(2) ವೇದಾಂತದೇಶಿಕರು
ವೇದಾಂತ ಗುರು ಸಾರ್ವಭೌಮ ಜ್ಞಾನ
ಬೋಧಾನುಕೂಲ ನಿಸ್ಸೀಮ ಪ
ಆದಿನೋಡು ಅನಾದಿಯೆನ್ನುತ
ಬೋಧೆಗೊಳಿಸುಪದೇಶ ಮಾಡಿದ
ಸಾಧುಶಿಖರನೆ ಸರ್ವತಂತ್ರನೆ
ವಾದಭೀಕರ ವೈಷ್ಣವೋ ನಿಜ 1
ದ್ವಿದಳ ದಾಸನ ಕೈದಸಿದ ನಿಜ
ಪದವಿನೋಡೆಂದೆನುತ ಮನಸನು
ಕದಿವ ಕಳ್ಳರ ಕೊಂದು ಹಿಡಿಯೆಂ
ದೊದಗಿತ್ತನು ಮೊದಲಿನಕ್ಷರಾ2
ಮೂರು ಬಿಡು ನೀ ಮೂರು ಹಿಡಿ ಕೇ
ಳಾರು ಚಕ್ರವ ದಾಂಟಿ ತ್ರಿಕುಟಿಯ
ಸೇರಿ ಸಂಪದವಾರಿಯೊಳಗದ್ದು
ತೋರಿದ ಪರಮಾತ್ಮ ಪರತರ 3
ಎಂಟು ಹಾರಿಸಿ ಎಂಟುಲಿಪಿಯನು
ಗಂಟು ಮಾಡೆಂದೆನುತ ನನ್ನೊಳ
ಗುಂಟುಮಾಡಿಯು ತೋರಿದ ವೈ
ಕುಂಠನಾಥನ ನನ್ನೊಳಗ ನಿಜ 4
ಶುದ್ಧ ಹಂಸನ ಮಾಡಿ ನನಗಾ
ಚಿದ್ವಿವೇಕದ ಕವಚ ತೊಡಿಸಿದ
ಸತ್ಸ್ವರೂಪಾಚಾರ್ಯನಹುದೆಲೊ
ಮದ್ಗುರುವೆ ಶ್ರೀ ತುಲಶೀರಾಮಾ 5