ವಿದ್ಯಾಮರವೇ ಉದ್ಯೋಗದ ಮರವೇ ಪ
ಅಂಜನಾ ದೇವಿಯ ನೀ ಜಠರದಿ ಜನಿಸಿ
ಕಂಜರಾಕ್ಷ ಶ್ರೀರಾಮಭದ್ರನ ಭೃತ್ಯನೆನಿಸಿ
ಸಂಜೀವಿನಿಯ ತಂದೆ ಅಂಜದಾರ್ಣವ ದಾಂಟಿ ತಂದೆ
ರಂಜಿಪ ಮುದ್ರಿಕೆಯ ಅವನಿಜಾತಳಿಗಿತ್ತು ಬಂದೆ1
ಹೆಸರಾದ ಕೌರವ ಬಲವ ಸವುರಿ ನೀ
ಉಸುರಿಲ್ಲದವರನು ನೆಗಹಿ ನೀ
ಮಿಸುಕದೆ ಅಸುರರ ಅಸುವ ಪೀಡಿಸಿದೆ
ಅಸುನಾಥ ಹರಿಸಿ ನೀನತುಳ ತೋಷವನಿತ್ತೆ 2
ಧರೆಯೊಳು ನೀ ವರ ಕಾಪ್ಯಪುರದಿ ಜನಿಸಿ
ಹರಿಮತವ ಹರಹಿ ಹರಿಸಿ ರೂಹುಗೊಳಿಸಿ
ಹರಿಪರಬ್ರಹ್ಮನೆಂದರಿಯೆ ಜಗಕ್ಕೆ ಕೋರಿ
ನರಸಿಂಹವಿಠಲನನುಗಾಲ ತೋರುವನು ದಾರಿ 3