ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವ ನೆನೆದರೆ ಸಾಲದೆ ಚಿದಾನಂದಗುರುವ ನೆನೆದರೆ ಸಾಲದೆಹಿರಿದು ಸಂಸಾರಗಳು ಮಾಡುತ್ತೊಂದುದಿನಕ್ಕೊಮ್ಮೆ ಗುರುವ ನೆನೆದರೆ ಸಾಲದೆ ಪ ಜುಟ್ಟು ಜನಿವಾರ ಬಿಸುಟು ತಾವೀಗಉಟ್ಟೊಂದು ಕೌಪೀನವಕಟ್ಟಿ ಕಾಷಾಯ ಕಮಂಡಲು ದಂಡ ಹಿಡಿದುದಿಟ್ಟ ಸಂನ್ಯಾಸ ಪಡೆಯುವುದೇಕೆ1 ಅಡವಿ ಅರಣ್ಯವ ಸೇರಿ ಅಲ್ಲಿದ್ದಅಡವಿ ತೊಪ್ಪಲನೆ ತಿಂದುಗಿಡ ಮರಗಳಲಿ ಮಲಗಿ ಮಳೆ ಛಳಿಗೆ ಕಂಗೆಡೆದೆ ಕಡು ತಪವ ಮಾಡುವುದೇಕೆ2 ಚರಿಯ ಬೇಡುವುದೇಕೆ 3 ಕಾವಿ ವಸ್ತ್ರಗಳನುಟ್ಟು ಮೈಗೆಲ್ಲತಾ ವಿಭೂತಿಯ ಧರಿಸಿ ಕಂಠದಲಿತೀವಿ ರುದ್ರಾಕ್ಷಿ ತಾಳಿ ಶಿವಶಿವಾಯೆಂದುತಾವು ಗೊಣಗುವುದೇಕೆ 4 ಜ್ಞಾನಿಗೀಯವಸ್ಥೆಯಾ ವೇಷಗಳು ತಾವು ಇವಗೇನು ಇಲ್ಲಿಲ್ಲ ತಾನೆ ಚಿದಾನಂದ ಗುರು ತಾನೆ ತಾನೇ ಎಂದು ಭಾವಿಸುತಲಿತೀವಿ ತನ್ನನೇ ಮರೆತಿರಲದೇಕೆ5
--------------
ಚಿದಾನಂದ ಅವಧೂತರು