ಎಲ್ಲರೂ ದಾಸರಹರೇ ಪ
ಪುಲ್ಲನಾಭನ ದಯವಿಲ್ಲದೆ ಅ.ಪ.
ಜ್ಞಾನವಿಲ್ಲ ಭಕುತಿಯಿಲ್ಲ
ಧ್ಯಾನ ವೈರಾಗ್ಯ ಮೊದಲೆ ಇಲ್ಲ
ಹೀನ ಕರ್ಮಗಳನು ಮಾಡಿ
ಶ್ರೀನಿವಾಸನ ಮರೆತವರು 1
ಪರವಧುವಿನ ರೂಪ ಮನದಿ
ಸ್ಮರಣೆ ಮಾಡುತ ಬಾಯಿಯೊಳು
ಹರಿಯ ಧ್ಯಾನ ಮಾಡುತಿರುವ
ಪರಮ ನೀಚರಾದ ಜನರು 2
ಪಟ್ಟೆನಾಮ ಹಚ್ಚಿ ಕಾವಿ
ಬಟ್ಟೆಯನ್ನು ಹೊದ್ದುಕೊಂಡು
ಅಟ್ಟಹಾಸ ತೋರಿಕೊಳುತ
ಗುಟ್ಟು ತಿಳಿಯದಿರುವ ಜನರು 3
ದೊಡ್ಡ ತಂಬೂರಿಯ ಪಿಡಿದು
ಅಡ್ಡ ಉದ್ದ ರಾಗ ಪಾಡಿ
ದುಡ್ಡುಕಾಸಿಗಾಗಿ ಭ್ರಮಿಸಿ
ಹೆಡ್ಡರಾಗಿ ತಿರುಗುವವರು 4
ನೋವು ಬಾರದಂತೆ ಸದಾ
ಓವಿಕೊಂಡು ಬರುತಲಿರುವ
ದೇವ ರಂಗೇಶವಿಠಲನ
ಸೇವೆಯನ್ನು ಮಾಡದಿರುವ 5