ನಾರಾಯಣ ಹರಿ ಗೋವಿಂದ ಪ
ಸಿರಿಯು ಸಹಿತ ಮೆರೆದಿರುವ ಜಗದ್ಗುರು ಅ.ಪ
ಇತ್ತು ವೇದವ ಶತಧೃತಿಯನೆ ಸಲಹಿದೆ 1
ಸುರಿ ಸುರಿದಮೃತವ ದಿವಿಜರಿಗುಣಿಸಿದೆ 2
ಲೋಕೇಶನ ನಾಸಿಕದೊಳಗುದಿಸುತ |
ಜೋಕೆಯಿಂದ ತ್ರೈಜಗವನು ಸಲಹಿದೆ 3
ಕುಂಭಿನಿಯೊಳು ನರಹರಿಯೆಂದೆನಿಸಿದೆ 4
ಒಲಿದು ತ್ರಿವಿಕ್ರಮ ವಾಮನನೆನಿಸಿದೆ5
ಅಮಿತ ಪರಾಕ್ರಮಿ ಭಾರ್ಗವನೆನಿಸಿದೆ 6
ಶಶಿಮುಖಿ ಸೀತಾರಾಮನೆಂದೆನಿಸಿದೆ 7
ಅಸುರಾಂತಕ ಶ್ರೀಕೃಷ್ಣನೆಂದೆನಿಸಿದೆ 8
ಅಪರಿಮಿತ ಮಹಿಮ ಬುದ್ಧನೆಂದೆನಿಸಿದೆ 9
ಸಾಸಿರ ನಾಮನೆ ಕ(ಲ್ಕಿ)ಯೆಂದೆನಿಸಿದೆ 10
ಹೃತ್ಕಮಲೇಶ ಸದಾನಂದನೆನಿಸಿದೆ 11