(ಬಪ್ಪನಾಡಿನ ದೇವಿಯನ್ನು ಕುರಿತು)
ದಯಮಾಡೆ ಬಾಗೆ ಶ್ರೀಪಂಚದುರ್ಗೆ ದಯಮಾಡೆ ಬಾಗೆಪ.
ದಯಮಾಡೆ ಕೇವಲ ಭಯವಿಹ್ವಲನಲ್ಲಿ
ದಯಸಾಗರೆ ಸೌಭಾಗ್ಯಸಂಪದವನ್ನುಅ.ಪ.
ವೇದಾಂತವೇದ್ಯೆ ನಿಖಿಳಜಗದಾದಿವಿನೋದೆ
ಮಧುರಬಿಂಬಾಧರೆ ನಿನ್ನಯ
ಪರಿಹರಿಸಿ ಸರ್ವಾಪ-
ರಾಧಗಳ ಕ್ಷಮಿಸಮ್ಮ ಕೈಟಭಸೂದನನ ಸೋದರಿ ಮಹೇಶ್ವರಿ 1
ಅಂಬುಜಚರಣೆ ಮಾಧುರ್ಯೋರುರಂಭಾಸಮಾನೆ
ಲಂಬೋದರಪರಿರಂಭಕರಾಂಬುಜೆ
ಮುಖೇಂದುಪದ್ಮ ದ-
ರೋಲಂಬಕುಂತಳೆ ಶುಂಭ ಮರ್ದಿನಿ 2
ಸಿಂಧೂರನಯನೆ ನಿಖಿಲಾಮರವಂದಿತಚರಣೆ
ನಿತ್ಯಾನಂದಪ್ರಕಾಶಿನಿ
ಅಂಧಕಾಸುರವೈರಿಹೃದಯಾನಂದ ಪಾರಾವಾರ ಪೂರ್ಣಮಿ-
ಸುರಥನರೇಂದ್ರವರದೆ ಮೃಗೇಂದ್ರವಾಹಿನಿ3
ರಜತಾದ್ರಿವಾಸೆ ಚಂಪಕನಾಸೆ ಸುಜದನೌಘಪೋಷೆ
ಮಹಾಗಜಗೌರಿ ಶಂಕರಿ
ತ್ರಿಜಗಜ್ಜನನಿ ಭಾವನಿ ಪಾರ್ವತಿ ಭುಜಗಭೂಷಣರಾಣಿ ಕಲುಷ-
ದಿವಾಕರೆ ಮಾನಿತೋದ್ಧರೆ4
ತಪ್ಪು ಸಹಸ್ರವಿದ್ದರು ಮನದೊಳಿಪ್ಪುದಜಸ್ರ
ಜಗದಾದಿಮಾಯೆ
ಕಪ್ಪುಕಂಠನ ರಾಣಿ ವರಕಂದರ್ಪಧಿಕತರೂಪೆ ಸಾಧು ಪ-
ದ ಪ್ರಸಾದವ ಪಾಲಿಸೆನ್ನಲಿ ಬಪ್ಪನಾಡಿನ ಭದ್ರದಾಯಕಿ5