ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀರಾಜನವನೆತ್ತಿರೊ ತಿಮ್ಮಯ್ಯಗೆವಾರಿಜೋದ್ಭವಕಾಮರಯ್ಯಗೆಪ.ಆನಕದುಂದುಭಿಕೂಡೆ ಬಂದಧೇನುಕಾವರ ಪಳ್ಳಿಲಿ ನಿಂದನಾನಾ ಕೃತ್ರಿಮಗೈದಾಳರಿಗೆಪಾನಕೆ ಗೋರಸ ಅಪಹಾರಿಗೆ 1ಆವುಕಾವದಾವಾಗ್ನಿಯ ನುಂಗಿಗೋವಕ್ಕಳ ಸಖರ ಸುಸಂಗಿಪಾವನು ಕಾಲಿನಿಂದ ತುಳಿದಗೆಭಾವಕಿಯರ ಭಾವಕೊಲಿದಗೆ 2ಕೋಪವಿಲ್ಲದನ ಕೂಡಿ ಹೋಗಿಪಾಪವೆಲ್ಲಳಿದು ಮಾವನನೀಗಿತಾಪವಾರಿಸಿದ ತಂದೆ ತಾಯಿಗೆಭೂಪ ಉಗ್ರಸೇನಾಶ್ರಯಗೆ 3ಶ್ರೀರುಕ್ಮಿಣಿ ಸತ್ಯೆಯರಾಳಿನರಕಾಸುರನ ತಲೆಹೋಳಿಭೂರಿಕನ್ನೇರ ಕೈವಿಡಿದಗೆದ್ವಾರಕ ನಗರದರಸಗೆ 4ಕುಂತಿ ಪುತ್ರರ ಸುಖ ಬೆಳೆಸಿಕಾಂತೆ ಪಾಂಚಾಲಿ ಲಜ್ಜಾ ಉಳಿಸಿಭ್ರಾಂತ ಪಾಪಿ ಕೌರವನಾಶಗೆಕಾಂತ ಪ್ರಸನ್ವೆಂಕಟಾದ್ರೀಶಗೆ 5
--------------
ಪ್ರಸನ್ನವೆಂಕಟದಾಸರು