದೇವ ಸಾಮಾನ್ಯನೆ ಅಭಿಮನ್ಯುನ ಮಾವಾ ಇನ್ನೆನೆನ್ನದೆ ನಿನ್ನಿಂ ಲಭಿಸಿದ ನುಣ್ಣುವ ಯನ್ನನು ಮನ್ನಿಸದಿರುವರೆ 4 ಹಿರಿಯರ ದಯವಿರುವುದು ಸರೆ ನೀ ಪೊರೆವಿ ಬಿಡದೆ ಯಂಬೋದು ಖರೆ ಸ್ವರಸ್ವರ ಘಸಿದಾಲ್ಪರಿದ ಮೇಲೆ ಸುಧೆ ಗರಿವರ ತೆರ ಚರಿಪುದು ಧರವೆ 5 ದಾಸರ ಪೊರೆಯಲು ದಾಶರಥೇ ಅಮಿತ ಮತೆ ಶ್ರೀಶಾನಿಮಿತ್ಯ ಬಂಧುಯೆನಿಸಿ ಉದಾಸಿಸೆ ಆಗಮ ರಾಶಿಗೆ ಶೋಭವೆ 6 ಘಾಸಿಗೊಳಿಸುವರೆ ಸೈಸೈಸೈ ನೀ ನೀಶನಾದದಕೆ ಫಲವೇನೈ ಪೋಷಕ ನೀನೆಂದಾಸಿಸಿದವರನು ನೀ ಸಲಹದೆ ಬರೆ ಸೋಸಿಲಿ ಮೆರೆವರೆ 7 ಧೃವನ ಪೊರೆದ ಬಲುವೇನಾಯ್ತೈ ಉದ್ಧವಗೆ ವಲಿದ ದಯ ಏಲ್ಹೊಯತೈ ಬವರದೊಳಗೆ ಪಾಂಡವರ ಕಾಯ್ದ ಮತಿ ಸವಿಯುತೆ ಪವನಪಸವಿದ ಸತತ ಸುಖ 8 ಘನ್ನ ಕರುಣಿ ನೀ ನಹುದೇನೊ ಆಪನ್ನ ರಾಪ್ತ ನೀ ನಿಜವೇನೋ ಸೊನ್ನೊಡಲಾಂಡಗ ನೀನಾದರೆ ಗತ ಮನ್ಯುನಾಗಿ ಜವ ನಿನ್ನನೆ ತೋರಿಸು 9 ತಂದಿನ ಪಾಲಿಸಿ ಮಗನನ್ನು ಬೇಕೆಂದು ಕೊಂದ ಕೃಷ್ಣನೆ ನೀನು ತಂದು ತೋರೊತವ ಸುಂದರ ಪದಯುಗ10 ಕಂದುಗೊರಳನುತ ಪೊರೆಯೆಂದು ಬಲು ವಂದಿಸಿದರು ತ್ವರ ನೀ ಬಂದು ಕಂದನ ಕರದ್ಯಾಕೆಂದು ಕೇಳ್ದದಕೆ ನೊಂದು ಬಿಡಿ ನುಡಿ ಗಳೆಂದೆನು ಕ್ಷಮಿಸೈ 11 ಬಲು ಮಂದಿನ ಸಲಹಿದಿ ನೀನು ಅವರೊಳಗೆ ಓರ್ವನಾನಲ್ಲೇನೊ ನೆಲೆಗಾಣದೆ ತವ ಜಲಜ ಪಾದ ಹಂಬಲಿಸುವರರ್ಥವ ಸಲಿಸದೆ ಬಿಡುವರೆ 12 ಬೇಡಿಕೊಂಬುವದೊಂದೆ ಬಲ್ಲೆ ಅದುಕೂಡಾ ತಿಳಿದು ನೋಡಲು ಸುಳ್ಳೆ ಬೇಡಿ ಬೇಡಿಸುವಿ ಮಾಡಿ ಮಾಡಿಸುವಿ ರೂಢಿಪತಿ ನೀನಾಡಿದ ನಾಡುವೆ 13 ನಾಗಶಯನ ನೀ ಬದುಕಿರಲು ಎನಗಾಗ ಬೇಕೆ ಕಲಬಾಧೆಗಳು ಸಾಗರಾಂಬರಪ ಸುತನಿಗೆ ಪುರ ಜನ ಬಾಗದೆ ಅಣಕಿಸಿಧಾಂಗಲ್ಲವೆ ಇದು 14 ಕರೆದರೆ ಬರುವೆನು ನಿನ್ನಡಿಗೆ ಧಿ ಕ್ಕರಿಸಲು ಮರುಗುವೆ ಮನದಾಗೆ ನಿರ್ವಿಣ್ಯನು ಪರತಂತ್ರನು ನಾನಿ ನ್ನೆರಳಲ್ಲವೆ ಮದ್ಗುರುವರ ವರದಾ 15 ಕಲ್ಲಿನ ರೂಪದಿ ಪೂಜಿಯನು ಗೊಳ್ಳುವ ಬಗೆ ನಾನೊಲ್ಲೆ ನಿನ್ನ ಶಿರಿ ನಲ್ಲೆ ಸಹಿತ ಬಂದು ನಿಲ್ಲೊ ಅರ್ಚಿಸುವೆ 16 ಕಣ್ಣಲಿ ತವದರ್ಶನ ಅಮೃತ ಭವ ತ್ರಾತಾ ಘನ ಕರುಣಿ ಬಾರೆನೆ ಬರುವೆನು ಎಂದೆನ್ನುವ ಬುಧ ನುಡಿ ನನ್ನಿಯೆನ್ನುವೆನು 17 ಭಿಡೆಯ ಬಾರದೆ ಬಲು ಘನ್ನಾ ನಾನುಡಿಯು ವಡ್ಡಿ ಬೇಡಿದರನ್ನ ಕೊಡಗೈಯವನಿಗೆ ಲೋಭವು ಎಲ್ಲಂದಡರಿತು ನುಡಿ ನುಡಿ ಕಡಲಜಳೊಡೆಯನೆ18 ನ್ಯಾಯಕೆ ಅಧಿಪ ನೀನೆ ಜೀಯಾ ಅನ್ಯಾಯಕೆ ಪೇಳುವರಾರೈಯ್ಯ ಮಾಯವೆಂಬೊ ಘನ ಘಾಯವುಎನ್ನನು ನೋಯಿಸುತಿದೆ ಜವಮಾಯಿ ಸುಭೀಷಿಜನೆ 19 ವರುಣಗೆ ವಾರಿಯು ನೀನಯ್ಯ ದಿನ ಕರನಿಗೆ ಮಿತ್ರನು ನೀನಯ್ಯ ಸುರಪಗೆ ಇಂದ್ರನು ಉರಗಕೆ ಶೇಷನು ಸರ್ವವು ನೀನೆಂದರಿತೆನು ಕರುಣಿಸು 20 ಹನುಮಗೆ ಪ್ರಾಣ ಮೂರೊಂದು ಆನನನಿಗೆ ವೇಧನು ನೀನಂದು ಮನಸಿಗೆ ನೀ ಮನ ಜೀವಕೆ ಜೀವನ ಎನುತ ಅರಿದು ನಮೊ ಎನ್ನುವೆ ಕರಮುಗಿದು 21 ಮೂಗಣ್ಣಗೆ ರುದ್ರನು ನೀನೆಧರೆ ಆಗಸ ಸಾಗರ ಧಾರಕನೆ ಶ್ರೀ ಗುರು ರಘುಪತಿ ರಾಗ ಪಾತ್ರ ಭವ ನೀಗದೆ ಬಿಡುವರೆ 22 ಪದುಮನಾಭ ನಿನ್ನನು ಕುರಿತು ನಾ ನೊದರುವ ನುಡಿಗಳು ಚಿತ್ರವತು ವಿಧಿಪತ್ರವನಾಂತು ನಿನ್ನ ಪಾದ ವದಗಿಸದಲೆ ಬರೆ ಪದವೆನಿಸಿದವೆ 23 ಸ್ತವನಕೆ ವಲಿಯದೆ ಇರೆ ನಮನ ಗೈಯುವೆ ಇಕೊ ನೋಡೆ ದಾಸ್ಯತನಾ ಅವನಿಪ ಸರ್ವಕೆ ವಲಿಯದೆ ಇರೆ ಬೈಯುವೆ ಬಡಿಯುವೆ ಸಿಕ್ಕರೆ ಸೆರೆ ಪಿಡಿಯುವೆ 24 ಚೋರನೆ ನೀ ನಡಗಿದೆಯಾಕೆ ಸ್ಮøತಿ ದೂರನೆ ಎನ್ನನು ಮರಿವದೇಕೆ ಆರು ನಿನಗೆ ವೈಯಾರವು ಈ ಪರಿ ಕಾರುಣ್ಯದಿ ಕಲಿಸಿದರೋ ಕರಿವರದಾ 25 ಮರೆದಿಯ ನೀ ಕನಿಕರ ಬಡುವ ಸ್ಥಿತಿ ನೀ ಜರದರೆ ನಮಗಿನ್ನೇನು ಗತಿ ಪರಿಪರಿ ವರಲು ವರಲಿ ದಯಮಾಡದೆ ಇರವದು ನಿನ್ನಗೆ ಮರಿಯಾದಿಯೆ ಹರಿ 26 ರೂಪ ತೋರಲೆನ್ನುವಿಯಾ ಆಹದೆ ಪೇಳಲೊ ಹೇ ವಿಗತಾಗಭಯ ಪಾಪಬಾರದೆ ಈ ಪರಿಯನ್ನನು ನೀ ಪಿಡಿಸೆ ಗತತಾಪ ಶ್ರೀಪ ಹರಿ 27 ಸುರತನು ಸಾಕದೆ ಬಿಟ್ಟವಗೆ ತನ್ನ ಸತಿಯಳ ಖತಿಯೊಳಗಿಟ್ಟವಗೆ ಕ್ಷಿತಿಯರು ಏನೆನ್ನುವರು ಮನದೊಳಗೆ ಪತಿ ಯೋಚಿಸಿ ಹಿತಗೈಯನ್ನೊಳು 28 ಶಿರಿಗೋವಿಂದ ವಿಠಲ ಪಾಹಿ ಗುರುವರ ರಘುಪತಿನುತ ಪದ ಪಾಹಿ ಬರೆ ಮಾತಲ್ಲವೊ ತ್ವರ ತವ ಪಾದ ಸಿರಿ ಸುರರಾಣೆ 29
--------------
ಅಸ್ಕಿಹಾಳ ಗೋವಿಂದ
ಮಧ್ಯರಾತ್ರಿಯೊಳೀಗ ನಾ ನಿದ್ದೆಯೊಳಿರೆ ಬಾಗಿಲು |ಸದ್ದು ಮಾಡಿ ವೊತ್ತಿದವರಾರೈ | ಬಾಳ್ವರಿಗಿದುಬುದ್ಧೆ ಹೆಣ್ಣೋ ಗಂಡೋ ಪೇಳಿರೈ ಪಮೇದಿನಿಯೊಳು ಪ್ರಸಿದ್ಧವಾದ ತುಂಗಮಹಿಮ ಶ್ರೀ |ಮಾಧವಬಂದಿಹೆ ಕೇಳೆಲೆ | ಆದರೊಳ್ಳಿತುಮದನನೊಳಾಡಲಿ ಹೋಗೆ 1ಹೇ ಸಖಿ ವಿಚಾರ ಮಾಡೆ ವಸಂತನಲ್ಲವೆ | ಸರ್ವದೇಶ ಬಲ್ಲದು ನಾಚಕ್ರಿಯೆ | ಇಲ್ಲಿ ಬೇಕಿಲ್ಲಆ ಸಂತಿಯೊಳಿಟ್ಟು ಮಾರೊದೈ 2ಉತ್ತಮಗಂಬುವದಲ್ಲೆ ವೈತ್ತಿಕೆ ತುಳಿವನೆಂದುಧರೆ|ಹೊತ್ತವ ಕೇಳೆಲೆ ಸುಂದರಿ | ಒಳ್ಳೆದು ನಿನ್ನಹುತ್ತಿನೊಳು ವಾಸ ಮಾಡೊದೈ3ಸರ್ಪನಲ್ಲವೆ ಅಖಂಡಲ ದರ್ಪ ತಗ್ಗಿಸಿದವ ಸ- |ಮರ್ಪಕವಾಯಿತೇನೆ ಮನಕೆ | ಮರದ ಗೂಡೊಳುತೆಪ್ಪನೆ ಸೇರುವುದೇ ಬಹು ಲೇಸೈ 4ಸೂರಿಗಳೆಲ್ಲರು ಯನ್ನ ಕೀರುತಿ ಬಲ್ಲರುಹುದಲ್ಲ |ನಾರೀಮಣಿಹರಿಬಂಧಿನಿ ಕೇಳೆ | ಮನಗಳಲ್ಲಿ ವಿ-ಹಾರ ಮಾಡುವುದೇ ಲೇಸೈ 5ತರುಗಳಲ್ಲಿಹೊದಕ್ಕೆ ವಾನರನಲ್ಲೆ ಜನನಾದಿ ದೋಷ |ವಿರಹಿತ ನಾರಾಯಣ ಬಂಧಿನೆ | ಈ ನಾಮಕ್ಕಿನ್ನು-ತ್ತರವೇನು ಇದ್ದರೆ ಪೇಳೆ ಗುಣಧೀ 6ನಾನರಿತೆನೀಗ ದೇವ ಪ್ರಾಣೇಶ ವಿಠಲನೆಂಬೊದು |ಏನಾಡಿದಾಪದ್ಧವನು ಕ್ಷಮಿಸೈ | ತನುವೆ ನಿನ್ನದುಮಾನದಿಂದೆನ್ನನು ರಕ್ಷಿಸೈ 7
--------------
ಪ್ರಾಣೇಶದಾಸರು