ದಾಸರಿಗುಂಟೆ ಭಯಶೋಕ ಪ
ವಾಸುದೇವನ ಸದಾ ಸ್ಮರಿಸುವ ಹರಿ
ದಾಸರಿಗುಂಟೆ ಭಯಶೋಕ ಅ.ಪ.
ಕಾಮಧೇನು ವರ ಕಲ್ಪವೃಕ್ಷ ಚಿಂ
ತಾಮಣಿ ಕೈ ಸೇರಿದಕಿಂತ
ನಾಮತ್ರಯದಿಂದಪ್ಪುದು ಸುಖವು ಸು
ಧಾಮನೆ ಸಾಕ್ಷಿದಕೆಂಬ ಹರಿ 1
ರಾಮಚಂದ್ರ ಶಬರಿ ತಿಂದೆಂಜಲ
ಜಾಮಿಳ ಮಾಡ್ದ ಕುಕರ್ಮಗಳ
ಧೂಮಕೇತು ತಾ ಭುಂಜಿಸುವಂದದಿ
ಮೇಧ್ಯಾಮೇಧ್ಯ ಕೈಗೊಂಬನೆಂಬ ಹರಿ 2
ನೇಮ ಮಂತ್ರ ಜಪ ದೇವತಾರ್ಚನ ಸ
ಕಾಮುಕವಾಗಲು ತ್ಯಜಿಸುತಲಿ
ಧೀಮಂತರಾಗತಿಪ್ರಿಯವಾಗಲು ಬಹು
ತಾಮಸ ಕರ್ಮವ ಮಾಳ್ಪುವೆಂಬ ಹರಿ 3
ಏನು ಮಾಡಿದಪರಾಧವ ಕ್ಷಮಿಸುವ
ಏನು ಕೊಟ್ಟುದನು ಕೈಗೊಂಬ
ಏನು ಬೇಡಿದಿಷ್ಟಾರ್ಥವ ಕೊಡುವ ದ
ಯಾನಿಧಿ ಅನುಪಮನೆಂಬ ಹರಿ 4
ಪ್ರಹ್ಲಾದವರದ ಪ್ರಕಟನಾಗದಲೆ
ಎಲ್ಲರೊಳಿಪ್ಪನು ಪ್ರತಿದಿನದಿ
ಬಲ್ಲಿದವರಿಗೆ ಬಲ್ಲದ ಜಗನ್ನಾಥ
ವಿಠ್ಠಲ ವಿಶ್ವವ್ಯಾಪಕನೆಂಬ ಹರಿ 5