ಆದದ್ದ ಮರೆತು ಶ್ರೀ ರಂಗನ ಭಜಿಸಿರಿ
ಮೋದದಿ ಹರಿಯ ಸೇವೆಯ ಮಾಡಿರಿ ಪ
ಮುಕುಟವೆ ವಂದಿಸು ಮತ್ಸ್ಯಾವತಾರನ
ಮುಖವೆ ನೀ ಕೀರ್ತಿಸು ಮುದ್ದು ಕೂರ್ಮನ
ಸೂಕರ ರೂಪನ
ನಖವೆ ನೀನಪ್ಪಿಕೊ ನರಸಿಂಹತನ 1
ವಕ್ಷವೆ ಹೊರು ನೀನು ಗಿಡ್ಡ ವಾಮನನನ್ನು
ಪಕ್ಷವೇ ಪಿಡಿದಾಡು ಭಾರ್ಗವನನ್ನು
ಕಕ್ಷವೆ ಯೆತ್ತು ಶ್ರೀ ರಾಮಚಂದ್ರನನ್ನು
ಕುಕ್ಷಿಯೆ ಬೇಡು ಶ್ರೀ ಕೃಷ್ಣಾಮೃತವ 2
ಹರುಷದಿ ತೊಡೆಯೆ ನೀ ಬುಧನ ಕೂಡ್ರಿಸಿಕೊಳ್ಳು
ಚರಣವೆ ಕಲ್ಕ್ಯಾನ ಮನೆಗೆ ನೀ ಪೋಗು
ನಿತ್ಯ ದಶನಾಮ ಸ್ಮರಿಸಿರಿ
ಸರಿಚನ್ನಕೇಶವ ನೊಲಿದು ಪಾಲಿಸುವಾ 3