ಪಾದಾನಂಬು ಮನವೇ|ಶ್ರೀರಂಗಯ್ಯನ|
ಪಾದಾನಂಬು ಮನವೇ ವೇದಕಗೋಚರವಾದಾ ಪ
ಹೆಜ್ಜೆಯರಡರೊಳು ಮೂಜಗವಡಗಿಸಿ|
ನಿರ್ಜರ ನದಿಯ ಪಡೆದಾ 1
ಬಿಸಜಾಸಖಾ-ತನುಜ ಎಸಿಯೇ ವಾಸು ಕೀಶರಾ|
ವಾಸವ ಜನ ಕಾಯ್ದಾ2
ಪಲವು ಕಾಲದಿ ಮುನಿ ಮುಳಿದ ಕಾರಣದಿಂದ
ನೆಲದೊಳು ಶಿಲೆಯಾದ ಲಲನೆಯ ನುದ್ದರಿಸಿದ 3
ಮದವೇರಿ ಕುರುರಾಯ ಮೊದಲೇ ತಾಏಳದಿರೆ|
ಬುಧಜನ ನೋಡಲಾಗ ವದಗ ದುರುಳಿಸಿದಾ 4
ಇಂದು ಧರಜರಕೈಯ್ಯಾ ಮದನೆಯನು ಕೊಳುವಾ|
ತಂದೆ ಮಹಿಪತಿ ಸ್ವಾಮಿ ನಂದನ ಜೀವನವಾದಾ 5