ಭುವನದೊಳಗೆ ಒಬ್ಬ ಶಿವಯೋಗಿನಾ ಕಂಡೆ
ಅವತರಿಸಿರುವನದ್ಯಾರಮ್ಮಾ ಪ
ತುಂಬಿ ನಡುನಾಡಿಯೊಳಗಾಡೊ
ಪವನರೂಪನ ಬೇಗ ತೋರಮ್ಮಾ ಅ.ಪ
ಉಪಜೀವಿಯನು ಕಂಡು ಉಷ್ಣಶೀತವನಳಿದು
ತಪಸು ಮಾಡುವನ್ಯಾರದೇಳಮ್ಮಾ
ಅಪಮೃತ್ಯುವನು ಕಂಡು ಆನಂದವನು ಬಿಟ್ಟಾ
ವಿಪರೀತವೇನಿದು ಹೇಳಮ್ಮಾ 1
ಬುದ್ಧಿ ಮನಸು ಚಿತ್ತ ಅದ್ವಯವನು ಮಾಡಿ
ಇದ್ದನಹುದು ಆತಾ ಕಾಣಮ್ಮಾ
ಮದ್ಗುರುವಾದ ಶ್ರೀ ತುಲಶಿರಾಮದಾಸ
ಪರೀಕ್ಷಿತ ಕಾಣಮ್ಮಾ 2