ಒಟ್ಟು 11 ಕಡೆಗಳಲ್ಲಿ , 6 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎತ್ತಣ ಪಯಣವೋ ಕೃಷ್ಣಯ್ಯ ನಿನ ಗಿತ್ತ[ಏನವ]ಸರ ಏಕೋ ರಂಗಯ್ಯ ಪ ಹೆತ್ತತಾಯಿಯ ಮುಂದಾಡದೆ ಇ ನ್ನೆತ್ತ ಯಾರಿಗೆ ಲೀಲೆ ತೋರುವೆ ಅ.ಪ ಗೊಲ್ಲ ಗೋಪಿಯರೆಲ್ಲ ಚೆಲ್ಲಾಟದಿಂದ ನಿನ್ನ ಗಲ್ಲವ ಹಿಡಿದುಕೊಂಡು ಅಲ್ಲಾಡಿಸಿ ಸೊಲ್ಲು ಸೊಲ್ಲಿಗೆ ಮುತ್ತಿಟ್ಟು ನೋಯಿಸಿದರೆಂದು ಬಿಲ್ಲ ಹಬ್ಬವ ನೋಡಲೊಲ್ಲದೆ ಪೋಪೆನೆಂಬೆ 1 ನೂರೆಂಟು ಕನ್ನೆಯರೋರಂತೆ ನಿನ್ನ ಬಳಿ ಸೇರಿರ್ಪುದನು ಕಂಡು ಕಲಹಪ್ರಿಯ ನಾರಿಯೊಬ್ಬಳ ತನಗಾರಿಸಿ ಕುಡಲೆಂದು [ಯಾರಬಳಿ ಮಸಲತ್ತು ಮಾಡಹೊರಟೆಯೊ] 2 ಬಾಲೆ ರುಕ್ಮಿಣಿಯನು ದುರಳಶಿಶು ಪಾಲಂಗೀಯುವರೆಂದು ಪೇಳಿದ್ದೆಯಲ್ತೆ ಬಾಲೆಯ ತರ್ಪೆನೆಂದೇ ಶ್ರೀ ಮಾಂಗಿರಿಯ ರಂಗ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಎತ್ತಣ ಸಂಸ್ಕøತಿ ಎಲ್ಲಿದೀ ಕಾಯಾ ಸುತ್ತಲೂ ಸಂಕಟವೋ ಮತ್ತೆ ವೈರಿಗಳ ಮತ್ತೆರಡುಪಟಳ ಸುತ್ತೆ ಭೀತಿಮಯವೋ ಕೃಷ್ಣಾ ಪ ಸುಂದರ ದೇಹವು ಬಂದುದು ಎಂದಾನಂದ ಭರಿತನಾಗಿ ಬಂಧು ಬಳಗದ ಪೊಂದಿಕೆಯಿಂದಲಿ ಸಂದಣಿ ಹೆಚ್ಚಾಗಿ ಚಂದದ ಮಂದಿರ ಕುಂದದ ಧನ ಸುಖದಿಂದ ಯುಕ್ತನಾಗಿ ಬಂದೆಮದೂತರು ನಿಂದು ಯಳೆಯುವಾಗ ಸುಂದರ ತನುವೆಲ್ಲಿ ಬಂಧು ಬಳಗವೆಲ್ಲಿ 1 ಚತುರ ದೆಶೆಗಳಲಿ ಭರದಿ ಸಾಗುವವು ಗತಿಯ ಅರುಹು ಇಲ್ಲಾ ಚತುರದ ಮೇಲೊಂದತಿ ಕ್ಲೇಶಗಳೀ ದೇಹ ಮುತ್ತಿದವಲ್ಲಾ ಚತುರದೊಳುಣವಂದತಿ ತಾಪಗಳ್ಮಿತಿ ಮೀರಿ ಕಾಡಿದವಲಾ ಚತುರಾನನ ಪಿತ ಗರಿಯಿಲ್ಲದನ್ನ ಹಿತರು ತೋರಲಿಲ್ಲಾ 2 ಪರಿಪರಿ ವಿಷಯಗಳ ಮೆರೆವ ಶಿರಿಯ ಮೇಣರಿವರ್ಗಗಳೆರಗಿ ಹರಿಯ ನೆನೆವ ಮನ ಕರವಳ ಹೊಯ್ದು ಬೆರಸಿ ಕಾಯವ ತೂಗಿ ಮರದ ಮೇಲಿಂದ ಕರಬಿಟ್ಟ ತೆರದಂತೆ ಮೆರೆವ ದೇಹಕೆ ಆಗಿ ಸೊರಗೀ ಕೃಷ್ಣಾ 3
--------------
ನರಸಿಂಹವಿಠಲರು
ಎತ್ತಣದನಿಯಿದು ಎತ್ತಣ ಮಧುರವ ಚಿತ್ತಾಕರ್ಷಕ ಬಾನುಲಿಯೇ ಪ ಮತ್ತ ಭೃಂಗಾಳಿಯ ಝೇಂಕೃತಿ ಶ್ರುತಿಯು ಸುತ್ತ ಮಯೂರದ ನಾಟ್ಯದ ನಲವೋ ಅ.ಪ ಏಣಲೋಚನೆಯರ ಕಾಂಚನ ಕಿರುಗೆಜ್ಜೆ ವೀಣಾನಾದವ ಅಣಕಿಪುದು ತಾಣವದೆಲ್ಲಿಯೋ ಕಾಣಿರೆ ಸಖಿಯರೇ ವೇಣು ಗೋಪಾಲನ ನಾಟ್ಯವಿದಲ್ತೇ 1 ಅಲ್ಲಿ ನೋಡೇ ತಂಗಿ ಬಾನೆಡೆಯಿಂದಲಿ ಮಲ್ಲಿಗೆ ಪೂಮಳೆ ಸುರಿಯುತಿದೆ ನಲ್ಲೆಯರಿಂಚರ ಸರಿಗಮಪದನಿಯು ಎಲ್ಲ ರಾಗಗಳಲಿ ನಲಿಯುತಲಿಹುದು 2 ಅಂಗನೆಯರೆ ನಮ್ಮ ಗೆಜ್ಜೆಯ ಝಣರವ ಮಂಗಳಗಾನಕೆ ಇಂಬಿರಲಿ ಹೊಂಗೊಳಲೂದುವ ಚಿನ್ಮಯ ಮಾಂಗಿರಿ ರಂಗನ ದರ್ಶನ ಮಾಡುವ ಬನ್ನಿ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕೂಗಿದರು ಧ್ವನಿ ಕೇಳದೆ ಶಿರ | ಬಾಗಿದರು ದಯ ಬಾರದೆ ಪ ಭೋಗಿಶಯನ ಭುವನಾಧಿಪತೇ ನಿನ್ನ | ಆಗಮನವೆಂದಿಗೆ ಆಗುವುದು ಪ್ರಭೊಅ.ಪ ಖರೆ ಎ| ನ್ನತ್ತ ನೋಡುವುದು ದೊರೆ || ಪರಾಕು ಮಹಾಪ್ರಭು | ಎತ್ತಣ ರಥವನು ಎತ್ತಿ ಬಾ ನೀಡು ದೊರೆ1 ಸಿರಿ | ಮಂದಿರ ಭಕ್ತ ಕುಟುಂಬಧರ || ಸುಂದರ ಮೂರುತಿ ಒಂದಿನ ಸ್ವಪ್ನದಿ | ಬಂದು ಪದದ್ವಯ ಚಂದದಿ ತೋರಿಸೊ2 ಕರುಣಾ ಶರಧಿಯು ನೀನಲ್ಲವೇ ಕೃಷ್ಣ | ಶರಣಾಗತರಿಗೆ ದೊರೆಯಲ್ಲವೆ || ಮೊರೆಹೊಕ್ಕವರಿಗೆ ಮರೆಯಾಗುವರೆ | ಸರಿಯೆ ಜಗದೊಳು ವಿಜಯವಿಠ್ಠಲರೇಯಾ 3
--------------
ವಿಜಯದಾಸ
ನರಕ ಎತ್ತಣದೋ ನರಕ ಎತ್ತಣದೋ ನರ ಕಂಠೀರವನೆಂದು ಸ್ಮರಿಸುವ ಜನರಿಗೆ ಪ ಸ್ನಾನ ಮಾಡುವುದೇಕೆ ಧ್ಯಾನಗೈಯುವುದೇಕೆ ದಾನ ಧರ್ಮಂಗಳು ಮಾಡಲೇಕೆ ಶ್ರೀ ನಾರಾಯಣನೆಂದು ಆವಾಗಲೂ ಜಿಹ್ವೆ ತ್ರಾಣದಲಿ ಬಿಡದೆ ಎಣಿಸುವ ಜನರಿಗೆ1 ತೀರ್ಥ ಮೀಯುವದೇಕೆ ಯಾತ್ರೆ ಚರಿಪದೇಕೆ ಸ್ತೋತ್ರ ಮಂತ್ರಾದಿಗಳು ಪಠಿಸಲೇಕೆ ಚಿತ್ರಮಹಿಮ ನೀಲಗಾತ್ರನ್ನ ಚರಿತೆ ಕಾ ಲತ್ರಯ ಬಿಡದೆ ಉಚ್ಚರಿಸುವ ಜನರಿಗೆ 2 ದೀಪ ಧೂಪಗಳೇಕೆ ನಾನಾ ಪರಿಯಲ್ಲಿ ಸೋಪಸ್ಕರದ ಎಡೆ ಇಡಲೇತಕೆ ಅಪಾರ ಮಹಿಮ ಅನಾಥರೊಡೆಯ ರಂಗ ಶ್ರೀಪತಿ ಎಂದೀಗ ಸ್ಮರಿಸುವ ಜನರಿಗೆ 3 ಭೂತದಯಗಳೇಕೆ ನೀತಿ ಎಂಬುದು ಏಕೆ ಜಾತವೇದಸನಲ್ಲಿ ಕಳವಳವೇಕೆ ಪಿನಾಕಿ ಸಖನೆಂದು ಮಾತು ಮಾತಿಗೆ ನೆನೆದು ಸುಖಿಸುವ ಜನರಿಗೆ 4 ಏನೇನು ಕರ್ಮದಾಚರಣೆ ಮಾಡುವದೇಕೆ ಭಾನು ಉದಯವಿಡಿದು ತೊಳಲಲೇಕೆ ದೀನನಾಗಿ ದಾತಾ ವಿಜಯವಿಠ್ಠಲ ಹರಿಯ ಮಾನಸದಲಿ ಧ್ಯಾನ ಮಾಡುವ ಜನರಿಗೆ 5
--------------
ವಿಜಯದಾಸ
ಪುರಂದರ ದಾಸರಾಯರ ಪೋಷಿಸುವ ಸಂತೋಷದಿಂದಲಿ ಪ ಪುರಂದರಗಡಾದ ಒಳಗೆ ಹಿರಿಯ ಸಾವುಕಾರನೆನಸಿ ಪರಿಪರಿಯ ಸೌಖ್ಯಗಳ ಸುರಿಸುತ್ತ ಇರುತಿರಲು ನರಹರಿ ತ್ವರಿತದಿಂ ಬ್ರಾಹ್ಮಣನಾಗುತ್ತ ಪೋಗುತ್ತ ಯಜಮಾನ ಕಂಡು ಜರಿದು ಬ್ರಾಹ್ಮಣನ್ಹೊರಗೆ ಹಾಕಲು ಮರುದಿವಸ ಮತ್ಹೋಗಿ ನಿಂತ 1 ಭಾರಿಭಾರಿಗೆ ಸಾವುಕಾರನ ಮೋರೆಗ್ಹೊತ್ತಿ ಮೇರೆಯಿಲ್ಲದೆ ಆರು ತಿಂಗಳು ಬೆನ್ನು ಬೀಳುತ್ತ ನಾಯಕರು ಈತನ ಆರು ಅಟ್ಯಾರೆಂದು ಬೈಯುತ್ತ ಬೇಸತ್ತು ಎರಡು ಹೇರು ರೊಕ್ಕಾ ಮುಂದೆ ಸುರಿಯುತ್ತ ಅದರೊಳಗೊಂದು ಡ್ಡಾರಿಸಿಕೋ ಎಂದು ಹೇಳಲು ನಾರಾಯಣ ಬಿಟ್ಹೋದ ನಗುತ2 ಹಿತ್ತಲಾ ಬಾಗಿಲಿಗೆ ಹೋಗಿ ಮತ್ತೆ ಆತನ ಮಡದಿಗಾಗಿ ವಿತ್ತ ತಾ ಯೆನುತ ತನ ಮಗನ ಮುಂಜ್ಯೆಂ ದೆತ್ತಿ ಕರದಿಂ ಬಾಯಿ ತೆರೆಯುತ್ತ ಆ ಪ್ರಾಣಿ ನುಡಿದಳು ಎತ್ತಣ ದ್ರವ್ಯವು ತನಗೆನುತ ನಿನ್ನ ಮೂಗಿನ ಮುತ್ತಿನ ಮೂಗುತಿಯ ಕೊಡು ಎನೆ ಉತ್ತುಮಳು ತೆಗೆದಿತ್ತಳಾಕ್ಷಣ 3 ಆಕಿ ಗಂಡನ ಕಣ್ಣೆದುರಿಗೆ ಹಾಕಿದನು ತಾ ಪಾಕಿ ಕೊಡೆಯೆನುತ ಅದು ಕಂಡು ಇದು ನ ಮ್ಮಾಕಿದೆಂದು ಈತ ನುಡಿಯುತ್ತ ಅನ್ಯರದು ಯಿಂಥಾ ದ್ಯಾಕೆ ಯಿರಬಾರದೆನ್ನುತ್ತಾ ಬೆಲೆ ಹೇಳು ಎನಲು ಎಂದಾಕೆ ಹೋದನು ತಿರೂಗಿ ಬಾರದೆ 4 ತಿರುಗಿ ಬ್ರಾಹ್ಮಣ ಬಾರದಿರಲು ಕರೆದು ತನ್ನ ಹೆಂಡತಿಯ ಬರಿಯ ನಾಶಿಕವನ್ನೆ ಕಂಡುನು ಮೂಗುತಿಯ ಎಲ್ಲೆನೆ ಮುರಿದಿಹುದು ಯೆಂದಾಕೆ ಹೇಳಲು ಒಳಗ್ಹೋಗಿ ನೀ ತಾರದಿರೆ ಅರೆವೆ ನಿನ್ನಯ ಜೀವವೆಂದನು ವಿಷಕೊಂಬೆನೆಂದು ಕರದಿ ಬಟ್ಟಲು ಧರಿಸಲಾಕ್ಷಣ ತ್ವರಿತದಲಿ ಹರಿ ಅದರೊಳಾಕಿದ 5 ಪುರುಷನಾ ಕೈಕೊಳಗೆಯಿಡಲು ತರಿಸಿ ತನ್ನಲ್ಲಿದ್ದ ಪೆಟ್ಟಿಗೆಯಾ ಅದು ಕಾಣದಿರಲು ಬೆರಗಾಗಿ ನೋಡಿದನು ಮಡದಿಯ ನಿಜ ಪೇಳುಯೆನಲು ಅರಸಿ ಪೇಳ್ದಳು ಕೊಟ್ಟ ಸುದ್ದಿಯಾ ಅಭಿಮಾನಕಂಜಿ ಅರದು ವಿಷವನು ಕುಡಿವೆನಲು ಸಿರಿರಮಣಾ ಕೊಟ್ಟ ಖರಿಯಾ 6 ಬಂದಿದ್ದ ಪರಿಪಕ್ವವೆನಗೆ ನ್ನಾವ ಕಾಲಕೆ ಆಗಬೇಕೆಂದ ವೈರಾಗ್ಯಭಾವದಿ ಜೀವಿಸಿಕೊಂಡಿರುವುದೇ ಛಂದ ಹೀಗೆನುತ ಮನೆ ಧನ ಕೋವಿದರ ಕರೆದಿತ್ತ ಹರುಷದಿ ಕಾವನಯ್ಯನ ದಾಸನಾದ 7 ಲಕ್ಷ್ಮಿಪತಿಯ ಪಾದದಲ್ಲಿ ಲಕ್ಷ್ಯವಿಟ್ಟು ವ್ಯಾಸರಾಯರ ಶಿಕ್ಷೆಯಿಂದಲಿ ಅಂಕಿತವ ಕೊಳುತ ತಿರಿಪಾದ ಐದು ಲಕ್ಷಪದ ಸುಳಾದಿ ಪೇಳುತ್ತ ಪ್ರತಿದಿವಸದಲ್ಲು ಅಪರೋಕ್ಷ ಪುಟ್ಟಲು ಮೋಕ್ಷಸ್ಥಾನಕ್ಕೆ ಕರೆದೊಯ್ದು ಅ ಧೋಕ್ಷಜನು ಸಂರಕ್ಷಿಸಿದ 8 ಘೊರ ನರಕದೊಳಗೆ ಬಿದ್ದಾ ಪಾರ ಜನರು ಚೀರುತಿರಲು ದ್ಧಾರ ಮಾಡಿದ ನಾರದಾರಿವರು ಅವ ತಾರ ಮಾಡಿ ಧಾರುಣಿಯಲಿ ಮತ್ತೆ ಬಂದರು ಸರುವೋತ್ತಮ ಹರಿ ನಾರಾಯಣನೆ ಎಂದು ಸಾರಿದರು ಹೀಗೆಂದು ತಿಳಿಯಲು ಮಾರ ಜನಕ ವಿಜಯವಿಠ್ಠಲ ಆರಿಗಾದರು ಒಲಿವ ಕಾಣಿರೊ 9
--------------
ವಿಜಯದಾಸ
ಭಯ ನಿವಾರಣ ಸುಳಾದಿ ನಾಕೇಶ ದೇವತತಿ ಆ ಕಮಲನಾಭ ಯತಿ ನಿಕರಗೊಲಿದನೆ ಶ್ರೀಕರವದನ ಸರ್ವಲೋಕಕಧಿಪ ಕೃಪಾ- ಲೋಕನದಲಿ ನೋಡಿ ಸುಖತೀರ್ಥನುತ ಚರಣ ವ್ಯಾಕುಲ ಬಿಡಿಸಿ ನಿನ್ನಾನೇಕ ಮಹಿಮೆ ತಿಳಿಸಿ ಜೋಕೆಯಿಂ ಕಾಯ್ದ ಗುರು ಆಕಾರಂತರ್ಯಾಮಿ ಈ ಕಾಲದಲಿ ಮನ ವ್ಯಾಕುಲಪಡಿಸುವ ಕಾಕು ಭಯವ ಬಿಡಿಸಿ ನೀ ಕಾಯಬೇಕೊ ದೇವ ಲೋಕ ಲೋಕಾದಿಗಳ ಸಾಕುವ ಭಾರಕರ್ತ ಆ ಕಮಲಭವನಭಯ ವ್ಯಾಕುಲ ಬಿಡಿಸಿದೆ ಲೋಕ ಸೃಷ್ಟಿಪ ಶಕ್ತಿ ಏಕಚಿತ್ತವ ಕೊಟ್ಟು ಲೋಕಲೋಕಾಧಿಪರ ನೀ ಕಾಯ್ದೆ ಕರುಣದಿ ಲೋಕವೆಲ್ಲವ ಕೊನೆಗೆ ಏಕಾಪೋಶನಗೈವ ಲೋಕಪತಿಯೆ ಭಕ್ತಾನೀಕಕÀಭಯದಾತ ಭೀಕರ ಬೆನ್ಹತ್ತಿ ತಾಕಿದ ಮನಸಿನ ವ್ಯಾಕುಲ ಭಯಬಿಡಿಸಿ ಜೋಕೆಯಿಂದಲಿ ಕಾಯೊ ಗೋಕುಲಾಂಬುಧಿ ಚಂದ್ರ ಗೋಪಾಲಕೃಷ್ಣವಿಠ್ಠಲ ಈ ಕಾಲಕೊದಗೆ ನಿನ್ನಾನೇಕ ಕೀರ್ತಿಯು ನಿಜವೋ 1 ಭಯ ನಿವಾರಕದೇವ ಭಕ್ತವತ್ಸಲ ನೀನೆ ದಯಮಾಡು ಮನಸಿನಲಿ ತಗುಲಿದ ಭಯವನೆ ಬಿಡಿಸಿ ಭಯಪಡಿಸುತಿರೆ ಖಳನು ಬಾಲಕನ ಪ್ರತಿದಿನದಿ ನಯವಿನಯದಿ ಕಂದ ನಿನ್ನನು ಮೊರೆಯಿಡೆ ಕೇಳಿ ದಯಮಾಡುತ ತರಳನಲಿ ಕನಲುತ ದೈತ್ಯನ ಕೊಂದು ಭಯ ಬಿಡಿಸಿದೆ ಬಾಲಕಗೆ ಭಕ್ತವತ್ಸಲ ನೃಹರೆ ಅಯೋನಿಜೆ ದ್ರೌಪದಿಗೊದಗಿದ ಅನುತಾಪಗಳನೆಲ್ಲ ದಯದಲ್ಲಿ ಪರಿಹರಿಸಿದ ಆಪದ್ಭಾಂಧವ ಸ್ವಾಮಿ ಭಯಪಡಿಸುತ ಭಸ್ಮಾಸುರ ಮೃತ್ಯುವಿನಂದದಿ ಮೃತ್ಯುಂ ಜಯನನು ಬೆನ್ನಟ್ಟಿ ಬರೆ ಹರನು ನಿನ್ನನು ಮೊರೆಹೋಗಲು ಸಂತೈಸಿ ತರುಣಿಯ ರೂಪದಿ ಖಳನ ಕೈಯಿಂದಲೆ ಅವನ ಶಿರ ಉರಿಸುತ ಶಿವನನು ಪೊರೆದೆ ಭಯಹಾರಕ ನರಹರೆ ಶ್ರೀ ಗೋಪಾಲಕೃಷ್ಣವಿಠ್ಠಲ ಜಯವಲ್ಲದೆ ದಾಸರಿಗೆ ಭಯವುಂಟೆ ಪೇಳೋ 2 ನಿತ್ಯ ನಿನ್ನನು ನಂಬಿ ಚಿತ್ತದಿ ನೆನೆವಂಥ ಆಪ್ತವರ್ಗಕೆ ಇನ್ನು ಮೃತ್ಯು ಭಯವು ಉಂಟಿ ಆಪ್ತನಲ್ಲವೆ ನೀನು ಚಿತ್ತಕಂಟಿದ ಭಯ ಮೃತ್ಯು ಪರಿಹರಿಸೈಯ್ಯ ಎತ್ತ ನೋಡಲು ನಿನ್ನ ವ್ಯಾಪ್ತಿ ಸುತ್ತಿರೆ ಜಗದಿ ಮೃತ್ಯುವೆತ್ತಣದೊ ನಿನ್ನುತ್ತಮ ಭಕ್ತರಿಗೆ ಇತ್ತ ದೇಹವು ನಿಂದು ಚಿತ್ತಾದಿಂದ್ರಿಯ ನಿಂದು ನಿತ್ಯ ನಡೆವ ಜೀವಕೃತ್ಯವು ನಿನದೈಯ್ಯ ಸುತ್ತುವೊ ಗ್ರಹಗತಿ ಮೃತ್ಯು ಪರಿವಾರವೆಲ್ಲ ಭೃತ್ಯರಲ್ಲವೆ ನಿನ್ನ ಚಿತ್ತಕ್ಕೆದುರಾಗುವರೆ ಭೃತ್ಯತ್ವದಲ್ಲಿರೆ ಎತ್ತಣ ಭಯವೈಯ್ಯ ಹತ್ತಿಕಾಡುವ ದುಷ್ಟಗ್ರಹಗಳ ಕಡೆಗೆ ನೂಕಿ ಚಿತ್ತ ನಿರ್ಮಲವಿತ್ತು ಮತ್ತೆ ಮಂಗಳವಿತ್ತು ನಿತ್ಯ ಕಾಯಲಿಬೇಕೊ ನಿನ್ನ ಸೇವೆಯನಿತ್ತು ಮೃತ್ಯು ಮೃತ್ಯುವೆ ಮಹಾದೈತ್ಯ ಸಂಹರಣನೆ ಚಿತ್ತದಲ್ಲಿ ನೀನು ಆಪ್ತನಾಗಿರೆ ಬೇರೆ ಹತ್ತಿಕಾಡುವ ಗ್ರಹ ಹತ್ತಿರ ಬರಲುಂಟೆ ಸಿರಿ ಗೋಪಾಲಕೃಷ್ಣವಿಠ್ಠಲ ಹತ್ತಿದ ಮೃತ್ಯು ಭಯ ಕಿತ್ತಿ ಬಿಸುಟು ಕಾಯೊ 3 ವಾಸುದೇವನೆ ನಿನ್ನ ದಾಸನ ಕಾಯುವಂಥ ಈಶನಲ್ಲವೆ ಜೀವರಾಶಿಗಳಿಗೆ ಬಿಂಬ ಸುಷುಪ್ತಿಯಲ್ಲಿ ಕಾವ ಆತ್ಮ ಆನಂದರೂಪ ತಾಸು ತಾಸಿಗೆ ಬಂದ ಭಯವ ಬಿಡಿಸುವದರಿದೆ ದಾಶರಥಿಯೆ ನಿನ್ನ ಅನುಜನ ಜೀವಭಯ ದಾಸ ಹನುಮನಿಂದ ಗಿರಿತರಿಸಿ ಹರಿಸಿದೆ ಆ ಸುಗ್ರೀವನ ಮೊರೆ ಕೇಳಿ ಅಭಯವಿತ್ತು ತೋಷದಿಂದಲಿ ಒಲಿದು ರಾಜ್ಯ ಸುಖವನಿತ್ತೆ ವಾಸವ ಮೊರೆಯಿಡೆ ಒಲಿದು ಅಮೃತವಿತ್ತು ಘಾಸಿಗೊಳಿಪ ಮೃತ್ಯುದೈತ್ಯರ ಸದೆಬಡಿದೆ ನಾಶರಹಿತ ನೃಹರಿ ಗೋಪಾಲಕೃಷ್ಣವಿಠ್ಠಲ ನಾಶದ ಭಯ ಉಂಟೆ ನಿನ್ನ ನಂಬಿದವರಿಗೆ 4 ತರಳತ್ವದಲಿ ಭಯವು ವರ ಯೌವ್ವನದಲಿ ಭಯವು ಜರೆ ಮರಣದಲಿ ಭಯವು ಪರಿಪರಿ ರೋಗದ ಭಯವು ಆರೆಘಳಿಗೆಯು ಬರದಂತೆ ಹರಿ ನೀ ಪರಿಹರಿಸುತಲಿ ಪರತರ ನಿನ್ನಯ ಮಂಗಳ ಚರಿತೆಯ ಸ್ಮರಣೆಯನಿತ್ತು ಹರಿಭಕ್ತರ ಕಾಯುವುದು ಬಿರುದಲ್ಲವೆ ನಿನಗಿನ್ನು ಪರಿಪರಿ ಭಯ ಕ್ಲೇಶಗಳ ಪರಿಹರ ಮಾಡುತ ಕಾಯೊ ವರಯಂತ್ರ ಮಂತ್ರಗಳು ಪರಿಪರಿ ಜಪ ಹೋಮಗಳು ತರತರದೌಷಧ ಪಥ್ಯ ನರಹರಿ ಎಲ್ಲವು ನೀನೆ ಹೊರಗೊಳಗೆಡಬಲದಲ್ಲಿ | ಮರೆವು ಸ್ಮರಣೆಗಳಲ್ಲಿ ಪರಿಪರಿ ಕ್ರೀಡೆಗಳಲ್ಲಿ ಚರಿಸುವ ಕರ್ಮಗಳಲ್ಲಿ ನೆರೆದಿಹ ಜನವೃಂದದಲಿ ಹಗಲಿರುಳು ಸಂಧಿಯಲಿ ಪರಿಪರಿ ಕಾಲಗಳಲ್ಲಿ ಪರಿಪರಿ ದೇಶಗಳಲ್ಲಿ ನರಹರಿ ದುರ್ಗಾಸಹಿತ ವರ ಮೃತ್ಯುಂಜಯ ವರದ ಸಿರಿಭಾರತಿಪತಿಸಹಿತ ಚರಿಸುತ ಬೆಂಬಿಡದಲೆ ನೀ ನಿರುತದಿ ಕಾಯಲಿಬೇಕೊ ಬರಿದನು ಮಾಡದೆ ಸ್ತುತಿಯ ವರ ಸುದರ್ಶನ ಪಾಂಚಜನ್ಯ ಪದ್ಮವ ಪಿಡಿದ ಪರಮ ಮಂಗಳರೂಪ ದೈತ್ಯರಿಗತಿ ಘೋರ ಗುರುಬಿಂಬನೆ ನೀನೆಂದು ಪರಿಪರಿ ಪ್ರಾರ್ಥಿಪೆನಿನ್ನು ಕೊರಗಿಸದಲೆ ಮನವನ್ನು ಹರಿ ಸೌಭಾಗ್ಯವನಿತ್ತು ಕರೆಕರೆಗೊಳಿಸದೆ ಕಾಯೊ ಕರುಣಾಬ್ಧಿಯೆ ದಾಸರನು ವರಭಾಗ್ಯವು ಆಯಸ್ಸು ಆರೋಗ್ಯಂಗಳೂ ಎಲ್ಲ ನಿರುತವಿರಲಿ ಬೇಕೊ ನಿನ್ನವರಿಗೆ ಸಾಧನಕೆ ಕರುಣಾಕರ ಗೋಪಾಲಕೃಷ್ಣವಿಠ್ಠಲ ನಿನ್ನ ಸ್ಮರಿಸಿದ ಮಾತ್ರದಿ ಸಕಲ ಭಯ ಪರಿಹಾರಕವೋ 5 ಜತೆ ನಿತ್ಯ ಮಂಗಳ ನಿನ್ನ ಸ್ಮರಿಪರ ಮನದ ಭಯವ ಕಿತ್ತು ಬಿಸುಟು ಸಲಹೋ ಗೋಪಾಲವಿಠ್ಠಲ
--------------
ಅಂಬಾಬಾಯಿ
ಕ್ಷೀರಸಾಗರದಲೆರಡೀರೈದು ಯೋಜನದ |ಮೇರೆಯಲಿ ವರತ್ರಿಕೂಟಾದ್ರಿ ಶೃಂಗತ್ರಯದಿ |ರಾರಾಜಿಸುವ ತಾಮ್ರ-ರಜತ-ಕಾಂಚನದಿಂದನಾರಾಯಣಾಂಶದಿಂದ ||ಪಾರಿಜಾತಾಂಭೋಜ ಬಕುಳ ಮಲ್ಲಿಗೆ ಜಾಜಿ |ಸೌರಭದಲಶ್ವತ್ಥಪೂಗಪುನ್ನಾಗಜಂ |ಬೀರತರುಗುಲ್ಮಶಾಖಾಮೃಗಗಳೆಸೆವಲ್ಲಿವಾರಣೀಂದ್ರನು ಮೆರೆದನು 2ಆನೆ ಹೆಣ್ಣಾನೆ ಮರಿಯಾನೆಗಳ ಸಹಿತಲ್ಲಿ |ಕಾನನದಿ ತೊಳಲುತ್ತ ಬೇಸಗೆಯ ಬಿಸಿಲಲ್ಲಿ |ತಾನು ನೀರಡಿಸಿ ಬಂದೊಂದು ಸರಸಿಯ ತಟಕೆಪಾನಾಭಿಲಾಷೆಯಿಂದ ||ನಾನಾಪ್ರಕಾರದಿಂ ಜಲಕ್ರೀಡೆಯಾಡುತಿರ |ಲೇನಿದೆತ್ತಣ ರಭಸವೆಂದುಗ್ರಕೋಪದಿಂ |ಒತ್ತಿ ಪಿಡಿದೆಳೆಯುತಿರೆ ಎತ್ತಣದಿನೇನೆನುತ |ಮತ್ತಇಭರಾಜನೌಡೊತ್ತಿ ನೋಡುತ್ತಂಘ್ರಿ |ಎತ್ತಿ ತಂದನು ತಡಿಗೆ ಮತ್ತೆ ನಡುಮಡುವಿನೊಳುಅತ್ತಲೇ ತಿರುಗೆನೆಗಳೆ||ಇತ್ತಂಡದಿಂತು ಕಾದಿದರು ಸಾವಿರ ವರುಷ |ಉತ್ತರಿಸಿತೇನೆಂಬೆ ಮತ್ತಾ ಗಜೇದ್ರಂಗೆ |ಸತ್ತ್ವ ತಗ್ಗಿತು ತನ್ನ ಮನದೊಳಗೆ ಚಿಂತಿಸಿತುಮತ್ತಾರು ಗತಿಯೆನುತಲಿ 4ಬಂದುದಾ ಸಮಯದಲಿ ಹಿಂದೆ ಮಾಡಿದ ಪುಣ್ಯ |ದಿಂದ ದಿವ್ಯಜಾÕನ ಕಣ್ದೆರೆದು ಮನದೊಳರ |ವಿಂದನಾಭಾಚ್ಯುತ ಮುಕುಂದಮಾಧವಕೃಷ್ಣನಿಖಿಲ ಮುನಿವೃಂದವಂದ್ಯ ||ಇಂದಿರಾರಮಣ ಗೋವಿಂದ ಕೇಶವ ಭಕ್ತ |ಬಂಧು ಕರುಣಾಸಿಂಧು ತಂದೆ ನೀ ಗತಿಯೆನಗೆ |ಇಂದುಸಿಲ್ಕಿದೆನು ಬಲು ದಂದುಗದಮಾಯಾಪ್ರ-ಬಂಧಕನೆ ನೆಗಳಿನಿಂದ 5ಪರಮಾತ್ಮ ಪರಮೇಶ ಪರತತ್ತ್ವ ಪರಿಪೂಜ್ಯ |ಪರತರ ಪರಂಜೋತಿಪರಮಪಾವನಮೂರ್ತಿ |ಪರಮೇಷ್ಟಿಪರಬ್ರಹ್ಮಪರಮಪರಮಾಕಾಶ |ಪರಿಪೂರ್ಣ ಪರಮಪುರುಷ ||ನಿರುಪಮ ನಿಜಾನಂದ ನಿರ್ಲಯ ನಿರಾಕಾರ |ನಿರವಧಿಕನಿರ್ಗುಣನಿರಂಜನನಿರಾಧಾರ |ನಿರವದ್ಯನಿಸ್ಸಂಗ ನಿಶ್ಚಿಂತ ನಿಖಿಲೇಶಇರದೆ ನೀ ಸಲಹೆಂದನು 6ಇಂತೆನುತ ಮೂಚ್ರ್ಛೆಯಲಿ ಗುಪ್ತಕಂಠಸ್ವರದ |ಕಾಂತ ನಡುನೀರೊಳಗೆ ತೇಲಿ ಮುಳುಗುತಲಿರೆ ಅ- |ನೆಗಳ ಬಾಯನು ಚಕ್ರದಲಿ ಸೀಳಿ ಕರಿವರದ |ಒಗುವ ಕರಣದಲಿ ಮೈದಡಹಲ್ಕೆ ಗಜಜನ್ಮ |ತೆಗೆದುದಾಕ್ಷಣಕೆ ಮಣಿಮುಕುಟ - ಕುಂಡಲದಿಂದನಗಧರನು ಓಲೈಸಿದ ||ವಿಗಡದೇವಲ ಮುನಿಯ ಶಾಪದಲಿ ದಾರುಣಿಯೊ- |ಳಗೆ ನಕ್ರನಾಗಿ ಹೂಹೂ ಎಂಬ ಗಂಧರ್ವ |ಮಗುಳಿಪುರವನು ಕಂಡು ನಿಜಗತಿಗೆ ಐದಿದಿನುಕಮಲಾಕ್ಷಮಿಗೆ ಮೆರೆದನು 8ಮಣಿಮುಕುಟಕುಂಡಲಪದಕಹಾರ ಕಡಗಕಂ- |ಕಣ ಕೌಸ್ತು ಭೊಜ್ವ ್ಜಲಾಂಗದವೈಜಯಂತಿಭೂ- |ಷಣ ಶಂಖ-ಚಕ್ರ-ಗದೆ-ಪದ್ಮ ಧರಿಸಿಹಹಸ್ತಪಣಿಯ ಕಸ್ತುರಿ ತಿಲಕದಾ ||ಝಣಝಣಿಪ ನೂಪುರದ ದಂತಪಂಕ್ತಿಯ ಕೃಪೇ- |ಕ್ಷಣದ ಸಿರಿಮೊಗದ ಪೀತಾಂಬರದ ಮೂರುತಿಗೆ |ಮಣಿದು ಜಂiÀi ಜಯಜಯಾಎಂಬ ಸುರನರರಸಂ- |ದಣಿಯಿಂದೆಹರಿಮೆರೆದನು 9ಹರಹರಿಎನುತ್ತಂಘ್ರಿಗೆರಗಲಿಭವರನನಾ- |ದರದಿಂದಲೆತ್ತುತಲಿ ಕೇಳ್ಮಗನೆ ನೀನೆನ್ನ |ವಿರಜಶರಪರಿಧಿಯಾ ಸರವನಹಿಪತಿಯನ್ನುಪರಜನ್ಮನೀ ಲಕುಮಿಯ ||ಪರಮೇಷ್ಟಿ-ಭವರ ಮನು-ಮುನಿಗಳನು ಧರಣಿಯನು |ಆವಾವನಿದನುದಯದಲ್ಲೆದ್ದು ಭಕ್ತಿಯಲಿ |ಭಾವಶುದ್ಧಿಯಲಿ ತಾ ಹೇಳಿಕೊಳುವನೊ ಅವನ- |ಘಾವಳಿಯ ಪರಿಹರಿಸಿ ಸುಙ್ಞÕನವೀವೆ ದೇ-ಹಾವಸಾನದಲೆನುತಲಿ ||ಶ್ರೀವಾಸುದೇವನಾಜಾÕನೆಸಿ ಗಜೇಂದ್ರ ಸಹಿ- |ತಾವಿಹಂಗಾಧಿಪನನೇರಿ ವೈಕುಂಠಕ್ಕೆ |ದೇವ ಬಿಜಯಂಗೈದಪುರಂದರವಿಠಲನ
--------------
ಪುರಂದರದಾಸರು
ಸಿಕ್ಕಿದೆ ಬಾರೆಲೆ ಹೇ ಕಳ್ಳಾ ನಿನ್ನಚೊಕ್ಕ ಸಹಸಾ ಜರಿವವಳಲ್ಲಭಕುತೀಲೆ ಕಟ್ಟುವೆ ಈರಡಿಯ ನಡೆಅಕ್ಕ ಗೋಪಮ್ಮನಿದ್ದೆಡೆಯ ಪ.ಮುನ್ನಿನಪರಾಧಗಳ ತಾಳ್ದೆ ನಾನಿನ್ನ ದಿಟ್ಟತನ ಬಲವರಿದೆಚಿನ್ನನೆನಬಹುದೇನೊ ನಿನಗೆ ದಿಟ್ಟಗಣ್ಣವ್ಹರಿದೆಮ್ಮಯ ಮೊಲೆಗೆಉನ್ನತ ಗೋಡೆಗೆ ನಿಚ್ಚಣಿಕೆಯಿಕ್ಕದೆ ಪಾರಿದೆಘನ್ನ ಪಾಲು ಮೊಸರ ಗೋಪರೊಡನೆ ಸವಿದೆಉನ್ನತ ಮಹಿಮೆಯೆತ್ತ ಘನ್ನಜಾರತನಯೆತ್ತಬೆನ್ನ ಬಡಿಯುತ ನಗೆ ಬಿಡದಿಹ ಕಳ್ಳಾ 1ಹರಿಮಧ್ಯದಬಲೆಯರೆಳೆದೆ ಪಂಚಶರನ ಭರಕೆ ಮತಿಗಳೆದೆಹರವಿ ತುಪ್ಪಾದರೆ ನೆಗೆದೆ ಈಗಕರೆದರೆ ಬರಲೊಲ್ಲೆ ನಗದೆಚೋರತನವೇಕೆ ಗಂಭೀರತನವೇಕೆಪರಿಪರಿಹಲವಂಗವೇಕೆ ವರಕರುಣೇಕೆಸಿರಿಕಾಂತನಹದೆತ್ತ ದುರುಳತನಗಳೆತ್ತಕ್ರೂರಮುಖಕಂಜಿದಡೆ ಬಿರುದು ಪೋಯಿತಲಾ 2ತೊಂಡಮಕ್ಕಳ ಬಲವ ನೋಡಿದೆ ಬಲುಪುಂಡನಂತೆ ಕದನವನಾಡಿದೆಭಂಡತನದಲೊಬ್ಬನ ಬಡಿದೆ ದೊಡ್ಡಗಂಡಸಿನಂದದಿ ಮೇಲೋಡಿದೆಗಂಡನುಳ್ಳ ಬಾಲೆಯರ ಸದನಕೆ ಗಮಿಸಿ ಪ್ರಚಂಡತನದಿ ಮಿಂಡವೆಣ್ಣುಗಳ ಪಿಡಿದೆತಂಡ ತಂಡದೊಳು ಮುದ್ದುಕೊಡಲೀಸದಿರರು ಬೊಮ್ಮಾಂಡ ಪತಿಯಾದರಿದು ಸಲುವುದೆ ಕಳ್ಳಾ 3ಉತ್ತಮ ಮರ ನೆರಳ ನೋಡಿದೆ ಮರಹತ್ತುತಲೆ ಚಂಡನೀಡಾಡಿದೆಸುತ್ತಲಿಹ ಗೋವರ ಬೇಡಿದೆ ಅವರೆತ್ತಿ ಕೊಡದಿರೆ ಹಗೆವಿಡಿದೆಮತ್ತಮಾವನ್ನೊತ್ತಿ ಮುದುಮುತ್ತನ ಕೈವಿಡಿದೆಕತ್ತಲೆ ಹಕ್ಕಿಯ ಮಾಡಿ ದಿತಿಜರನರಿದೆಎತ್ತಣ ವೈಕುಂಠ ನಿನಗೆತ್ತಣನಂತಾಸನವೊಭಕ್ತರ ಕಾಯ್ದೆ ಆವಪಟ್ಟಲಿಹೆ ಕಳ್ಳಾ 4ಪೊಂದೊಡಿಗೆ ತೊಡದೆ ನಡುವಿರುಳೆ ಬರೆಕುಂದದೆ ವ್ರತಗೆಟ್ಟ ತರಳೆಛಂದವೇನೊ ನಿನಗೀವಾಜರೆಲೆ ಗೋವಿಂದೆರಡು ಕೈಕಟ್ಟಿ ತೋರಲೆಒಂದೊಂದುಸುರಲಿ ನಿನ್ನ ಗುಣಮಾಣಿಕದಖಣಿಅಂಧರಿಗರಿವುದೆ ಪ್ರಸನ್ವೆಂಕಟೇಶಮಂದರಘ ರಂಧ್ರಾವಳಿ ಪೊಂದಿಸಿ ನೋಡಲಾಗದುಇಂದಿರೆಯರಸನೆ ದಾಸವೃಂದವನು ಪೊರೆಯೊ 5
--------------
ಪ್ರಸನ್ನವೆಂಕಟದಾಸರು