ಬಾರೆನ್ನ ಸಖಿಯೇ ಕರೆದು ತೋರಿಸೇ ಪ
ಕರೆದು ತೋರಿಸೇ ಕಂಜನಯ್ಯಾನಾ|
ಕರಿವರ ದಾಯಕ ಕರುಣಾ ಸಾಗರನಾ 1
ಸರಸಿಜ ಲೋಚನ ಮುಕುಟ ಕುಂಡಲನಾ|
ಕೌಸ್ತುಭ ಕೇಯೂರ ಧರನಾ 2
ಮದನ ಶರಕ ಗುರು ಮಾಡುವರೇನೇ|
ಮಧುಹರ ಮುನಿವದು ಉಚಿತ ವೇನೇ 3
ಒಂದರಗಳಿಗೆಯ ಮರೆದಿರ ಲಾರೆ|
ಇಂದು ನೀ ಧನ್ಯಳ ಮಾಡಲೆ ನೀರೆ4
ಬೆರೆದು ಬಿಡುವನಲ್ಲಾ ಸಕಲಂತರ್ಯಾಮಿ|
ನೆರೆದನು ಗುರು ಮಹಿಪತಿ ಸುತಸ್ವಾಮಿ5