ಬೇಕಾದವನೇ ಹರಿದಾಸ ಪ
ಏಕಾದಶಿ ಉಪವಾಸ ಮಾಡಿದರೆ
ನಾಕಿಗಳಿಗೆ ಆಗದು ವಿಶ್ವಾಸ ಅ.ಪ
ಏಕಾದಶಿಯೆ ಯೋಗಸಿದ್ಧಿ
ಏಕಾದಶಿಯೆ ಭೋಗಪ್ರಾಪ್ತಿ
ಏಕಾದಶಿಯಲಿ ಎರೆಡು ಕಾರ್ಯಲ-
ಕ್ಷೀಕಾಂತನ ಭಜನೆ ರಾತ್ರಿ ಜಾಗರವು 1
ಉಪವಾಸ ವ್ರತವೆ ವ್ರತವು
ಜಪಶೀಲರ ತಪವೇ ಸುಖವು
ಅಪರಿಮಿತವಾದ ಸತ್ಕರ್ಮಗಳೆಲ್ಲಾ
ಚಪಲದಿ ಓಡುವುದುಪವಾಸದ ಹಿಂದೆ 2
ಅನ್ನಸಾರು ಕಾಯಿಪಲ್ಯ ಒಬ್ಬಟ್ಟು
ತಿನ್ನುವುದೇ ಪ್ರತ್ಯಕ್ಷ ನರಕವು 3
ಘನಮೋದದಲಿ ಪವನಜನಾದ ಭೀ-
ಮನೇ ಸ್ವೀಕರಿಸಿರುವನು ಪೂರ್ವದೊಳು 4
ವಿಕಳ ಬುದ್ಧಿಯಾಗದೆ ಸಮಯದಿ ತನ್ನ
ಸುಕುಮಾರನ ಕಡಿಯಲೆತ್ನಿಸಿದನು 5
ನಿರಾಹಾರವು ನಡೆಯಲುತ್ತಮವು
ಎರಡನೇಯದು ಮೇಲ್ಪೇಳಿದುದು
ಪರಿಪರಿ ಅನ್ನೋತ್ಸವದಿ ಕೆಡುವನು 6
ಮಾನವ ಕರಾಮಲಕ ಮುಕ್ತಿಯಲಿ ಸುಖಪಡುವನು 7