ಅರಿಯಾರೊ ಅಂದಿಗಂದಿಗನ್ಯ - ಈ
ಧರೆಯೊಳಿವರ ಮಹಿಮೆ ಘನ್ನ ಪ
ಮರುತಾವೇಶಯುತ - ಉರಗಾಂಶರನ್ನ ಅ.ಪ
ಪ್ರಲ್ಹಾದ ಲಕ್ಷ್ಮಣ ಬಾಹ್ಲೀಕÀ ವ್ಯಾಸನು
ಇಲ್ಲೀಗ ರಾಘವೇಂದ್ರ ಉಲ್ಲಾಸ ಬಡುವನು 1
ಇನ್ನೂರ ನಾಲ್ವತ್ತು ಮುನ್ನೀಗ ಪೋದದ್ದು
ನನ್ನುರ ಅರವತ್ತು ಇನ್ನು ಉಳಿದಿಹದು 2
ಎಲ್ಲೀ ನೋಡಲಿವರಿಲ್ಲದ ಸ್ಥಳವಿಲ್ಲ
ಬಲ್ಲಾ ಭಕುತಗೆ - ಅಲ್ಲಲ್ಲೆ ತೋರುವದು 3
ಖುಲ್ಲ ನರರಿಗೆ - ಎಲ್ಲೆಲ್ಲಿ ಇಲ್ಲವೊ
ಸಲ್ಲೋದು ನಿಶ್ಚಯ - ಸುಳ್ಳಲ್ಲ ಈ ಮಾತು 4
ದುಷ್ಟ ಜನರಿಗೆ ಇಷ್ಟಾರ್ಥ ಕೊಡುವೊನೊಮ್ಮೆ
ಶಿಷ್ಟಾ ಜನರಿಗ ಭೀಷ್ಠಾವ ಕೊಡುವದು 5
ಇವರ ಪೂಜಿಪ ಜನ - ದಿವಿಜರು ನಿಶ್ಚಯ
ಭುವನದೊಳಗೆ ಇನ್ನು ಇವರಿಗೆ ಸರಿಯುಂಟೆ 6
ಇವರನ ಒಲಿಸಲು ಪವನಾನು ಒಲಿವನು
ಮಾಧವ ತಾನೆÀ ಒಲಿವÀನು 7
ಅಮಿತ ಮಹಿಮರೆಂದು ಪ್ರಮಿತರು ಪೇಳೋರು
ಸುಮತಿಗಳ ಮನಕೆ ಗಮಿಸಿ ತಿಳಿಸುವದು 8
ದಾತಾ ಗುರು ಜಗನ್ನಾಥಾ ವಿಠಲ ಬಹು
ಪ್ರೀತಿಯಿಂದಲಿ ಇವರ ಖ್ಯಾತಿಯ ಮಾಡೊದು 9