ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಕ್ಕೊ ಇಲ್ಲೆ ನೋಡಿ ಸಿಕ್ಕುತ್ತದೆ ನಿಜಗೂಡಿ ಧ್ರುವ ತಿಳಿಯಲು ತನ್ನ ಅಳುವುದು ಭಿನ್ನ ಒಳಹೊರಗದೆ ಪ್ರಸನ್ನ ಬೆಳಗು ಅಭಿನ್ನ ಹೊಳೆವದು ಸುಳಹು ಸದ್ಗುರು ಪಾವನ್ನ 1 ತನ್ನೊಳು ತಿಳಿದವನೆ ತಾನುಳಿದ ಉನ್ಮನಿವಸ್ತಿಯೊಳಳಿದಾ ಮುನ್ನಿನ ಕರ್ಮವ ನಿಲ್ಲದೆದೊಳದಾ ಚನ್ನಾಗವೆ ಭವಗಳೆದಾ 2 ಇದು ನಿಜ ಖೂನ ಸಾಧಿಸು ಙÁ್ಞನ ಬುಧ ಜನರ ಸುಪ್ರಾಣ ಭೇದಿಸು ಮಹಿಪತಿ ನಿನ್ನೊಳು ಪೂರ್ಣ ಇದೇ ಸದ್ಗುರು ಕರುಣ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು