ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಯುದೇವರು ಶಾಂತ ಜನರಿಗೀಶಾ ರವಿಕುಲ ಕಾಂತನ ನಿಜದಾಸ ಪ ಭ್ರಾಂತಿ ಬಿಡಿಸಿ ನಿಶ್ಚಿಂತ ಮನದಿ ವೇ- ದಾಂತವೇದ್ಯನಲಿ ಸಂತಸ ಕೊಡುವನ ಅ.ಪ. ಕಡಲ ದಾಟಿ ಬಂದೂ ಒಡೆಯನ ಮಡದಿಗುಂಗುರ ತಂದೂ ಸಡಗರದಲಿ ತುಡುಗ ದೈತ್ಯವ ಕೊಂದು ಅಡಿಯಿಡೆ ಲಂಕೆ ಸುಟ್ಟು ಸುಡುಭುಗಿ ಮಾಡಿದೆ 1 ಏಕಚಕ್ರದಲ್ಲೀ ಬಕಗೆಂ- ದ್ಹಾಕಿದ ಗ್ರಾಸದಲೀ ಶಾಖಡಿಸಲಬಿಡದೇಕತುತ್ತು ಮಾಡಿ ಭೀಕರ ದೈತ್ಯನವಲೋಕಿಸದ್ಹೊಡದೆಲೋ 2 ವಾಯು ಹನುಮ ಭೀಮ ಮಧ್ವಾ ಕಾಯೋ ಪೂರ್ಣಕಾಮಾ ಸಾಯ ಬಡಿದೀ ನೀ ಮಾಯಿಗಳೆಲ್ಲರ ರಾಯ ಶ್ರೀನಿಧಿವಿಠಲಾಯಗೆ ತಿಳಿಸಿದೆ ಎಲೆಲೋ 3
--------------
ಶ್ರೀನಿಧಿವಿಠಲರು