ಯಾರಿಗೆ ದೂರುವೆನು ವೆಂಕಟರಾಯ
ಚಾರದ ಮಹಿಮೆಯನು ಪ
ಈರಾರು ಸ್ಥಳವಲ್ಲಿ ಮೂರಾರು ಸೇರಿಸಿ
ಹೋರಾಟವನಿತ್ತು ಮಾರಿದೆಯೆನ್ನನು ಅ.ಪ
ತೇಜವುಳ್ಳವನೊಬ್ಬನು ಐದನೆಯಲ್ಲಿ
ಮೋಜಾಗಿ ಒಳಹೊಕ್ಕನು
ಹೂಜಿ ತುಂಬಿದ್ದುದ ಸೋಜಿಗದೊಳು ಕದ್ದು
ಪಾಜಿ ಮಾಡಿದನೆನ್ನ ಮೂಜಗದೊಡೆಯ 1
ಸೀತವಾದವನೊಬ್ಬನು ಅಷ್ಟಮದದಲ್ಲಿ
ಕಾತುರದೊಳು ಬಂದನು
ಘಾತಕತನ ಮಾಡಿ ಭೀತಿಗಳನು ತೋರಿ
ದಾತ 2
ಮೂರನೆಯವನೊಬ್ಬನು ಏಳನೆಯಲ್ಲಿ
ಸೇರಿಯೆ ಕಳುತಿದ್ದನು
ಏರಿ ಬಂದುದನೆಲ್ಲ ಆರಿಸಿ ಮಾರಿಸಿ
ಸೂರೆಗೊಂಡನು ಎನ್ನ ವಾರಿಜನಾಭ 3
ಅತ್ರಿಯ ಮೊಮ್ಮಗನು ನಾಲ್ಕನೆಯಲ್ಲಿ
ಶತ್ರುವಾಗಿಯೆ ನಿಂತನು
ಗೋತ್ರದಿ ಕಲಹವ ಬೆಳಸಿಯೆಯಿದ್ದಂಥ
ಪಾತ್ರವÀ ತೀರಿಸಿ ಗಾತ್ರವ ಕೆಡಸಿದ 4
ಸುರಗುರುವೆಂಬುವನು ಮೂರನೆಯಲ್ಲಿ
ಸ್ಥಿರವಾಗಿ ನಿಂತಿಹನು
ಗುರುಗಳ ಮುಖದಿಂದ ಕರಕರೆ ಹತ್ತಿಸಿ-
ದರು ಪಾಡಿ ಹರಿಯನ್ನು ತಿರುಕನಾದೆನು ನಾನು 5
ಆರನೆ ಮನೆಯೊಳಗೆ ದೈತ್ಯರ ಆ-
ಚಾರಿಯನು ನಿಂತಿಹನು
ಹಾರುಮಾತುಗಳೇಕೆ ತೂರಿದನೆಲ್ಲವ
ಪಾರಾದೆನು ನಾನು ವಾರಿಜನೇತ್ರ 6
ಆದಿತ್ಯ ಪುತ್ರನಾದ ಶನೈಶ್ವರ
ಬಾಧಿಪ ಮನೆಗಳಾರು
ದ್ವಾದಶ ಆದಿಯು ದ್ವಿತೀಯ ಪಂಚಮದಲ್ಲಿ
ವೇದಗಳೆಲ್ಲವು ಏಳುಯೆಂಟಿರಲಿ 7
ನಾಡನಾಳುವ ರಾಯರ ಕೆಡಿಸಿ ಮುಂದೆ
ಕಾಡಿಗೆ ಸೇರಿಸಿದ
ಈಡಿಲ್ಲ ಈತಗೆ ಜೋಡಿಲ್ಲ ಗ್ರಹರೊಳು
ಪಾಡೆಲ್ಲ ಕೆಡಿಸಿದ ರೂಢಿಗೆ ಒಡೆಯ 8
ವಾರಿಧಿ ಮಥನದಲಿ ಸುಧೆಯನ್ನುಂಡು
ಸೇರಿದ ಗೃಹರೊಳಗೆ
ಮೀರಿದರಿಬ್ಬರ ಪಾರುಪತ್ಯಗಳನ್ನು
ಮಾರ ಸನ್ನಿಭನೆ 9
ಸಂಧಿ ಸಂಧಿಯಲಿವರು ಬಂದೆನ್ನನು
ದಂದುಗ ಬಡಿಸುವರು
ಇಂದ್ರಾದಿ ದೇವರಿಗಳವಲ್ಲ ಇವರೊಳು
ಹಿಂದು ಮುಂದರಿಯೆನು ಬಂದ ಬವರವನ್ನು 10
ಶುಭದಲ್ಲಿ ಶುಭವಿತ್ತರು ವೆಂಕಟರಾಯ
ಶುಭ ತೋರಿಸೊ
ಅಭಯವನಿಪ್ಪಂಥ ವರಾಹತಿಮ್ಮಪ್ಪನೆ
ಪ್ರಭುವೆಂದು ನೀ ಹೇಳಿ ವಿಭವಗಳೆನಗೀಯೊ 11