ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾನಿಸರಿಗೊಶವಲ್ಲ ಪೊಗಳಿ ಪೇಳುವುದು ಪ ಮೇಧಾದಿ ಮುನಿ ತನ್ನ ತಪೋಸಿದ್ಧಿಗೆ ಸರ್ವ | ಮೇದಿನಿ ತಿರುಗಿ ಬರುತಲಿ ಇತ್ತಲು | ಸಾಧನಕೆ ಸೌಮ್ಯವಾದ ಭೂಮಿಯನು ನೋಡಿ ಇವ | ಮಣಿ ಮುಕ್ತಿ ತೀರದಲಿ1 ನೆಸಗಿದ ತಪಕೆ ಮೆಚ್ಚಿ ಹರಿ ಒಲಿದ ತೀವ್ರದಲಿ | ಬಿಸಿಜದಳ ಲೋಚನೆ ಲಕುಮಿಯಿಲ್ಲೀ || ಎಸೆವ ಮಂಜರಿ ವೃಕ್ಷದಲಿ ವಾಸವಾಗಿ | ವಸುಧಿಯೊಳು ವಾಸವಾಗಿ ಅಗ್ರದಲಿ ಮೆರೆದನು 2 ಪರಮೇಷ್ಠಿ ಬಂದು ಈ ಕ್ಷೇತ್ರದಲಿ ನಿಂದು ಚ ಪರಮ ಗತಿ ಕೊಡು ಎಂದು ಸ್ತುತಿಸಿದನು ಹರಿಯ3 ಇಲ್ಲಿಗೆ ಬಂದು ಸತ್ಕರ್ಮವನು ಮಾಡಿದಡೆ | ಎಲ್ಲ ಕ್ಷೇತ್ರದಲಿ ಮಾಡಿದ ಫಲಕಿಂತ | ಎಳ್ಳಿನಿತು ಮಿಗಿಲೆನಿಸಿ ಪುಣ್ಯ ತಂ | ದುಣಿಸುವುದು | ಎಲ್ಲೆಲ್ಲಿ ಇದ್ದರು ಸ್ಮರಣೆ ಮಾಡಿರೊ ಜನರು 4 ಸುಗಂಧ ಪರ್ವತವಾಸ ಪುರುಷೋತ್ತಮ | ನಿಗಮಾದಿಗಳಿಗೆ ಅತಿದೂರತರನೋ | ಸುಗುಣನಿಧಿ ವಿಜಯವಿಠ್ಠಲರೇಯ ಸರ್ವದ | ಗಗನದಲಿ ಪೊಳೆವನು ಬ್ರಹ್ಮಾದಿಗಳ ಸಹಿತಾ 5
--------------
ವಿಜಯದಾಸ
ಮುಳುಗಿದನುಯೋಗಿಮುಳುಗಿದನುಒಳ್ಳೆ ಬಲಹುಳ್ಳ ನಾದ ಸಮುದ್ರ ಮಧ್ಯದಿಯೋಗಿಪಸತಿಮೂವರ ಸಮನಿಸಲಾರದೆಪಿತರೀರ್ವರ ಕರಕರೆಯನುನೀಗಿಸುತರೈವರೆನಿಪರು ಮಾತು ಕೇಳದಿರೆಮತಿಯೇನು ಹೇಳಲಿ ಎಲ್ಲ ಸಂಗವ ಬಿಟ್ಟು1ಜೇಷ್ಟರಾರುವರ ಕಾಟವ ತಾಳದೆದುಷ್ಟನಾದಿನಿಯ ನಾಲ್ವರ ತೊರೆದುಅಷ್ಟಮಾತುಳರಪ್ರಯೋಜಕವೆಂದುಕಷ್ಟರಿವರು ಎಂದು ಮನವ ಭೀತಿಯ ಬಿಟ್ಟು2ಇಂತು ಎಲ್ಲವ ಬಿಟ್ಟು ಚಿಂತಕ ತಾನಾಗಿಭ್ರಾಂತು ಎಳ್ಳಿನಿತು ಒಬ್ಬರೊಳಿಲ್ಲದೆಚಿಂತಕನು ಚಿದಾನಂದ ಮೂರುತಿಯನುಅಂತು ಬಲಿದು ಎನ್ನ ದೇಹ ಮರೆವಗಿಳಿ3
--------------
ಚಿದಾನಂದ ಅವಧೂತರು