ಹರಿಪಾದ ಮರೆಹೊಕ್ಕು ಪರಿಭವವ ಗೆಲಿರೋ
ಪರಮ ಪರತರ ಕರುಣಶರಧಿ ಸಿರಿವರಗೆ ಪ
ಕುಲವನು ಗಣಿಸದೆ ಎಳೆಬಾಲನೆಂದಪ್ಪಿ
ಬಲು ಉಗ್ರರೂಪದಿಂ ಬಲವಾಗಿ ಕಾಯ್ದ
ಖಳನನುಜನೆಂಬುದನು ತಿಲಮಾತ್ರ ತಿಳಿಯದೆ
ಒಲಿದು ಸ್ಥಿರಪಟ್ಟವನು ಸುಲಭದಿಂ ಕೊಟ್ಟ 1
ಬಡತನವ ಕಡೆಮಾಡಿ ಸಡಗರದಿ ಕಾಯ್ದ
ಕಡುಮುಕ್ತಿಸಂಪದ ತಡೆಯದಲೆ ಕೊಟ್ಟ 2
ತರುಣಿ ದ್ರೌಪದಿಮಾನ ಪೊರೆದಿಂಬುಗೊಟ್ಟ
ಕರುಣಾಳು ಶ್ರೀರಾಮ ಜರಹೇವ ಇಲ್ಲದಲೆ
ಚರಣದಾಸರ ಮನೆಯ ತುರಗ ತಿರುವಿದನು 3