ಹರಿಯಂದು ಸ್ಮರಿಸುವರ ದುರಿತಪರಿಹಾರವೆಂದು
ನೆರೆಪೇಳ್ವ ಶೃತಿ ತಿಳಿದು ಮನವೆ
ಕರುಣಾಸಾಗರನಾದ ಕಮಲಾದ್ರಿವಾಸ
ನರಹರಿಯಪಾದ ಭಜಿಸುವ ಮನವೆ ಪ
ಸುತನ ನಿಂದಗನೆಂದು ಹಿತದಂತ್ಯಕಾಲ ಸಂಘಾತನೆ
ಹಿತ ವೇಳ್ವೆ ಕರಿಯಲು ಮನವೆ
ಚತುರಾಸ್ಯ ಜನಕ ಮನ್ಮಥಕೋಟಿರೂಪ
ಸದ್ಗತಿ ತೋರಿಸಲಹುದೇನು ಮನವೆ 1
ಆ ಮರರೀಮರ ಎಂಬ ಪಾಮರಗೆ ಪಟ್ಟಾಭಿರಾಮ
ಭಕ್ತರ ಪ್ರೇಮ ಮನವೆ
ಕಾಮಿತಾರ್ಥವನಿತ್ತ ಕಂಜಾಕ್ಷದಯದಿ
ಸೀತಾಮನೋಹರ ರಾಮ ಮನವೆ 2
ಕರಿಯು ಮಕರಿಗೆ ಶಿಲ್ಕಿ ನೆರಳುತಲಿ ಪರಮಾತ್ಮ
ಪರಬ್ರಹ್ಮನೆಂದು ಸ್ತುತಿಸಿ ಮನವೆ
ಗರುಡವಾಹನ ಹೆನ್ನೆಪುರನಿಲಯ
ಮರಿಯದಲೆ ಪರಿಪಾಲಿಸಿ ಪೊರೆವ ಮನವೆ 3