ತನುಮನದಲ್ಲಿ ಯೋಚನೆ ಮಾಡೀ
ಎಣಿಸಿ ಗುಣಿಸಿ ಮನಸಿಜನ್ನ ಜನಕನ ಲೀಲೆ ಪ
ನರನಾರಾಯಣನೀತ ಕೃಷ್ಣ
ಹರಿ ಹೃದ್ಭಾನು ಕಪಿಲನೀತ
ಹರಿನಾರಾಯಣೇನೀತ ಯೋಗೀ
ಶ್ವರ ತಾಪಸ ವೈಕುಂಠನೀತ
ಹರನಸಖ ಸ್ವಧಾಮನೀತ
ಕರುಣಿ ಸಾರ್ವಭೌಮನನೀತಾ 1
ಅಜಿತಯಜ್ಞನಾಮನೀತ
ಅಜಗೆ ಪೇಳಿದ ಹಂಸನೀತ
ಸುಜನಪಾಲ ವ್ಯಾಸ ವೀ
ರಜ ಮಹಿದಾಸ ದತ್ತನೀತ
ನಿಜ ಮಹಿಮ ಧನ್ವಂತ್ರಿ ಈತ
ತ್ರಿಜಗವಳೆದುಪೇಂದ್ರನೀತ
ಭಜಕರೊಡಿಯ ವಿಷಕ್ಸೇನ ಭುಜಗಶಾಯಿವಿಭುವೆ ಈತ 2
ಚಲುವ ಧರ್ಮಶೇತು ಈತ
ಬಲುವುಳ್ಳ ಶಿಂಶುಮಾರನೀತ
ಮತ್ಸ್ಯ ಕೂರ್ಮವರಹ
ಲಲಿತನರಸಿಂಹನೀತ
ಬಲಿಗೊಲಿದ ವಾಮನ್ನನೀತ
ಕುಲವೈರಿ ರಘರಾಮನೀತ
ಕಲಕಿ ರೂಪನಾದನೀತಾ 3
ವಾಸುದೇವ ಜಯಪತಿ ಸುಂ
ದರ ಪ್ರದ್ಯುಮ್ನ ಈತ ನಿರಂತರ ಅನಿರುದ್ಧನೀತ ಚ
ತುರ ವಿಂಶತಿ ಮೂರುತಿಯೇ ಈತ
ಮೆರೆವ ಅಜಾದಿ ನಾಮಕನೀತ
ವರ ಪಂಚಮೂರುತಿಯೇ ಈತಾ
ಎರಡೈದು ಮೇಲೊಂದನೀತ 4
ಪರಿಪರಿ ರೂಪ ಉಳ್ಳನೀತ
ಹೊರಗೆ ಒಳಗೆ ವ್ಯಾಪ್ತನಾಗಿ
ಸರಿಸರಿ ಬಂದ ತೆರದಿ ಜಗವ
ಸರಸದಲಿ ಆಡಿಪನೀತ
ಸ್ಮರಣೆ ಮಾಡಲು ಸಕಲ ಇಷ್ಟವ
ಕರೆÀದು ಕೊಡವನೀತ
ಮರಣ ಜನನರಹಿತ ನೀತ 5