ಎಂಥಾ ಸ್ಥಿತಿಯೆ ಶ್ರೀರಾಮಗೆ ಪ
ಚಿಂತಿತ ಫಲದಗೆ ಚಿಂತಾಪ್ರಾಪ್ತಿಯೆ ಅ.ಪ.
ಲೋಕೈಕನಾಥಗೆ ಈ ಕಪಿನಾಥನು ಸು-
ಗ್ರೀವನು ನಾಥನೆಂದೆನಿಸುವ ಪರಿಯೆ 1
ಸಕಲ ಲೋಕ ಶರಣ್ಯಗೆ
ಕಕುಲತೆಯಿಂದನ್ಯರಲಿ ದೈನ್ಯವೆ 2
ಯಾವನನುಗ್ರಹ ಬೇಡುವರು
ಈ ವಿಭುವಿಗೆ ಸುಗ್ರೀವನ ದಯವೆ 3
ಎಲ್ಲರ ದುಃಖವ ಪರಿಹರಿಸುವನಿಗೆ
ಇಲ್ಲಿ ಸುಗ್ರೀವನೊಳ್ ದೈನ್ಯದ ಮೊರೆಯೆ 4
ಕರಿಗಿರೀಶನ ಕಾರ್ಯಕೆ ಕಪಿವರ
ಪರಿ ಮಾಡಿಸುವುದೆ 5