ವೆಂಕಟರಮಣ ವೇದಾಂತಕೋಟಿವಂದ್ಯ
ಪತಿ ಏಳೆನ್ನುತ ಪ.
ಪಂಕಜಮುಖಿ ಪದ್ಮಾವತಿ ಸರ್ವಾ-
ಲಂಕಾರದ ನಿದ್ದೆ ಸಾಕೆನ್ನುತ ಅ.ಪ.
ಮಂಗಲಚರಿತ ಭುಜಂಗಶಯನ ನಿ-
ನ್ನಂಗದಾಯಾಸವ ಪರಿಹರಿಸಿ
ಪೊಂಗಲಶದಿ ಉಷ್ಣೋದಕ ಗಂಧ ತೈಲಾ-
ಮೂರ್ತಿ 1
ದಧಿಯ ಪೃಥುಕದಲಿ ಹದಗೈದು ಮಧುರದಿ
ಮಧುಸೂದನ ನಿನ್ನ ಪದದ ಮುಂದೆ
ಸದ್ ಹೃದಯರು ತಂದಿಹರು ಸಮರ್ಪಿಸೆ
ಮದಜನಕ ನಿನ್ನ ಓಲೈಸುವರಯ್ಯ 2
ಸಣ್ಣಕ್ಕಿಯನು ದಿವ್ಯಾನ್ನ ಪಾಕವ ಮಾಡಿ
ಚೆನ್ನಾದ ಗೋಕ್ಷೀರವನ್ನು ತಂದು
ಉನ್ನತ ಮಹಿಮನೆ ಉಣ್ಣೆಂದು ಲಲಿತ ಸು-
ವರ್ಣಪಾತ್ರೆಯೊಳು ತಂದಿಹರು ಶ್ರೀಹರಿಯೇ 3
ವಿಧವಿಧ ಷಡುರಸಭರಿತ ಮನೋಹರ
ಸುಧೆಗೆಯಿಮ್ಮಡಿ ಮಧುರತ್ವದಲಿ
ಮೃದುವಾದ ಉದ್ದಿನ ದೋಸೆಯ ಸವಿಯೆಂದು
ಪದುಮನಾಭನೆ ನಿನ್ನ ಹಾರೈಸುವರಯ್ಯ 4
ಕದಳಿ ಉತ್ತಮ ಫಲಗಳ ತಂದು
ರಕ್ಕಸವೈರಿಯೆ ನಿನ್ನ ಮುಂದೆ
ಚೊಕ್ಕಟವಾಗಿಡೆ ಲೆಕ್ಕ ಲೇಖನಗಳ
ವಾಸುದೇವ ನೀನೇಳಯ್ಯ5
ಸಾರಹೃದಯ ಗೌಡಸಾರಸ್ವತ ವಿಪ್ರ
ಭೂರಿ ವೇದಾದಿ ಮಂತ್ರದ ಘೋಷದಿ
ಶ್ರೀರಮಣನೆ ದಯೆದೋರೆಂದು ಕರ್ಪೂರ-
ದಾರತಿಯನು ಪಿಡಿದಿಹರು ಶ್ರೀಹರಿಯೇ 6
ಭಾಗವತರು ಬಂದು ಬಾಗಿಲೊಳಗೆ ನಿಂದು
ಭೋಗಿಶಯನ ಶರಣಾದೆನೆಂದು
ಜಾಗರದಲಿ ಮದ್ದಳ ತಾಳರಭಸದಿ
ರೇಗುಪ್ತಿರಾಗ ಸಂಗೀತ ಪಾಡುವರಯ್ಯ 7
ಕರುಣಾಸಾಗರ ನಿನ್ನ ಚರಣದ ಸೇವೆಯ
ಕರುಣಿಸೆಂದೆನುತಾಶ್ರಿತ ಜನರು
ಕರವ ಮುಗಿದು ಕಮಲಾಕ್ಷ ನಿನ್ನಯ ಪಾದ-
ಸ್ಮರಣೆಗೈಯುತ ನೋಳ್ಪಾತುರದಿಂದ ಹರುಷದಿ 8
ನಾನಾ ಜನರು ಬಂದು ಕಾಣಿಕೆ ಕಪ್ಪವ
ಶ್ರೀನಿವಾಸನೆ ನಿನ್ನ ಪದಕೆ ಒಪ್ಪಿ
ದಾನವಾಂತಕ ನಿನ್ನ ದಯವೊಂದೆ ಸಾಕೆಂದು
ಧ್ಯಾನಮಾಳ್ಪರು ದಯಮಾಡೆಂದು ಹರಿಯೇ 9
ನೀನೆ ಗತಿಯೆಂದು ನಿನ್ನ ನಂಬಿಹರು ಲ-
ಕ್ಷ್ಮೀನಾರಾಯಣ ಪುರುಷೋತ್ತಮನೆ
ಮಾನದಿ ಭಕ್ತರ ಸಲಹಯ್ಯ ಸಂತತ
ಶ್ರೀನಿವಾಸನೆ ಬೇಗ ಏಳು ಶ್ರೀಹರಿಯೆ 10