ಏಸೇಸು ಕÀಲ್ಪ್ಪಕ್ಕು ಈಶನು ನೀನಯ್ಯಾ
ಆಸಾಸು ಕಲ್ಪಕ್ಕು ದಾಸನು ಇವನಯ್ಯಾ
ಉದಾಸೀನ ಮಾಡದೆ ಪೋಷಿಸಬೇಕಯ್ಯ
ವಾಸನ ನೀ ಮಾಡಿ ವಾಸನ ಮಯರೂಪÀ
ಸೋಸಿಲಿ ತೋರಿಸಿ ದಾಸನ ಮಾಡಿಕೊ
ಆಸೆ ಬಿಡಿಸಿ ವಿಶೇಷ ಭಕುತಿ ಜ್ಞಾನ
ಲೇಸಾಗಿ ನೀನಿತ್ತು ಶ್ರೀಶಗುರು ಜಗನ್ನಾಥ ವಿಠಲ ವರ-
ಪರಿ ಪರಿ ದೇಶದಲ್ಲಿ ಮೆರಿಸಿ
ಆಶೆಯ ಪೂರ್ತಿಸು ವಾಸವನನುಜಾ