ಸ್ವಾಂತವ ತೊಳೆಯುತಲಿರಬೇಕು
ಶಾಂತಿನಿಕೇತನವಾಗುವ ತನಕ ಪ
ಶಾಂತ ಮೂರುತಿ ಶ್ರೀಶಾಂತನು ತನ್ನ ಏ
ಕಾಂತ ಮಂದಿರವೆಂದೊಪ್ಪುವ ತನಕ ಅ.ಪ
ಕಾಮ ಕ್ರೋಧವೆಂಬೊ ಕಸಗಳನು
ನೇಮದಿಂದ ಗುಡಿಸುತಲಿರಬೇಕು
ಪ್ರೇಮಜಲದ ಸೇಚನೆ ಮಾಡಿ ಹರಿ
ನಾಮಸ್ಮರಣೆ ಧೂಪವ ಕೊಡಬೇಕು 1
ಕಲಿಪುರುಷನ ಓಡಿಸಬೇಕು
ತಿಳಿಯ ವೈರಾಗ್ಯ ಭಕ್ತಿಗಳೆಂಬ
ತಳಿರು ತೋರಣವ ಕಟ್ಟಲಿಬೇಕು
ನಳಿನನಾಭನ ಮನ ಸೆಳೆಯುವ ತೆರದಿ 2
ಕಾಣಲು ಪರಮತತ್ವದ ದಿವ್ಯ
ಜ್ಞಾನದ ಜ್ಯೋತಿಯ ಮುಡಿಸಲಿ ಬೇಕು
ಜ್ಞಾನ ಸುಖಾದಿ ಸದ್ಗುಣ ನಿಧಿಯು
ತಾನೆ ಪ್ರಸನ್ನನಾಗುತ ನೆಲೆಸುವ ಪರಿ3