ಒಟ್ಟು 11 ಕಡೆಗಳಲ್ಲಿ , 10 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರಾದೇವಿಯ ರಮಣ ಬಾ ವೃಂದಾರಕ ಮುನಿವಂದ್ಯ ಬಾ ಸಿಂಧುಶಯನ ಗೋವಿಂದ ಸದಮಲಾ ನಂದ ಬಾ ಮಾವನ ಕೊಂದ ಬಾ ಗೋಪಿಯ ಕಂದ ಬಾ ಹಸೆಯ ಜಗುಲಿಗೆ ಶೋಭಾನೆ 1 ಕೃಷ್ಣವೇಣಿಯ ಪಡೆದವನೆ ಬಾ ಕೃಷ್ಣನ ರಥ ಹೊಡೆದವನೆ ಬಾ ಕೃಷ್ಣೆಯ ಕಷ್ಟವÀ ನಷ್ಟವ ಮಾಡಿದ ಕೃಷ್ಣ ಬಾ ಯದುಕುಲ ಶ್ರೇಷ್ಠ ಬಾ ಸತತ ಸಂ ತುಷ್ಟ ಬಾ ಉಡುಪಿಯ ಕೃಷ್ಣ ಬಾ ಹಸೆಯ ಜಗುಲಿಗೆ ಶೋಭಾನೆ 2 ಎಲ್ಲರೊಳು ವ್ಯಾಪಕನಾಗಿಪ್ಪನೆ ಬಲ್ಲಿದ ಧೊರೆಯೇ ಜ್ಞಾನಿಗಳರಸನೆ ಎಲ್ಲಿ ನೋಡಲು ಸರಿಗಾಣೆ ವಿಜಯವಿ- ಠ್ಠಲ ಬಾ, ಅಪ್ರತಿಮಲ್ಲ ಬಾ ನೀ- ಹಸೆಯ ಜಗುಲಿಗೆ ಶೋಭಾನೆ 3
--------------
ವಿಜಯದಾಸ
ಎಂದು ಕಾಂಬೆನು ನಾನುಗೋ- ವಿಂದ ನಿನ್ನಯ ಪಾವನ್ನ ಪಾದವನ್ನು ನಾ ಪೊಂದಿಸೇವಿಸಿ ಆನಂದಪಡುವುದಕಿನ್ನು ಕರುಣಿಸೈ ಮುನ್ನ ಪ ಪೊಂದಿ ಮಹದಾನಂದ ಪಡೆಯಲು ಕಂದಿಕುಂದಿತು ತನುಮನೇಂದ್ರಿಯ ಇಂದೆ ತೋರಿಸೊ ಪಾದಕಮಲವ ಅ.ಪ ಬಾಲತನದಲಿ ನಾನು ಶ್ರೀಲೋಲ ನಿನ್ನಿಂದ ಪಾಲಿತನಾದೆನೊ ಬೆಲೆಯುಳ್ಳ ಆಯುವನೆಲ್ಲ ಕಳೆದು ಬಿಟ್ಟೆನು ನಾನು ಕೆಲಕಾಲದಲಿ ನಾ ಕಲುಶಕ್ರಿಯೆಗಳನ್ನು ಫಲವಿಲ್ಲದೆಸಗಿದೆನು ಎಲ್ಲರೊಳು ನೀ ನೆಲಸಿ ಜೀವರ ಎಲ್ಲಕರ್ಮವ ಮಾಡಿಸಿ ಫಲವೆಲ್ಲ ಅವರಿಗೆ ಇತ್ತು ನೀ ನಿರ್ಲಿಪ್ತನೆಂದು ತಿಳಿಯದಲೆ ಖುಲ್ಲಮಾನವರೊಡನೆ ಬೆರೆತು ಪುಲ್ಲಲೋಚನ ನಿನ್ನ ಮರೆದು ಇಲ್ಲ ಎನಗೆ ಎಣೆಯೆನುತ ನಾ ಬಲುಹೆಮ್ಮೆಯಿಂದಲಿ ದಿನಗಳ ಕಳೆದೇ ಇಲ್ಲನಿನಗೆಸರಿಯಿಲ್ಲ ನೀ ನಿಲ್ಲದಾಸ್ಥಳವಿಲ್ಲ ಜಗದಾ ಎಲ್ಲ ಕಾಲಗಳಲ್ಲಿ ಇಹ ಶ್ರೀನಲ್ಲ ನೀನೆಲ್ಲ ಬಲ್ಲೆಯೊ 1 ಬರಿದೇ ಕಾಲವ ಕಳೆದೇ ಶ್ರೀಹರಿಯೆ ನಿನ್ನಯ ಸ್ಮರಣೆಯನ್ನು ಮಾಡದೇ ಪರಿಪರಿಯ ತನುಮನ ಕ್ಲೇಶಗಳಿಗೊಳಗಾದೆ ನಾಮಸ್ಮರಣೆಯೊಂದಲ್ಲದೇ ಇನ್ನೆಲ್ಲಾ ಬರಿದೇ ಪರಮಕರುಣಾಶರಧಿ ಎಂಬುವ ಕರಿಧ್ರುವಬಲಿಮುಖ್ಯರೆಲ್ಲರ ಪೊರೆದ ಕೀರುತಿ ಕೇಳಿ ನಂಬಿದೆ ಶರಣಜನಮಂದಾರನೆಂದು ಅರಿಯೆ ನಾನವರಂತೆ ಸಾಧನ ಅರಿತು ಮಾಡುವ ಪರಿಯು ತಿಳಿಯದು ಬಿರುದು ಭಕ್ತಾಧೀನನೆಂದು ಹರಿಯೆ ನಿನ್ನಯ ಮರೆಯಹೊಕ್ಕೆನು ದುರಿತಶರಧಿಯೊಳಾಡುತಿರುವನ ಉ- ತ್ತರಿಸಲೊಂದೇ ನಾವೆಯಂತಿಹ ಚರಣಸ್ಮರಣೆಯಕೊಟ್ಟು ರಕ್ಷಿಸು ಪುರುಷಸೂಕ್ತಸುಮೆಯ ಜೀಯಾ2 ಶೇಷಗಿರಿಯವಾಸ ಶ್ರೀ ಶ್ರೀನಿವಾಸ ದೋಷರಹಿತ ಸರ್ವೇಶ ಮನೋ- ಕಾಶದಲಿ ಅನವರತ ನಿಲ್ಲೊ ಶ್ರೀಶಾ ಬಿಡಿಸೆನ್ನ ಭವಬಂಧ ಗ್ರಂಥಿಯ ಪಾಶಾ ಹರಿಸುವುದು ಕ್ಲೇಶಾ ಶ್ರೀಶ ನಿಗಗತಿಶಯವೆ ಎನ್ನಯ ವಿಷಯದಭಿಲಾಷೆಗಳ ಬಿಡಿಸೀ ದೋಷರಹಿತನ ಮಾಡಿಸೀ ಎನ್ನ ಪೋಷಿಸೋ ನಿನ್ನಸ್ಮರಣೆಯಿತ್ತು ದ್ವಾಸುಪ- ರ್ಣ ಶ್ರುತಿಗಳಿಂದಲಿ ಈಶ ದಾಸರ ಭಾವ ತಿಳಿಯದೆ ಮೋಸಹೋದೆನೊ ಬೋಧೆ ಇಲ್ಲದೆ ವಾಸುದೇವನೆ ರಕ್ಷಿಸೆನ್ನನು ಏಸುಕಾಲಕು ನೀನೆ ಗತಿ ಎಂದು ಆಸೆ ಮಾಡುವೆ ನಿನ್ನ ಕರುಣಕೆ ಬೇಸರದಲೆ ಮೊರೆಯ ಲಾಲಿಸಿ ಶ್ರೀಶ ಶ್ರೀ ವೆಂಕಟೇಶನೆ 3
--------------
ಉರಗಾದ್ರಿವಾಸವಿಠಲದಾಸರು
ಏಕೆ ಮರೆದಿದ್ದೆನಯ್ಯಾ ಎನ್ನೊಳು ನಾ ಗೋಪಾಲಶ್ರೀಕಾಂತ ನಿನ್ನ ಪಾದದ ಚಿಂತೆಯ ಬಿಟ್ಟಜ್ಞನಾಗಿ ಪಕಾಯವೆ ಸತ್ಯವಿದೆಂದು ಕಾಣದೆ ನಾನಿಲ್ಲಿ ಬಂದುಮಾಯೆಗೊಳಗಾಗಿ ನಿಂದು ಮತ್ತರ ಸಂಗದಿನೊಂದುಜಾಯೆ ಸುತರ್ಗತಿಯೆಂದು ಧ್ಯಾನಿಸಿ ದುಃಖದಿನೊಂದುಬಾಯ ಬಡುಕರೊಳ್ನಿಂದು ಬನ್ನಬಟ್ಟುಳಿಸೆಂದು 1ಆಶೆಗಳಿಗೊಳಗಾಗಿ ಆನಂದಮಾರ್ಗವ ನೀಗಿವಾಸನೆಗಳಿಂದ ಪೋಗಿ ವಾದಿಸುತಲಿ ಚೆನ್ನಾಗಿಮೋಸಹೋಗಿ ಮುಖಬಾಗಿ ಘಾಸಿಯಾಗಿ ಗುಣಪೋಗಿಕಾಸು ವೀಸಾ ಧಾನ್ಯಕಾಗಿ ದಾಸನಾಗಿ ಪರರಿಗೆ 2ಎಲ್ಲರೊಳುವಾದಗಳವಾಡಿ ಬಲ್ಲವನಂದದಿ ಕಾಡಿಖುಲ್ಲರಾ ಮಾರ್ಗವ ಕೂಡಿ ಕೂಳಿಲ್ಲದಿಲ್ಲಿಗೆ ಬಾಡಿತಲ್ಲಣದೊಳಗೋಲಾಡಿ ತಬ್ಬಿಬ್ಬೊ ಕರ್ಮವ ಮಾಡಿಕಲ್ಲೆದೆಯನನೆನ್ನನು ಕಾಯಬೇಕು ಗೋಪಾಲಾರ್ಯ 3
--------------
ಗೋಪಾಲಾರ್ಯರು
ಏನು ಕಾರಣವೆಮ್ಮ ದೂರಕೆ ನೀನು ನೂಕಿದನೆನಿಸಿದೆಹಾನಿ ವೃದ್ಧಿಗಳನ್ನು ಕಾಣಿಸಿ ದೀನಧೀರರ ಮಾಡಿದೆ ಪಎಲ್ಲರೊಳು ನೀ ಪೂರ್ಣ'ರುತಿಲ್ಲವೆಮ್ಮೆಡೆಯೊಳಗೆನುವ ಭ್ರಮೆಯಲ್ಲಿ ಬಂದುದು ಎಮಗೆ ಠಾ'ನ್ನೆಲ್ಲಿ ನಿನ್ನನಗಲುವರೆಉಳ್ಳವನೆ ನಿನಗಿಂತು ಬರುತಿರುವಲ್ಲಿ ನ'್ಮುರವನ್ನು ಪೇಳ್ವದುಜಳ್ಳು ನೀನಿದಿರಿಟ್ಟು ತೊಲಗಿದೆಯಲ್ಲ ಶ್ರೀಗುರುವರ್ಯನೆ 1ಹಲವು ಪರಿಯಲಿ ಚಿತ್ತಪಾಕವ ತಿಳಿದು ಶ್ರುತಿತಾ ಸಾರಿದರ್ಥವುಹೊಳೆಯದೊಂದೊಂದರ್ಥದಲಿ ಮನತೊಳಲಿ ಮಾರ್ಗವ ಕಾಣದೆನಲುಗಿ ಭವಮೃತಿಯೊಂದಿ ಜೀವರು ಬಳಲುತಿರಲವತರಿಪನೆಂಬರುತಿಳಿ'ಯಗಲುವನೆಂದರ ನುಡಿಯಳವಡದು ಗುರುವರ್ಯನೆ 2ಕೊರಗಿ ಕರಗುವ ಜೀವರಾರೈ ಬರುವೆ ನೀನೆಲ್ಲಿಂದ ಸಮಯಕೆಇರುವೆ ನೀನಾವೆಡೆಯೊಳಜ್ಞತೆ ಬರುವದಿವರಿಂಗೇತಕ್ಕೆಹರೆವದೆಂತದರಂದತೋರದು ಧರಿಸುತಿಹೆ ನೀನೆಂತು ತನುವನುಮರೆಯ ಮಾಳ್ವೆಯದೇಕೆ ಮೂರ್ತಿಯ ಕರುಣಿಸೈ ಗುರುವರ್ಯನೆ 3ನಿನ್ನ ನಿನ್ನೊಳು ನೀನೆ ನಾನೆಂದೆನ್ನದೆಂಬುದರಿಂದ ತಿಳಿದರೆನನ್ನ ನಿನ್ನೊಳು ಕಾಣ್ಬೆ ಅಂದು ಪ್ರಸನ್ನನಾಗಿಯೆ ಕರುಣಿಸಿಎನ್ನೊಳಗೆ ಸರ್ವವನು ಸರ್ವರೊಳೆನ್ನ ತಿಳಿದನ್ಯಾರ್ಥವನೆ ಮರತುನ್ನತಾಮಲ ಪೂರ್ಣನಹೆಯೆಂದಿನ್ನು ತೋರದು ದೇವನೆ 4ಸಾಕು ಸನಿಯವ ಸೇರಿಸೆಮ್ಮೊಳು ನೂಕು ಕ'ದಿಹ ತಮವ ಸುಖವನುಸೋಕಿಸೈ ಕಡೆಗೊಳಿಸು ಚಿಂತೆಯ ಬೇಕು ನಿನ್ನಡಿ ಸೇವೆಯುಶ್ರೀಕರನೆ ಚಿಕನಾಗಪುರ ವರದರಸನೆ ಗುರುವಾಸುದೇವನೆತಾಕು ತಡೆ ಬರದಂತೆ ನಿನ್ನೊಳಗೇಕತೆಯ ದಯಮಾಡಿಸೈ 5
--------------
ವೆಂಕಟದಾಸರು
ಖುಲ್ಲ ಮಾತುಗಳು ನಿಲ್ಲದಾಯುಷ್ಕೀರ್ತಿ ಎಲ್ಲರೊಳು ಕೇಳಿ ಪ ಅರಸು ಸಣ್ಣವನೆಂದು ಸರಸವಾಡಲು ಸಲ್ಲ ಕರೆಸಿ ಕೇಳದ ಮಾತು ಆಡಸಲ್ಲ ಪರಸಖರ ಮನೆಯೊಳಗೆ ಇರಿಸಿಕೊಂಡಿರ ಸಲ್ಲ ಬೆರೆಸಿ ಬಹ ಪಾತಕರ ಅರಸುವರೆ ಸಲ್ಲ 1 ಹಗಲು ಕಳ್ಳನ ಕೈಯ ಜಗಳವಾಡಲು ಸಲ್ಲ ಹಗೆಯೊಡನೆ ಸ್ನೇಹವನು ಮಾಡಸಲ್ಲ ಜಗಳಗಂಟಿಕ್ಕುವನ ಮೊಗದೊಳಗೆ ನಗೆಯಿಲ್ಲ ಅಗಲಿ ಪೋಗುವೆನೆಂಬ ಮಗ(ನು) ಸೊಗ(ಸ)ಲ್ಲ 2 ಒಡೆಯನಿಲ್ಲದ ಊರು ಬಡವರಿಗೆ ಅಳವಲ್ಲ ಕಡು ಚೆಲ್ವೆ ಕುರುಡನಿಗೆ ಮಡದಿಯಹ ಸಲ್ಲ ನುಡಿಯ ತಿಳಿಯದೆ ಇಹನ ಸಾಕ್ಷಿಯನು ಇಡ ಸಲ್ಲ ದೃಢವಾದ ಮೂರ್ಖನೊಳು ಕದನ ಮಾತಿಲ್ಲ 3 ಹರಿದಾಸರೆನಿಸಿದರೆ ಪರಗತಿಯೊಳೆರವಿಲ್ಲ ಗುರುಹಿರಿಯರಾದವರ ಜರೆಯ ಸಲ್ಲ ಕರಕರೆಯ ಬದುಕಿನೊಳು ಬರುವ ಉಡುಗೊರೆಯಿಲ್ಲ ಪರಿ ಸಲ್ಲ 4 ಹರಿಯು ಮುನಿದರೆ ಮರೆಯೊಳಿರಿಸಿ ಕೊಂಬುವರಿಲ್ಲ ಹರಿಯೊಲಿದ ನರನೊಳಗೆ ಗೆಲುವ ಪರಿಯಿಲ್ಲ ವರಾಹ ತಿಮ್ಮಪ್ಪನಿರಲು ಬಲ್ಲ ನರನು ಹರಿದೂಷಕರ ಸರಿಯೊಳಗೆ ನಿಲ್ಲ 5
--------------
ವರಹತಿಮ್ಮಪ್ಪ
ನೆಚ್ಚದಿರು ಸಂಸಾರ ಕಡೆಗೆ ಹಾಕುವುದಲ್ಲ ಮಚ್ಚುಗೊಳಿಸುವುದು ವಿಷಯದಲಿ ಎಚ್ಚತ್ತು ಪ್ರವರ್ತಿಸು ಇನ್ನಾದರೂ ಸಿರಿ- ಅಚ್ಯುತನ ಪಾದವನು ನಂಬೊ ಪ್ರಾಣಿ ಪ ಪುಂಪೆಣ್ಗಳಿಂದ ಪುಟ್ಟಿದ ದೇಹವನು ತಿಳಿ ಕೆಂಪು ಬಿಳಿದಿನ ವರ್ಣ ಮಿಳಿತ ಇಂಪಾಗಿದೆಯೆಂದು ಹಿಗ್ಗದಿರೆಲವೊ ಹೊಲೆ- ಗಂಪು ನಾರುವುದು ಅದ ತೊಳೆಯದೆ ಇರಲು 1 ಜನಿಸಿದಾಕ್ಷಣ ಕಾಯು ಕಡಮೆಂದು ತಿಳಿಯದಲೆ ಜನನಿ ಜನಕರು ಸುಖಿಸುತಿಹರು ತನುಭ್ರಮಣವಲ್ಲದೆ ಚಿದ್ರೂಪ ಬಲ್ಲರೆ ಕೊನೆಗೆ ಏನಾಗುವುದೊ ಪ್ರಾಣಿ 2 ಗಳಿಸಿ ಧನ ತರುವಾಗ ಸುತ್ತ ನೆರೆದಿಹರೆಲ್ಲ ಭಳಿರೆ ಇವ ಮಹಾತ್ಮನೆಂದು ಘಳಿಗೆ ತೊಲಗಲು ಧನವು ಕರಗಿ ತಿಂದು ಪೋಗಿ ಹಳಿದು ಹಲ್ತೆರೆದು ಅಣಕಿಪರೋ-ಪ್ರಾಣಿ 3 ಹುಬ್ಬಿನಿಂದಲೆ ಹೊಡೆದು ಹೃದಯದ ಕಗ್ಗಂಟು ಕಬ್ಬು ಕಾರ್ಮುಕನಿಂದ ಬಿಡಿಸಿ ಉಬ್ಬಿಸ್ಯುಕ್ಕಿನ ತಂತಿಯಂತೆ ಮಾತುಗಳಾಡಿ ಉಬ್ಬಸವ ಬಡಿಸುವಳೊ ನಾರಿ ಪ್ರಾಣಿ 4 ಯೌವನವೊದಗಿದಾಗ ಏನೆಂದರೂ ಅಪ್ಪ ಅವ್ವಣ್ಣನೆಂದು ನಸುನಗುತ ಗವ್ವಳಿಕೆ ವೃದ್ಧಾಪ್ಯ ಬಂದೊದಗಲು ಇವನ ಬವ್ವನ ತೆರೆದಲಾಡಿಪರೋ-ಪ್ರಾಣಿ 5 ನಿಷ್ಠಕ್ಕೆ ದೇಹವನು ಮಾಡಿಕೊಂಡಂತೆ ನೀ ದುಷ್ಕರ್ಮಕೊಳಗಾಗದಿರೆಲೋ ನಿಷ್ಕಂಟಕವಾದ ಮಾರ್ಗದಲಿ ನರಹರಿಯ ನಿಷ್ಕಾಮದಲಿ ಭಜಿಸೊ ಮನವೆ ಪ್ರಾಣಿ 6 ಅಂ¨ಲಿಗೆ ಗೃಹಪಾಲ ಮನೆ ಮುಂದೆ ಹಗಲಿರುಳು ಹಂಬಲಿಸಿ ಬಿದ್ದಂತೆ ನೀನು ಕವಿ ಜೋತು ಬಿದ್ದು ಈ ಡಿಂಬವನು ಪೋಷಿಸದಿರೆಲವೊ-ಪ್ರಾಣಿ 7 ದೇಹಕ್ಕೆ ಬಲವಾಗಬೇಕೆಂದು ಎಲ್ಲರೊಳು ಕಂಡಲ್ಲಿ ಸ್ನೇಹಭಾವವನ್ನು ಬಯಸಿ ಕಾಯ ಪುಷ್ಟಿಯಿಂದ ಮೋಹಕ್ಕೆ ಒಳಗಾದೆಯಲ್ಲೋ-ಪ್ರಾಣಿ8 ಸ್ವಲ್ಪ ದಿನವುಳಿಯಿತು ಒಂದು ಸಾಧನ ಕಾಣೆ ಕಲ್ಪಾಯು ನಿನಗಿಲ್ಲವಲ್ಲೊ ಬಲ್ಪಂಥಗಳ ಮಾಡಿ ಭೋಗಪಡದಿರು ನಾಗ- ತಲ್ಪನ್ನ ಮೊರೆಹೋಗಲೋ-ಪ್ರಾಣಿ9 ದೇಶ ದೇಶವ ತಿರುಗಿ ಬಳಲಿ ಬಾಯಾರಿ ನೀ ಕ್ಲೇಶಕೊಳಗಾಗಿ ಹೊನ್ನುಗಳ ಏಸೇಸು ತಂದದ್ದು ಏನಾಯಿತೋ ಒಂದು- ಕಾಸು ನಾಳೆಗೆ ಕಾಣೆಯೋ-ಪ್ರಾಣಿ10 ಎಂದಿಗಾದರೋ ಇದೇ ಸಂಸಾರ ವಿಸ್ತಾರ ಒಂದಕ್ಕೆ ಒಂದೊಂದು ಅಧಿಕ ಬಂಧನವಲ್ಲದಲೆ ಲೇಶ ನಿರ್ಮಲ ಕಾಣೆ ಪೊಂದು ಸಜ್ಜನರಲ್ಲಿ ಮಂದ-ಪ್ರಾಣಿ11 ನಿತ್ಯ ಗಂಡಾಂತರದಿ ಬಿದ್ದು ಸಕಲಕ್ಕೆ ಕರ್ತೃ ನಾನೆಂದು ಕೂಗುವಿಯಲೊ ಮೃತ್ಯು ನಗುವುದು ನಿನ್ನ ಹೆಡತಲೆಯಲಿ ನಿಂದು ಚಿತ್ತದಲ್ಲಿ ತಿಳಿದು ತಲೆ ಬಾಗೊ-ಪ್ರಾಣಿ 12 ದೊಡ್ಡವನು ನಾನು ಎನಗೆಲ್ಲ ಜನರು ಬಂದು ಅಡ್ಡಬೀಳುವರೆಂಬ ಮಾತು ಹೆಡ್ಡತನ ತಾಳದಿರು ಕೊನೆಗೆ ಅನುಭವಕ್ಕು ಕಡ್ಡಿಯಂದದಿ ಮಾಳ್ಪರೋ-ಪ್ರಾಣಿ 13 ಕೋಟಿಯಾದರು ಕೇಳು ಅವರೋಕ್ಷಿಗಾದರೂ ಕೋಟಲೆಯೊಳಿರದೆ ಗತಿಯಿಲ್ಲ ತಾಟತೂಟಕ ಮಾಡಿ ಅವರಂತೆ ನುಡಿದು ಭವ ದಾಟಬೇಕೋ ಬೇಗ ಜಾಣ-ಪ್ರಾಣಿ14 ಆದರಿಸಿ ಸತಿಸುತರು ಬಂಧು ಬಳಗಕ್ಕೆ ಸಂ ಪಾದಿಸಿ ಧನ ಧಾನ್ಯ ತಂದು ಮೋದಪಡಿಸುವೆನೆಂದು ವಾದಿಸುವ ಮನುಜನ್ನ ಪಾದಕ್ಕೆ ಶರಣು ಸಾರೆಲವೋ-ಪ್ರಾಣಿ 15 ವನಧಿಯೊಳು ಸಪ್ತದ್ವೀಪದ ಮೃತ್ತಿಕೆ ಹಾಕೆ ದಣುವಿಕ್ಯಲ್ಲದೆ ಪೂರ್ಣವಹುದೆ ಇನಿತು ತಿಳಿಯೆಲ್ಲೆಲ್ಲಿ ತಂದ ಧನದಿಂದ ಭವ- ವನಧಿ ತುಂಬದು ಕಾಣೊ ಮರುಳೆ-ಪ್ರಾಣಿ 16 ನಿತ್ಯ ಬರೆದ ಲೆಖ್ಖವು ದಿವಾ ರಾತ್ರಿ ನೋಡುತಲಿದ್ದು ನಿನ್ನ ಪತ್ರ ಕರದಲಿ ಪಿಡಿದು ಈ ಮೂರ್ಖ ನರಮಹಿಷ- ಪುತ್ರನೆಂದು ನಸುನಗುವರಲ್ಲೋ-ಪ್ರಾಣಿ 17 ಎನಗೆ ತನಗೆಂದು ಯಮಭಟರು ಕರಗಳ ಹೊಯಿದು ಕಣಿದು ಭುಜ ಚಪ್ಪರುಸುತಿಹರೊ ಅನಿತರೊಳಗೆಚ್ಚರಿಕೆ ಎಚ್ಚತ್ತು ಹರಿಚರಣ ವನಜ ಧಾನ್ಯವ ಒಲವು ಮಾಡೊ-ಪ್ರಾಣಿ 18 ಶ್ರುತಿಗೆ ಅಪ್ರಾಮಾಣ್ಯ ಬಾರದಂತೆ ಮಧ್ವ ಮತಕೆ ವಿರೋಧವಾಗದಂತೆ ಕ್ಷಿತಿಯೊಳಗೆ ಸುಜನರಿಗೆ ಹಿತವಾಗುವಂತೆ ಶ್ರೀ- ಪತಿಯ ಸೇವಿಸಿ ಸುಗತಿ ಪಡೆಯೋ-ಪ್ರಾಣಿ 19 ಅರ್ಥಬಾರದು ನಿನ್ನ ಸಂಗಾತ ಕೇಳ್ ಕೊನೆಗೆ ವ್ಯರ್ಥಧಾವತಿ ಪ್ರಾಪ್ತಕರ್ಮ ತೀರ್ಥಯಾತ್ರೆಯ ಮಾಡಿ ನಿಸ್ಸಂಗನಾಗು ಯ_ ಥಾರ್ಥಾ ಜ್ಞಾನದಿಂದ ಬಾಳೊ ಪ್ರಾಣಿ20 ಶಿಥಿಲವಾಗಿ ಪೋಪ ದೇಹಕೆ ಮಮತಿಂದ ಮಿಥುನ ಭಾವಗಳನ್ನೆ ಬಯಸಿ ವ್ಯಥೆಪಟ್ಟು ಪಥತಪ್ಪಿ ನಡೆದು ನರಹರಿ ಸುಗಣ ಕಥೆಗೆ ವಿಮುಖನಾಗದಿರೆಲೊ-ಪ್ರಾಣಿ 21 ವನಗಿರೀ ನದಿ ಮೆದೆ ಹೊದರು ಗಹ್ವರ ಹುತ್ತ ವನರಾಶಿ ದ್ವೀಪ ಪಾತಾಳ ತನು ಮತ್ರ್ಯ ಸುರಲೋಕ ಜನನಿ ಜಠರದೊಳಿರಲು ಅಣು ಮಾತ್ರ ತಪ್ಪುವುದೆ ಬರಹ ಪ್ರಾಣಿ 22 ಹಲವು ಹಂಬಲ ಸಲ್ಲ ಆದ್ಯಂತಕಾಲದಲಿ ಗಳಿಸಿಕೋ ಪೂರ್ಣಾಯು ವಾಯು ಒಲಿಯದಲೆ ನಿನ್ನೊಳಗೆ ವಿಜಯವಿಠ್ಠಲರೇಯ ಸುಳಿಯ ಜಾಗ್ರತನಾ ಗೆಲೋ ಪ್ರಾಣಿ 23
--------------
ವಿಜಯದಾಸ
ಪ್ರಣವ ಪ್ರತಿಪಾದ್ಯ ಪ್ರಹ್ಲಾದವರದಾ ಪ ಪ್ರಣತಕಾಮದನೆ ಪ್ರಾರ್ಥಿಸುವೆ ಪ್ರಭುವೆಂದು ಅ.ಪ. ಸಕಲ ಜೀವ ಜಡಾತ್ಮಕ ಜಗತ್ತಿನೊಳಗಿದ್ದು ಅಕಳಂಕ ನಾಮರೂಪದಲಿ ಕರೆಸಿ ಪ್ರಕಟನಾಗದಲೆ ಮಾಡಿಸಿ ಸರ್ವ ವ್ಯಾಪಾರ ಸುಖ ದುಃಖಗಳಿಗೆ ಗುರಿಮಾಡಿ ಎಮ್ಮನು ನೋಳ್ಪೆ 1 ಏನೆಂಬೆ ನಿನ್ನ ಮಹಿಮೆಗೆ ರಮಾಪತಿ ನಿನ್ನ ಸುರರು ದೀನರುದ್ಧರಿಸುವುದು ದಯದಿಂದ ನಿರುತಾ 2 ಸರ್ವ ಸ್ವತಂತ್ರ ನೀನಾದ ಕಾರಣ ಬ್ರಹ್ಮ ಶರ್ವಾದಿಸುರರು ಪ್ರಾರ್ಥಿಸುತಿಪ್ಪರು ದುರ್ವಿಭಾವ್ಯನೆ ಸುರಗಮೃತ ಪಾನವ ಗೈಸಿ ಗರ್ವಿಸಿದ ದಾನವರ ಗಣವ ಸಂಹರಿಪೆ 3 ಬುಧ್ಯಾದಿ ಇಂದ್ರಿಯಗಳೊಳಗೆ ತತ್ಪತಿಗಳೊಳ ಗಿದ್ದು ಬಹುವಿಧ ಚೇಷ್ಟೆಗಳನೆ ಮಾಡಿ ಬದ್ಧರನ ಮಾಳ್ಪೆ ಭವದೊಳಗೆ ಜೀವರನ ಅನಿ ರುದ್ಧರೆಂದೆನಿಪೆ ಎಲ್ಲರೊಳು ವ್ಯಾಪಕನಾಗಿ 4 ದಾಶರಥಿ ನೀನೆ ಗತಿಯೆಂದು ಮೊರೆಹೊಕ್ಕೆ ವಿ ಭೀಷಣಗೆ ಲಂಕಾಧಿಪತ್ಯವಿತ್ತೇ ವಾಸವಾನುಜ ಜಗನ್ನಾಥ ವಿಠ್ಠಲ ಭಕ್ತ ಪೋಷಕನು ನೀನಹುದು ಕಲ್ಪ ಕಲ್ಪಗಳಲ್ಲಿ 5
--------------
ಜಗನ್ನಾಥದಾಸರು
ಯಾಕೆಲೊ ರಂಗ ನಿನಗಿಂತು ನಟನೆಯ ಮಾತು ಪ ಮಾಕಾಂತ ಕರೆಸಿದರೆ ಬಾರದಿಹ ಪೊಗರುಅ ತಸ್ಕರ ಬುದ್ಧಿ ಕಡೆಗೆ ಇರಿಸಿಬಾಲಕನ ವಂದರಿಸಿ ಬಹುಭಾಗ್ಯವಂತನೆನಿಸಿಎಲ್ಲರೊಳು ಸಲಿಗೆ ನಿಲಿಸಿದಳೊ ನಿಮ್ಮರಸಿ 1 ಕೆಸರ ಚೊಗೆಯಂ ಬಿಡಿಸಿ ಗುಂಜ ಸರವಂ ತೆಗೆಸಿಬಿಸರುಹ ಮಣಿಮಾಲೆ ಕಡೆಗೆ ಇಡಿಸಿಪೊಸ ಪೀತಾಂಬರ ಉಡಿಸಿ ನವರತ್ನವಂ ತೊಡಿಸಿವಸುಧೆಯೊಳು ಮಿಗಿಲಾಗಿ ನಿಲಿಸಿದಳೊ ನಮಿಸಿ 2 ಎನ್ನ ಮಾತನು ಕೇಳು ಮುನಿಸು ಕೃತ್ಯವ ಸೀಳುಇನ್ಯಾಕೆ ಯೋಚನೆ ಫಲವ ಪೇಳುಬಿನ್ನಹವನು ಕೇಳು ನೆರೆಗೂಡಿ ಸುಖಬಾಳುಚೆನ್ನ ಬಾಡದಾದಿಕೇಶವ ದಯಾಳು 3
--------------
ಕನಕದಾಸ
ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ ಹಂಸೋಹಂ ಭಾವದ ಉಸಿರೊಡಿಯದ್ಹಾಂಗೆ ಧ್ರುವ ಎಲ್ಲದೋರ್ವದು ಮರೆದು ಎಲ್ಲರೊಳಗೆಹದರಿದು ಎಲ್ಲರೊಳಗೆಲ್ಲ ತಾನಾಗಬೇಕು ಎಲ್ಲರೊಳು ತಾನಾಗಿ ಎಲ್ಲ ತನ್ನೊಳಗಾಗಿ ಬೆಲ್ಲ ಸವಿದ ಮೂಕನಂತಾಗಬೇಕು 1 ಬಲ್ಲವತವನು ನೀಡಿ ಬಲ್ಲನೆತಾನಾಗಿ ಬಲ್ಲರಿಯೆನೆಂಬುದನು ಈಡ್ಯಾಡಬೇಕು ಬಲ್ಲರಿಯದೊಳಗಿದ್ದನೆಲ್ಲ ತಿಳಿಕೊಳ್ಳಬೇಕು ಸೊಲ್ಲಿಲ್ಹೇಳುವ ಸೊಬಗ ಬೀರದಿರಬೇಕು 2 ಸೋಹ್ಯ ಸೂತ್ರವ ತಿಳಿದು ಬಾಹ್ಯ ರಂಜನಿ ಮರೆದು ದೇಹ ವಿದೇಹದಲ್ಲಿ ಬಾಳಬೇಕು ಮಹಿಗೆ ಮಹಿಪತಿಯಾಗಿ ಸ್ವಹಿತ ಸದ್ಗುರುನಾದಶ್ರೀಹರಿ ಗುರುತನುಂಡು ಸುಖದಲಿ ಸುಖಿಸಬೇಕು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಯಾ ಪೂಜೆಯಾ ಮಾಡಿ ಗತಿಗಳ ಬೇಡಿ ಹರುಷದಿ ಕೂಡಿ ನಲಿ ನಲಿದಾಡಿ ಪ ಎಲ್ಲರೊಳು ಬಾಗಿ ನಡಿಬೇಕು ಸಾಗಿ ಖುಳ್ಳತನ ಹೋಗಿ ಏಕೋ ನಿಷ್ಟಾಗಿ ನಿಲ್ಲದೇ ವದಗಿ ಸಮದೃಷ್ಟಿ ತೂಗಿ 1 ನಿತ್ಯ ತಿಳಿದು ವಿಚಾರ ಬಲಿದು ಕುತ್ತಾಪಗಳದು ಸತ್ಯಗದಲ್ಲಿದ್ದು ಸತ್ಯಜ್ಞಾನ ಪಡೆದು ಸದ್ಬಾವ ಜಡಿದು ಚಿತ್ತ ಚಂದಲ ಜರಿದು ಮದ ಮತ್ಸರ ಜರೆದು 2 ತನ್ನದಿದಲ್ಲಾ ಸಿರಸೌಖ್ಯವೆಲ್ಲಾ ಇನ್ನು ತಿಳಿಲಿಲ್ಲಾ ಈ ಮರಹು ಸಲ್ಲಾ ಸನ್ನು ತನೆಬಲ್ಲಾ ಈ ಸಾಕಾಯ ವೆಲ್ಲಾ ಮನ್ನಿಸಿ ನೀವೆಲ್ಲಾ ಮಹಿಪತಿ ಜನಸೊಲ್ಲಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಗದುದ್ಧಾರಕ ತನ್ನ ಮಗನೆಂದು ಬಗೆದು |ನಿಗಮಗೋಚರನ ಆಡಿಸಿದಳು ಯಶೋದೆ ಪವಟದೆಲೆಯ ಮೇಲು ಸಂಪುಟದ ಮೇಲೊರಗಿ ಉಂ-ಗುಟವ ಪೀರುವನ-ಆಡಿಸಿದಳು 1ವಿಶ್ವತಶ್ಚಕ್ಷುವ ವಿಶ್ವತೋಮುಖನ |ವಿಶ್ವವ್ಯಾಪಕನ-ಆಡಿಸಿದಳು 2ಅಣೋರಣಿಯನ ಮಹತೋಮಹೀಯನ |ಗಣನೆಯಿಲ್ಲದವನ-ಆಡಿಸಿದಳು 3ನಿಗಮಕೆ ಸಿಲುಕದಅಗಣಿತಮಹಿಮನ |ಮಗುಗಳ ಮಾಣಿಕ್ಯನ-ಆಡಿಸಿದಳು 4ಎಲ್ಲರೊಳು ಭರಿತನಾಗಿ ಇಪ್ಪ ಲಕುಮಿಯ |ವಲ್ಲಭಪುರಂದರವಿಠಲನ-ಆಡಿಸಿದಳು5
--------------
ಪುರಂದರದಾಸರು