ಒಟ್ಟು 11 ಕಡೆಗಳಲ್ಲಿ , 8 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಷ್ಟು ಭಾಗ್ಯ ಎಷ್ಟು ಭಾಗ್ಯಕೃಷ್ಣನ ಮುಖವ ದಿಟ್ಟಿಸಿ ನೋಡಿ ಸುಖಿಸುವ ಸಭೆಯ ಜನರು ಪ. ಕಡಗ ಸರಪಳಿಯು ದಿವ್ಯ ಬೆಡಗಿನಾಭರಣಮುಕುಟ ಕಡಿಗಂಟೆ ಮುತ್ತುಗಳ ಜಡವುತಕಡಿಗಂಟೆ ಮುತ್ತುಗಳ ಜಡವುತಲಿ ರಂಗನಾಯಕನ ಎಡಬಲದಿ ಕುಳಿತ ಅರಸಿಯರು ಸಖಿಯೆ 1 ಕೆತ್ತಿಗೆ ಕುಸುರಾದ ಉತ್ತಮ ಆಭರಣಗಳುಮುತ್ತಿನ ಮಾಲೆಗಳು ಅಲಗುತಮುತ್ತಿನ ಮಾಲೆಗಳು ಅಲಗುತ ರಂಗಯ್ಯನ ಹತ್ತಿರ ಕುಳಿತ ದೊರೆಗಳು ಸಖಿಯೆ2 ಕುಂಡಲ ಮಂಡಿತ ಪಂಡಿತರೆಲ್ಲರುಭೂಮಂಡಲ ಪತಿಯ ಸ್ತುತಿಸುತ ಭೂಮಂಡಲ ಪತಿಯ ಸ್ತುತಿಸುತ ಸಭೆಯಲಿತಂಡ ತಂಡದಿ ಕುಳಿತಾರೆ ಸಖಿಯೆ 3 ಋಗ್ವೇದಾದಿಗಳೆಲ್ಲರು ಶಬ್ದವಾದದಿಂದಲಿರುಕ್ಮಿಣಿ ಪತಿಯ ಸ್ತುತಿಸುತರುಕ್ಮಿಣಿ ಪತಿಯನೆ ಸ್ತುತಿಸುತ ಸಭೆಯಲಿಹಿಗ್ಗಿ ಹರುಷದಲಿ ಕುಳಿತಾರೆ ಸಖಿಯೆ 4 ಮಿಂಚು ಮಡಿಯುಟ್ಟು ಪಂಚ ಮುದ್ರೆಯನೆ ಧರಿಸಿ ಚಂಚಲಾಕ್ಷನ ಸಭೆಯೊಳು ಚಂಚಲಾಕ್ಷನ ಸಭೆಯೊಳು ಜೋಯಿಸರುಪಂಚಾಂಗ ಹೇಳುತ ಕುಳಿತಾರೆ ಸಖಿಯೆ 5 ತಾಳ ಮದ್ದಳೆ ದಿವ್ಯ ಮೇಲೆ ತಂಬೂರಿಯವರು ಮೇಲು ಸ್ವರದಿಂದ ಸಭೆಯೊಳುಮೇಲು ಸ್ವರದಿಂದ ನುಡಿಸುತ ಕುಳಿತಾರೆ ಕಾಳಿ ಮರ್ದನನ ಸಭೆಯೊಳು ಸಖಿಯೆ 6 ಚಲುವ ರಾಮೇಶನ ಆದರದಿ ಸ್ತುತಿಸುತಲೆವೇದಗೋಚರನ ಸಭೆಯೊಳು ವೇದಗೋಚರನ ಸಭೆಯೊಳಗೆ ಹರುಷದಿಯಾದವರೆಲ್ಲ ಕುಳಿತಾರೆ ಸಖಿಯೆ 7
--------------
ಗಲಗಲಿಅವ್ವನವರು
ಏನೆಂದು ಬಣ್ಣಿಸಲಿ ಎಲೆ ಧನವೆ ನಿನ್ನ ಮಾಣುವ ವಿಷಯಸುಖ ಅಹುದೆನಿಪ ಪರಿಯ ಪ ಏರಿಸುವಿ ಹಿರಿಕುದುರೆ ತೋರಿಸುವಿ ದುರ್ಮದವ ಹಾರಿಸುವಿ ಸುವಿಚಾರ ಮೀರಿಸುವಿ ಸುಪಥ ದೂರಿಸುವಿ ಮಹನೀತಿ ಘೋರಿಸುವಿ ಬಡವರನು ಕಾರಿಸುವಿ ತಿಂದನ್ನ ಧಾರುಣಿಯೊಳು 1 ಮೆರೆಸುವಿ ಅಂದಣದಿ ಸುರಿಸುವಿ ದುರ್ವಚನ ನರಸುವಿ ಎಡಬಲದಿ ಪರಿಪರಿಯ ಜನರ ತರಿಸುವಿ ಸತಿಸುತರ ಇರಿಸುವಿ ಅರಮನೆಯೊಳ್ ಮರೆಸುವಿ ಮಹಿಮರ ಸಂದರುಶನದ ಸುಖವ 2 ವೇದಶಾಸ್ತ್ರಕಿಳಿಸುವಿ ವಾದನುಡಿ ಕಲಿಸುವಿ ನೀ ಸಾಧುಸಜ್ಜನರ ನಿಜಬೋಧ ತೋರಿಸುವಿಯೋ ಭೇದನಿಕ್ಕುತ ವೈರ ಸಾಧಿಸುತ ಪರಲೋಕ ಸಾಧನೆಯ ಕೆಡಿಸ್ಯಮಬಾಧೆಗಾನಿಸುವಿ 3 ತೊಡಿಸುವಿ ವಿಧವಿಧದ ಒಡವೆವಸ್ತ್ರಂಗಳನು ನುಡಿಸುವಿ ಕಡೆತನಕ ಕಡುದುಗುಡ ಬಡಿಸುವಿ ಬಲುಜಂಬ ನಡೆಸುವಿ ದುಷ್ಷಥದಿ ಕೆಡಿಸುವಿಯೋ ಸಲೆ ಪುಣ್ಯಪಡೆದ ನರಜನುಮ 4 ಇನ್ನೆಷ್ಟು ಬಣ್ಣಿಸಲಿ ನಿನ್ನ ಕರುಣದ ಗುಣವ ನಿನ್ನ ನಂಬಲು ಬಿಡದೆ ಕುನ್ನಿಯೆಂದೆನಿಸಿ ಪನ್ನಂಗಶಯನ ಮಮ ಸನ್ನುತಾಂಗ ಶ್ರೀರಾಮ ನುನ್ನತಂಘ್ರಿಯ ಧ್ಯಾನವನ್ನು ಅಗಲಿಸುವಿ 5
--------------
ರಾಮದಾಸರು
ಗುರುಕೂರ್ಮಚಾರ್ಯರ ಚರಣಕಮಲಯುಗ್ಮ ಮಾನವ ಪ ಧರಣಿಯೊಳಗೆ ಸುಕ್ಷೇತ್ರಗಾಲವ ಪುರದಿ ಶ್ರಿ ನರಶಿಂಹಾ ಚಾರ್ಯರ ತರುಣಿಯಳ ಗರ್ಭಾಬ್ಧಿಯಲಿಹಿಮ ಕರನ ತೆರದಲಿ ಜನಿಸಿಮೆರೆದ ಅ.ಪ ವರಕೊಲ್ಹಾಪುರದಿ ಪೋಗಿರಲು ಸುಂದರವಾದ ಸಿರಿಯರೂಪವ ಕಾಣುತ್ತ ಅರಿತು ಪ್ರಾರ್ಥಿಸಲು ಶ್ರೀ ನರಶಿಂಹಾರ್ಯರಿಗೊಲಿದು ಕರುಣದಿಂದಲಿ ಕೊಟ್ಟಂಥ ಚರಣಕವಚ ಸ್ವರಣ ಸಂಪುಟದಲ್ಲಿ ನಿರುತ ಪೂಜೆಯ ಮಾಡುತ್ತ ಪ್ರವಚನಾಸಕ್ತ ಧರೆಯೊಳಗೆ ಬಹು ಶರಣು ಜನ ರಘ ತರಿದು ಸೌಖ್ಯವ ಗರಿವುದಕೆ ಸಂ ಚರಿಸುತಲಿ ಸಚ್ಛಾಸ್ತ್ರ ಮರ್ಮವ ನರುಹಿಜನರನುದ್ಧರಿಸಿದಂಥ 1 ಪೊಳೆವ ಫಾಲದಿ ಪುಂಡ್ರ ತಿಲಕ ಮುದ್ರಾಕ್ಷತಿ ವಿಲಸಿತ ಶುಭಗಾತ್ರದಿ ಅಲವ ಬೋಧರ ಮತದೊಳು ತತ್ವಬೋಧಕ ಸುಲಲಿತೋಪನ್ಯಾಸದಿ ಬಲು ವಿಧಾರ್ಥವ ಪೇಳಿಕುಳಿತಪಂಡಿತರನ್ನು ಒಲಿಸುತಿರೆ ಪೂರ್ವದಿ ಪಂಢರಪುರದಿ ಭವ ಮುದ್ಗಲಾಚಾರ್ಯರಿ ಗೊಲಿದು ಬಂದಿಹ ಚಲುವ ವಿಠ್ಠಲ ಮೂರುತಿಯ ಪದ ಜಲಜ ಮಧುಕರರೆನಿಸಿದಂಥ 2 ಜಡಜಾಪ್ತನುದಯದಿ ನಡೆದು ದ್ವಿಜಗೃಹದೇವ ರಡಿ ಗೊಂದನೆಯ ಮಾಡುತ್ತ ಎಡೆಬಿಡದಲೆ ತಮ್ಮ ಅಡಿಗೊಂದಿಸುವ ಭಕ್ತ ಗಡಣವ ಮನ್ನಿಸುತ ಬಿಡದೆ ಶತತ್ರಯ ಕೊಡ ಜಲದಲಿ ಸ್ನಾನ ದೃಢಮನದಲಿ ಮಾಡುತ್ತ ತಂತ್ರ ಸಾರೋಕ್ತ ಎಡಬಲದಿ ಶೇವೆಯನು ಮಾಡುವ ಪೊಡವಿಸುರಕೃತ ವೇದ ಘೋಷದಿ ಜಡಜನಾಭನ ಪೂಜಿಸುವ ಬಹು ಸಡಗರವ ನಾನೆಂತು ಬಣ್ಣಿಪೆ 3 ಭೂತಲದಲಿ ಶ್ರೇಷ್ಠವಾತ ಮಾತಾಂಬುಧಿ ಶೀತ ಕಿರಣನೆನಿಸಿ ಪ್ರಾತರಾರಭ್ಯ ಶ್ರೀನಾಥನೆ ಪರನೆಂಬೊ ಶಾಸ್ತ್ರದಿ ಮನವಿರಿಸಿ ಖ್ಯಾತ ಸತ್ಯಧ್ಯಾನ ತೀರ್ಥರೆಂಬುವ ಗುರು ಪ್ರೀತಿಯ ಸಂಪಾದಿಸಿ ಪುತ್ರರಿಗೆ ಬೋಧಿಸಿ ಪ್ರೀತಿಯಲಿ ಶಿಷ್ಯರಿಗೆ ಭಗವ ದ್ಗೀತೆಯನು ಪ್ರತಿದಿನದಿ ಪೇಳುತ ಪಾತಕವ ಪರಿಹರಿಸಿ ಪರಮ ಪು- ನೀತ ಗಾತ್ರರ ಮಾಡಿ ಸಲಹಿದ 4 ಧರೆಯೊಳಧಿಕಮಾದ ಗಿರಿ ವೇಂಕಟೇಶನ ದರುಶನವನೆ ಕೊಳ್ಳುತ ಗುರುವಾಜ್ಞೆಯಲಿ ಬಂದು ವರ ಸಭೆಯೊಳು ತಮ್ಮ ಪರಿವಾರದಿಂದಿರುತ ವರಷ ಶಾರ್ವರಿಯೊಳು ವರ ಮಾಘ ಪ್ರತಿಪದ ಬರಲು ಧ್ಯಾನವ ಮಾಡುವ ಹರಿಪದಾಸಕ್ತ ಪರಮ ಭಕುತಿಯಲಿಂದ ಶೇವಿಪ ಶರಣು ಜನ ಮಂದಾರ ನೆನಿಸುತ ಮೆರೆವ ಕಾರ್ಪರ ನಿಲಯ ಶಿರಿನರ ಹರಿಯ ಪುರವನು ತ್ವರದಿ ಶೇರಿದ 5
--------------
ಕಾರ್ಪರ ನರಹರಿದಾಸರು
ಜೋ ಜೋ ಜೋ ಜೋ ಎನ್ನಿ ನಿರ್ವಿಕಾರಗೆಜೋ ಎಂದು ತೂಗಿರಿ ಚಿದಾನಂದ ದೊರೆಗೆ ಪ ಚಿದ್ಬಯಲಿನೊಳು ಹೃದಯ ತೊಟ್ಟಿಲ ಮಾಡಿಬದ್ಧ ವೇದಾಂತದ ನೇಣ ಬಿಗಿದುಸದ್ಭಾವವೆಂಬ ಹಾಸಿಗೆಯ ಹಾಸಿಶುದ್ಧಾತ್ಮನನು ಭಾವದಿ ತಂದು ನೀಡಿ 1 ಅದ್ವೈತವೆಂಬ ಆಭರಣ ತೊಡಿಸಿಸಿದ್ಧ ಭೂಮಿಕೆ ಎಂಬ ಅಡವನಿಡಿಸಿಬುದ್ಧಿ ನಿರ್ಮಳವಾದ ತಲೆದಿಂಬನಿಡಿಸಿನಿದ್ದೆ ಮಾಡೋ ಬ್ರಹ್ಮಾನಂದ ಬೋಧದಲಿ 2 ಚಿತ್ಪ್ರಭೆಯ ದೀಪವನು ಎಡಬಲದಿ ಹಚ್ಚಿಮೊತ್ತವಹ ದಶನಾದ ಭೇರಿಯರವ ಹಚ್ಚಿಮತ್ತೆ ಓಂಕಾರ ಮಂತ್ರ ಘೋಷದಿ ಮುಚ್ಚಿನಿತ್ಯಾತ್ಮನನು ನೋಡಿ ಹರುಷ ತುಂಬುತಲಿ 3 ವಸ್ತು ಸಾಕ್ಷಾತ್ತೆಂಬ ಮುತ್ತೈದೆಯರೆಲ್ಲಸ್ವಸ್ಥ ಚಿತ್ತೆಂಬುದನೆ ಸಿಂಗರಿಸಿಕೊಂಡುನಿಸ್ಸಂಗನಹ ಆತ್ಮ ಶಿಶುವನೊಡತಂದುಸುಸ್ವರದ ನಾದದಲಿ ಜೋಗುಳವ ಪಾಡುತಲಿ 4 ಜೋ ಜೋ ಕಾಮಸ್ತಂಭವ ಎನ್ನಿ ನರರೆಲ್ಲಜೋ ಜೋ ಕ್ರೋಧ ಸ್ತಂಭನ ಎನ್ನಿ ನರರೆಲ್ಲಜೋ ಜೋ ಮೋಹ ಸ್ತಂಭನ ಎನ್ನಿ ನರರೆಲ್ಲಜೋ ಜೋ ವಿಷಯ ಸ್ತಂಭನ ಎನ್ನಿ ನರರೆಲ್ಲ5 ಜೋ ಜೋ ಯಮನಿಯಮಾಸನ ಅರುಹಿದವನೆಜೋ ಜೋ ಜೋ ಜೋ ಖೇಚರ ಮುದ್ರೆ ನಿಲಿಸಿದವನೆಜೋ ಜೋ ಜೋ ಜೋ ಅವಿದ್ಯೆ ಖಂಡಿಸಿದವನೆಜೋ ಜೋ ಜೋ ಜೋ ಜೀವನ್ಮುಕ್ತಿದಾತನೆ 6 ಜೋ ಜೋ ಪರಮಾರೂಢನೆ ಪರಮೇಶಜೋ ಜೋ ಪರಮ ಪರೇಶನೆ ಪಂಡಿತಜೋ ಜೋ ನಿರುತ ವಸ್ತು ವ್ಯಕ್ತ ಅವ್ಯಕ್ತಜೋ ಜೋ ಶರಣ ರಕ್ಷಕ ರಾಜ ಯೋಗೀಂದ್ರ ಜೋ ಜೋ 7 ಸತ್ಯ ಸನಾಥ ವಿಶ್ವೋತ್ಪತ್ತಿ ಜೋ ಜೋಪ್ರತ್ಯಗಾತುಮ ಪರಬ್ರಹ್ಮನೆ ಜೋ ಜೋನಿತ್ಯ ಸಹಜಾನಂದ ಚಿನ್ಮಾತೃ ಜೋ ಜೋಭಕ್ತರ ಭಂಡಾರಿ ಭಾಗ್ಯನೆ ಜೋ ಜೋ 8 ಮಿಹಿರ ಶತಕಳೆಯೆಂಬ ಮಂತ್ರಪುಷ್ಪವ ಚೆಲ್ಲಿಮಹಾ ಬೆಳಕಿನ ಮಂಗಳಾರತಿಯ ಬೆಳಗುತಲ್ಲಿಅಚಲ ಸಮಾಧಿಯೆ ಆದ ಯೋಗನಿದ್ರೆಯಲಿಮಹಾ ಚಿದಾನಂದಾವಧೂತ ಮಲಗಿರು ಸುಖದಲ್ಲಿ 9
--------------
ಚಿದಾನಂದ ಅವಧೂತರು
ಡೌಲಿನ ಡೌಲ್ಯಾಕೆ ಮಾಡ್ತೀ ಕಾಲತೀರದ ಮೇಲೇನೆಂದು ಹೇಳ್ತೀ ಪ ಹೊಯ್ಮಾಲಿತನದ್ಹೊಲೆಕೆಲಸ ಮಾಡಿಕೂತಿ ಸೈಮಾಡಿ ಬರಕೊಟ್ಟದೆಲ್ಲ ಮರೆತಿ ಅ.ಪ ಕಾಯವೆಂಬ ಹೊಲ ಕೌಲಿಗೆ ಹಿಡಿದಿ ಮಾಯ ಮರವೆಯೆಂಬ ಮುಳ್ಳು ಬೆಳೆಸಿದಿ ಹೇಯವಿಷಯವೆಂಬ ಸೆದೆಯ ಕೆಡವಿದಿ ಸಾವು ಹುಟ್ಟುಯೆಂಬ ಕೊರಡಗಿದ್ಹೋದಿ ಕಾವಲಾದೆಲೆ ಮೂಳಿ ನಿನ್ನ ಎಡಬಲದಿ ವಾಯಿದೆ ಸಮೀಪಬಂತು ಮುಂದೇನು ಹಾದಿ 1 ಕ್ರೋಧ ಎಂದೆಂಬ ಅಲಬು ಕಿತ್ತದೆ ಭೇದ ಎಂದೆಂಬುವ ಜೇಕು ತೋಡದೆ ವಾದವೆಂಬ ಬೋರೆ ಜಡ್ಡು ಕಡಿಯದೆ ಖೇದಯೆಂದೆಂಬ ಕರಿಕೆದಡ್ಡ ನಳಿಯದೆ ಶೋಧವಿನಿತಿಲ್ಲದೆ ಮುಸುಕಿಟ್ಟು ಮಲಗಿದಿ ಕಾದುವ ಒಡೆಯನಿಗೀಡೇನು ಮಾಡ್ದೀ 2 ಚಿತ್ತಶುದ್ಧಿಯೆಂಬ ಬದುವು ಕೆಡಿಸಿದಿ ನಿತ್ಯ ನಿರ್ಮಲತೆಯೆಂಬ ಬಾಂದು ಒಡೆಸಿದಿ ಸತ್ಯ ಸನ್ಮಾರ್ಗೆಂಬ ಸೀಮೆಯ ಮುರಿದಿ ತತ್ವ ವಿಚಾರವೆಂಬ ಒಡ್ಡ್ಹರೆಗಡಿದೀದಿ ಕರ್ತು ಶ್ರೀರಾಮನ ಅರ್ತು ಭಜಿಸಿದೆ ಯಮಗ್ವ್ಯೆರ್ಥ ತುತ್ತಾದಿ3
--------------
ರಾಮದಾಸರು
ಪಾಲಿಸೆನಗೀ ಜ್ಞಾನ ಪಾಲಸಾಗರಶಾಯಿ ಶ್ರೀ ಲೋಲ ನೀ ನಿತ್ಯದಿ ಪ. ಶೀಲಗುಣ ನಿನ್ನ ಏನು ಬೇಡುವುದಿಲ್ಲೊ ಕಾಲರೂಪನೆ ನಿನ್ನನು | ಇನ್ನು ಅ.ಪ. ಒಂದು ಅಸ್ವತಂತ್ರ ಒಂದು ಸರ್ವಸ್ವತಂತ್ರ ಒಂದು ಮನೆಯೊಳಗೆ ಇದ್ದು ಒಂದೆರಡು ಲೋಕಕ್ಕೆ ಒಂದೆ ದೈವನು ಎನಿಸಿ ಒಂದೊಂದರಲಿ ಇರುವ ಒಂದು ಅಪೇಕ್ಷಿಸದೆ ಒಂದೆರಡು ಗುಣದಿಂದ ಒಂದೆರಡು ಮಾಳ್ಪ ಜಗವ ಇಂದಿರೇಶನೆ ನಿನ್ನ ಈ ವಿಧದ ವ್ಯಾಪಾರ ಒಂದೊಂದು ಮನಕೆ ತೋರೋ | ಸ್ವಾಮಿ 1 ಎರಡು ಮಾರ್ಗಗಳಿಹವು ಎರಡು ಕರ್ಮಗಳಿಂದ ಎರಡು ವಿಧ ಸಮ ತಿಳಿದರೆ ಎರಡು ರೂಪಗಳನು ಒಂದಾಗಿ ಭಾವಿಸುತ ಎರಡೊಂದು ಜೀವ ತಿಳಿದು ಎರಡು ಫಲ ಅನುಭವಿಸಿ ಎರಡು ಹರಿಗರ್ಪಿಸುತ ಎರಡು ವಿಧ ಕರ್ತನೆಂದು ಎರಡು ಎಪ್ಪತ್ತು ಸಹಸ್ರನಾಡಿಗಳಲ್ಲಿ ಎರಡು ರೂಪದಲಿರುವ ಪೊರೆವ 2 ಮೂರು ಅವಸ್ಥೆಯಲಿ ಮೂರು ತಾಪವ ಸಹಿಸಿ ಮೂರು ಮಾರ್ಗದಲಿ ನಡೆದು ಮೂರೆಂಟು ಇಂದ್ರಿಯವ ಮೂಲರೂಪದಿ ಲಯಸಿ ಮೂರಾರು ವಿಧ ಭಕ್ತಿಯಲಿ ಮೂರೈದು ನುಗ್ಗೊತ್ತಿ ಮೂರು ಮೂರು ಅರಿಯ ಮೂರು ಶುದ್ಧಿಯಲಿ ಗೆದ್ದು ಮೂರಾರು ಎರಡೊಂದು ಖೋಡಿ ಮತಗಳ ಮುರಿಸಿ ಮಾರುತಿಯ ಮತದಿ ನೆಲಸಿ | ತಿಳಿಸಿ 3 ವಿೂನ ಕೂರ್ಮನೆ ವರಹ ಶ್ರೀ ನಾರಸಿಂಹನೆ ದಾನಯಾಚಕ ಭಾರ್ಗವ ವಾನರರಿಗೊಲಿದನೆ ವೇಣುಹಸ್ತರೂಪಿ ಮಾನವಿಲ್ಲದ ಕಲ್ಕಿಯೆ ಶ್ರೀನಿವಾಸನೆ ನಿನ್ನ ನಾನಾವಿಧ ರೂಪಗಳು ನಾನು ವರ್ಣಿಸಲು ಅಳವೆ ಮಾನಾಭಿಮಾನದೊಡೆಯನೆ ಕೃಷ್ಣ ಕೈಪಿಡಿಯೊ ಭಾನುಪ್ರಕಾಶ ಹರಿಯೆ | ಸಿರಿಯೆ 4 ಶಿರದಲ್ಲಿ ಕಿರೀಟ ಫಣೆಯಲ್ಲಿ ತಿಲುಕವು ಮೆರೆವ ಕುಂಡಲದ ಕದಪು ಕಿರುನಗೆಯ ಪಲ್ಗಳು ಕೊರಳಲ್ಲಿ ಹಾರಗಳು ಕರದಲ್ಲಿ ಆಯುಧಗಳು ಸಿರಿ ಭೂಮಿ ಎಡಬಲದಿ ಸುರನದಿಯ ಪೆತ್ತಪಾದ ಸಿರಿರಮಣ ಗೋಪಾಲಕೃಷ್ಣವಿಠ್ಠಲ ಎನಗೆ ಪರಿ ಪರಿಯ ರೂಪ ತೋರೊ ಸ್ವಾಮಿ 5
--------------
ಅಂಬಾಬಾಯಿ
ಸನ್ನುತ ವಿಠಲ | ಇವನ ಪೊರೆಯೋ ಪ ಅವಿಕಾರಿ ಆದ್ಯ ನಿರ | ವದ್ಯ ಎಲೊ ಹರಿಯೆ ಅ.ಪ. ತೈಜಸನೆ ನೀನಾಗಿ | ಮಾಜದಲ್ಯುಪದೇಶಯೋಜಿಸುವೆನೆಂದೆನುತ | ಪೇಳ್ದುದಕ್ಕಾಗೀಆರ್ಜವದ ಮನದಲ್ಲಿ | ಪ್ರಾರ್ಥಿಸಲು ಸ್ವಪ್ನದಲಿಯೋಚಿಸಿಹೆ ಅಂಕಿತವ | ಹೇ ನೈಜಮೂರ್ತೇ 1 ಚಿಣ್ಣನಿರುವನು ಇವನು | ಕಣ್ಣೆಗೆವೆಯಂದದಲಿಇನ್ನೀವನ ಕಾಯುವುದು | ಬನ್ನಬಡಿಸದಲೇಅನ್ನ ಆರೋಗ್ಯಕ್ಕೆ | ನಿನ್ನನೆ ಮೊರೆಯಿಡಲಿಅನ್ಯ ಹಂಬಲ ನೀಗೊ | ಪನ್ನಂಗ ಶಯನಾ 2 ತೊಡರು ಬರಲಿ | ಬಿಡದೆ ನಿನ್ನಂಘ್ರಿಯನುಧೃಡಭಕ್ತಿಯಿಂ ಸ್ಮರಿಪ | ಮುದ ಮನವ ನೀಯೋ |ಎಡಬಲದಿ ನೀನಾಗಿ | ಬಿಡದೆ ಬೆಂಬಲ ವಿರಲುಕಡು ಭವಾರ್ಣವವೆಲ್ಲ | ಅಡಿಯ ಪರಿಮಿತಿಯೋ 3 ಸಿರಿ ವಾಯು ಮೊದಲಾದಸುರರೆಲ್ಲ ಹರಿಯ ಕಿಂಕರರೆಂಬ ಮತಿಯಿತ್ತುಪೊರೆವುದಿವನನ ಎಂದು | ಹರಿಯೆ ಭಿನ್ನವಿಪೆ 4 ನಾಮ ಸ್ಮರಣೆ ಯೆಂಬ | ವಜ್ರಕವಚವ ತೊಡಿಸಿಈ ಮಹಾ ಕಲಿಯುಗದಿ | ಸಾಧನವ ಗೈಸೋಶ್ರೀ ಮನೋಹರ ಗುರು | ಗೋವಿಂದ ವಿಠಲಯ್ಯಈ ಮಹತ್ತುಪಕಾರ | ನಾ ಮರೆಯನಯ್ಯ 5
--------------
ಗುರುಗೋವಿಂದವಿಠಲರು
ಸಾಗಿ ಬಾರೋ ಲೇಸಾಗಿ ಬಾರೋ ಘನತ್ಯಾಗಿ ಬಾರೋ ಬಾಗಿ ನಮಿಪೆ ಜಗನ್ನಾಥಾರ್ಯ ರಥವೇರಿ ಪ ಜಂಭಾರಿ ಕುಜದಂತೆ ಹಂಬಲವನ್ನು ತುಂಬಿಕೊಂಡಿರುವಂಥ | ಗುರುಕರು ಣಾಂಬುಧಿ ಸ್ತಂಭದಿ ಪೊರೆಮಟ್ಟು ಸಂಭ್ರಮದಿ 1 ಭಾಗವತರು ಮುಂಭಾಗದಲಿ | ಕುಣಿಯುತಲಿ ರಾಗಾಲಾಪಗಳಿಂದ ಹರಿನಾಮ ಪಾಡುತಲಿ ಪಥ ಕಾಯುವರು 2 ಪೊಡವಿ ಸುರರ ಕೂಡಿ ಎಡಬಲದಿ ಸಡಗರದಿ ಬಿಡದೆ ವೇದಂಗಳ ಪಠಿಸುತ ಭಕ್ತಿಯಲಿ ಒಡೆಯ ನಿನ್ನಾಗಮನ ನೋಡುವರು | ಗತಿ ಬೇಡುವರು 3 ಪಾಡಿ ಪೊಗಳುವರ ಕಾಯುವ | ಮೂಢರನು ಓಡಿಸುವಲ್ಲಿ ನಿನಗೀಡ್ಯಾರೋ ರೂಢಿಯೊಳು ನೋಡಿ ದಯದಿಂದ ನೀ ನೋಡಿ ಗುರುರಾಯ 4 ಭೂಮಿ ವಿಬುಧರಿಗೆ ನೀ ಮಾಡಿದುಪಕಾರ ನಾ ಮರೆಯಲಾರೆನು ಎಂದೆಂದು | ಗುರುರಾಯ ನಾ ಮರೆಯ ಲಾರೆನು ಎಂದೆಂದು ಜಗದೊಳಗೆ ಶಾಮಸುಂದರನ ಪ್ರಿಯದಾಸ | ರಥವೇರಿ 5
--------------
ಶಾಮಸುಂದರ ವಿಠಲ
ಎಂತು ವರ್ಣಿಸಲಹುದು ಸಿರಿವರನಸಿರಿನಾರಸಿಂಹನಪಅಂತರಂಗದಿ ಹರಿಯ ಸ್ಮರಣೆಯಸಂತತವು ಬಿಡದಂತೆ ಮಾಡುವಕಂತುಪಿತ ಭಕ್ತರನು ಪೊರೆಯಲುನಿಂತಿರುವ ಸಿರಿಕಾಂತನೆನುತಲಿ ಅಪನಿಷ್ಠೆಯಿಂದಲಿ ಬೆಟ್ಟವೇರುತ್ತಹರಿಭಕುತರೆಲ್ಲರುಕಷ್ಟಗಳ ಪರಿಹರಿಸು ಎಂದೆನುತಮನಮುಟ್ಟಿ ಭಜಿಪರುಸೃಷ್ಟಿಕರ್ತನೆ ರಕ್ಷಿಸೆಂದೆನುತಇಷ್ಟದಾಯಕ ನಿನ್ನ ಮಹಿಮೆಯಎಷ್ಟು ಪೊಗಳುವರಯ್ಯ ಕೇಶವಭಕ್ತರನು ಉದ್ಧರಿಸಲೋಸುಗಬೆಟ್ಟದಲಿ ಉದ್ಭವಿಸಿದಾತನ 1ವಾಸುದೇವನ ಮಹಿಮೆ ಪೊಗಳುತ್ತ ನ-ರಸಿಂಹ ಲಕ್ಷೀ ನಾರಸಿಂಹ ನ-ರಸಿಂಹ ನರಸಿಂಹ ಎಂದೆನುತ ಹರಿ-ದಾಸರೆಲ್ಲರು ಸಾರಸಾಕ್ಷನೆ ನಿನ್ನ ಪೊಗಳುತ್ತದ್ವಾರ ದ್ವಾರದಿ ಪೂಜೆUಷÉೂಳ್ಳುತಮಾರಪಿತ ಮಹಲಕ್ಷೀ ಸಹಿತದಿದೋರ ರಥÀದೆಡೆಯಲ್ಲಿ ನಿಲ್ಲುತತೇರ ನೇರುವ ಶ್ರೀ ರಮೇಶನ 2ಸಾರಪದಕಗಳಿಂದ ಶೋಭಿಸುತ ಝಳಝಳಿಪವಜ್ರದ ತೋರ ಮುತ್ತಿನ ಮಾಲೆಹೊಳೆಯುತ್ತ ಥಳಥÀಳಿಪ ನೊಸಲಲಿಸಾರಕಸ್ತೂರಿ ತಿಲಕ ರಂಜಿಸುತಮಾರಬಿಲ್ಲೆಂತೆಸೆವ ಪುಬ್ಬಿನಚಾರುತರ ಶೃಂಗಾರ ನಯನದವಾರೆ ನೋಟÀದಿ ನೋಡಿ ಭಕುತರ ಅ-ಪಾರದುಃಖಗಳನ್ನ ನೀಗುವರ3ಕೋಟಿಸೂರ್ಯಪ್ರಕಾಶಮಯವಾದನವರತ್ನ ಖಚಿತ ಕಿರೀಟಕುಂಡಲಧರಿಸಿ ಅನುವಾದಎಡಬಲದ ಭುಜದಲಿಮಾಟದ ಭುಜಕೀರ್ತಿ ಸುಲಲಿತದನೋಟಕಾಶ್ಚರ್ಯವನೆ ತೋರುತಶ್ರೀ ಕಳತ್ರನು ರಥದಿ ಮೆರೆಯುತ ದಿ-ವಾಕರನ ಪ್ರಭೆಯಂತೆ ಪೊಳೆಯುವರಮಾ ಮನೋಹರ ರಮೆಯ ರಮಣನ 4ಛತ್ರಿ ಚಾಮರಗಳನೆ ಪಿಡಿದಿಹರು ಎಡಬಲದಿಸ್ತುತಿಸುತ ಎತ್ತಿ ಸ್ವರಗಳ ಗಾನಪಾಡುವರುಚಿತ್ತೈಸುಹರಿಬಾ ಬಾರಿತ್ತಬಾಬಾರೆಂದು ಕರೆಯುವರುಸುತ್ತ ತುಂಬರು ನಾರದರಪರಿನೃತ್ಯಗಾನಗಳಿಂದ ಸ್ತುತಿಪರುಕರ್ತೃ ಕಮಲನಾಭ ವಿಠ್ಠಲರ-ಥೋತ್ಸವದಿ ನಲಿನಲಿವ ದೇವನ 5
--------------
ನಿಡಗುರುಕಿ ಜೀವೂಬಾಯಿ
ಬಾರಯ್ಯ ಶ್ರೀ ಶ್ರೀನಿವಾಸ ಭಕ್ತವತ್ಸಲ ಸ್ವಾಮಿಬಾಗಿ ನಮಿಸುವೆನು ಭಾಗವತರ ಪ್ರಿಯ ಪಬಾರೋ ಭಕುತರ ಭವವಿಮೋಚನಬಾರೊ ದ್ರೌಪದಿಮಾನಸಂರಕ್ಷಣಬಾರೊ ಧ್ರುವ ಪ್ರಹ್ಲಾದ ಪಾಲಕಬಾರೋ ಗಜರಾಜೇಂದ್ರ ವರದ ಅ.ಪಕಾಲಲಂದುಗೆ ಗೆಜ್ಜೆ ಘಲುಘಲುರೆನುತಲಿಕಾಲಪಾಡಗರುಳಿ ಕಾಲಪೈಜನಿಸರಕಾಲಲ್ಲಿ ಅಸುರರ ಧೂಳಿ ಮಾಡಿದ ದಿವ್ಯಕಾಲಿಗೆರಗುವೆನು ಕಾಯೊ ಶ್ರೀಹರಿಶೌರೆಕಾಲಿನಲಿಶಿಲೆನಾರಿಯಾದಳುಕಾಳಿಮದ ನಿರ್ಮೂಲವಾಯಿತುಕಾಲಿನಲಿ ಗಂಗೆಯು ಜನಿಸಿದಳುಕಾಲು ಪಾರ್ಥನೆÀ ರಥದಿ ಮೆರೆಸಿದೆ 1ಎಡಬಲದಿ ನಿನ್ನ ಮಡದೇರಿಂದೊಪ್ಪುತತಡಮಾಡದಲೆ ಬಾರೊ ಮೃಡಸಖನೆಉಡುಪ ಮುಖನೆ ನಿನ್ನ ಅಡಿಗೆರಗುವರಯ್ಯತಡಮಾಡದಲೆ ತಾಳಮೇಳ ವಾದ್ಯಗಳಿಂದಬಿಡದೆಶ್ವೇತಛತ್ರಚಾಮರಎಡಬಲದಿ ನಿನ್ನ ಸ್ತುತಿಪ ಭಕ್ತರಕಡುಸ್ವರದ ವಾದ್ಯ ವೇದ ಘೋಷಣೆಬಿಡದೆ ಮಾಳ್ಪರೊ ಕಡಲೊಡೆಯನೆ 2ಕಮಲಸಂಭವನಯ್ಯ ಕಮಲಜಾತೆಯ ಪ್ರಿಯಕಮಲಪೊಕ್ಕಳಲಿ ಪಡೆದಾತನೆಕಮಲದಳಾಕ್ಷನೆಕಮನೀಯರೂಪನೇಕಮಲಾಕ್ಷಿಯೊಡಗೂಡಿ ಕರುಣದಿ ಬಾರಯ್ಯಕಮಲಮಲ್ಲಿಗೆ ಮಳೆಯ ಕರೆವರುಕಮಲಗಂಧಿಯರೆಲ್ಲ ಹರುಷದಿಕಮಲನಾಭವಿಠ್ಠಲನೆ ಪೊಳೆವ ಹೃ-ತ್ಕಮಲದೊಳು ಮಿಗೆ ಶೋಭಿಸುವಹರಿ3
--------------
ನಿಡಗುರುಕಿ ಜೀವೂಬಾಯಿ