ಏಣಾಕ್ಷಿ ಕೇಳೆನ್ನ ಪ್ರಾಣೇಶನೀತನಂ
ಬಣ್ಣಿಪೆನದೆಂತುಟೊ ಕಾಣೆನಮ್ಮ
ಕುಟಿಲವೇ ಭೂಷಣವು, ಸಟೆಯಿದುವೆ ಕುಲದೈವ
ವಟುವೇಷಧರನಿವನುಅಹುದು ಚಲುವ
ಕಪಟ ಗುಣಗಳ ಗಣಿಯು
ಕೃಪೆಯೆಂಬುದೆಳ್ಳೆನಿತು ಕಾಣದವನು
ನುಡಿದ ನುಡಿಯನು ಮತ್ತೆ ನಡಿಸಲಾರದವರನ
ಪಡೆದೆ ಪೇಳುವೆನೇನು ನಡೆದ ಬಳಿಕ
ಧರಣಿಯೊಳಗಿಂತಪ್ಪ ವರನ ಕಾಣೆ
ತರುಣಿಮಣಿ ಕೇಳೆನ್ನ ಅರಸನಿವನೆ
ತರುಣನೀತನ ಪಡೆದ ಧನ್ಯಳಾನೆ
ವರಶೇಷಗಿರಿವರÀನೆ ಬಲ್ಲಹದನೆ