ಒಟ್ಟು 6 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೋಲ ಕೋಲೆನ್ನ ಕೋಲ ಕೋಲೆನ್ನ ಕೋಲ ಕೋಲ ಶ್ರೀ ಹರಿಯ ನೆನದೇವ ಕೋಲ ಪ. ನಾರಿಯರಿಬ್ಬರಿಗೆ ಹರಿಯು ಕರೆದು ಮಾತಾಡದ್ಹಾಂಗೆ ನೀರೊಳಗೆ ಹೋಗಿ ಅಡಗಿದ ಕೋಲನೀರೊಳಗೆ ಹೋಗಿ ಅಡಗಿದ ರುಕ್ಮಿಣಿಪೋರತನವೆಂದು ಬಿಡಬೇಕು ಕೋಲ 1 ಕೃಷ್ಣ ನಮ್ಮರಮನೆ ಬಿಟ್ಹೋಗ ಬಾರದೆಂದು ಬೆಟ್ಟವ ಮ್ಯಾಲೆ ಹೊರೆಸಿದ ಕೋಲ ಬೆಟ್ಟವ ಮ್ಯಾಲೆ ಹೊರೆಸಿದ ಸತ್ಯಭಾಮೆಗಟ್ಟಿ ಎದೆಯವಳು ಹೌದು ಹೌದು ಕೋಲ 2 ನೀರಜನಯ್ಯಗೆರಡುಕ್ವಾರಿ ಚಿನ್ಹವ ಮಾಡಿ ಮಾರಿಯ ಗುರುತು ಮರೆಸಿದಿ ಕೋಲ ಮಾರಿಯ ಗುರುತು ಮರೆಸಿದಿ ನೀಲಾದೇವಿಧೈರ್ಯ ವಿನ್ನೆಷ್ಟು ಧಮಕೆಷ್ಟು ಕೋಲ 3 ಹರದೆಯರಿಬ್ಬರು ಹರಿಯ ಕರೆದು ಮಾತಾಡದ್ಹಾಂಗೆ ಉರಿಮಾರಿಮಾಡಿ ನಿಲ್ಲಿಸಿದಿ ಕೋಲಉರಿಮಾರಿ ಮಾಡಿನಿಲ್ಲಿಸಿದಿಭದ್ರಾದೇವಿಸರಿಯವರು ನೋಡಿ ನಗುತಾರೆ ಕೋಲ 4 ಕರ ಕರಿಯೆಂದು ಬಿಡಬೇಕು ಕೋಲ 5 ಮಡದಿಯರಿಬ್ಬರು ಹರಿಯ ಕರೆದು ಮಾತಾಡದ್ಹಾಂಗೆ ಕೊಡಲಿಯ ಕೊಟ್ಟು ಬಡವನೆ ಕೋಲ ಕೊಡಲಿಯ ಕೊಟ್ಟು ಬಡವನೆ ಮಾಡಿದ ಕಿಡಿಗೇಡಿತನವ ಬಿಡು ಕಾಳಿ ಕೋಲ 6 ನಲ್ಲೆಯರಿಬ್ಬರು ಹರಿಯ ಎಲ್ಲೆಲ್ಲೂ ಬಿಡದ್ಹಾಂಗೆ ಬಿಲ್ಲನೆ ಕೊಟ್ಟು ನಿಲ್ಲಿಸಿದಿಬಿಲ್ಲನೆ ಕೊಟ್ಟು ನಿಲ್ಲಿಸಿದಿ ಲಕ್ಷಣಾಕಲ್ಲೆದೆಯವಳು ಹೌದ ಹೌದ ಕೋಲ 7 ಒಳ್ಳೆಗುಣಪೂರ್ಣಗೆ ಕಳ್ಳನಂತೆ ಹೆಸರಿಟ್ಟಿಸುಳ್ಳು ನೋಡಿದರೆ ವಿಪರೀತ ಕೋಲ ಸುಳ್ಳು ನೋಡಿದರೆ ವಿಪರೀತ ಜಾಂಬವಂತಿಕೊಳ್ಳಿಯ ಗುಮ್ಮಗುರುವೇನ ಕೋಲ 8 ಮುದ್ದು ಹದಿನಾರು ಸಾವಿರ ಬುದ್ದಿವಂತರ ಕೂಡಿಹದ್ದೆರ್ದಬೌದ್ಧ ಎನುತಲೆ ಕೋಲ ಹದ್ದೆರ್ದಬೌದ್ಧ ಎನುತಲೆ ಬೆನ್ನ ಹತ್ತಲು ಇದ್ದಜನರೆಲ್ಲ ನಗುತಾರೆ ಕೋಲ 9 ನೂರು ಮಂದಿ ಹರಿಯ ದಾರಿಯ ಕಟ್ಟಲು ಹಾರಿದ ಕೃಷ್ಣ ಕುದರಿಯ ಕೋಲ ಹಾರಿದ ಕೃಷ್ಣ ಕುದುರೆ ಏರಿಕೊಂಡುಮಾರಿ ತೋರದಲೆ ಬರಲಿಲ್ಲ ಕೋಲ10 ಚಲ್ವ ರಾಮೇಶ ಎಲ್ಲ ಲಲನೆಯರಿಗೆ ಅಂಜಿಕೊಂಡುಬಲಿಯ ಮನೆ ಮುಂದೆ ಕುಳಿತಾನೆ ಕೋಲ ಬಲಿಯ ಮನೆ ಮುಂದೆ ಕುಳಿತಾನೆ ರುಕ್ಮಿಣಿಕಲಹವ ಬಿಟ್ಟು ಕರೆತಾರೆ ಕೋಲ 11
--------------
ಗಲಗಲಿಅವ್ವನವರು
ಭಳಿರೆ ಭಳಿರೆ ನರಸಿಂಹ ಮಹಾಸಿಂಹ | ವೈರಿ ಉರಿಮಾರಿ ಪ ನಗನಗಾ ನಗನಗಗಳಲ್ಲಾಡೆ ಚತುರ್ದಶ | ಜಗಜಗ ಜಗವೆಲ್ಲ ಕಂಪಿಸಿ ಕಂಬನಾಗೆ || ಹಗೆ ಹಗೆ ಬಲವ ದೆಶೆಗೆಡಿಸಿ ರೋಷಗಿಡಿ | ಉಗು ಉಗು ಉಗುಳುತ್ತ ಬಂದ ನರಸಿಂಹ 1 ಬಿಗಿ ಬಿಗಿ ಬಿಗಿದು ಹುಬ್ಬುಗಂಟನೆ ಹಾಕಿ | ಹೊಗೆ ಹೊಗೆ ಹೊಗೆ ಸುತ್ತಿ ಸರ್ವರಂಜೆ || ನೆಗ ನೆಗ ನೆಗ ನೆಗದು ಕುಪ್ಪಳಿಸಿ ಅಸುರನ್ನ | ಮಗು ಮಗು ಮಗು ಮಗು ಬೇಡಿಕೊಂಡ ನರಸಿಂಹಾ 2 ಉಗು ಉಗು ಉಗು ಉಗರಿಂದ ಕ್ರೂರನ್ನ ಹೇರೊಡಲ | ಬಗ ಬಗ ಬಗ ಬಗದು ರಕುತವನ್ನು | ಉಗಿ ಉಗೀ ಉಗೀ ಉಗಿದು ಚಲ್ಲಿ ಕೊರಳಿಗೆ ಕರುಳ | ತೆಗೆ ತೆಗೆ ತೆಗೆ ತೆಗೆದು ಇಟ್ಟ ನರಸಿಂಹಾ 3 ಯುಗ ಯುಗ ಯುಗ ಯುಗದೊಳಗೆ ಪ್ರಣತಾರ್ತಿ ಹರನೆಂದು | ಝಗ ಝಗಾ ಝಗಝಗಿಪ ಮಕುಟ ತೂಗೆ | ಸುರರು ಗಗನದಿ ನೆರೆದು | ಮಿಗಿ ಮಿಗಿ ಮಿಗಿ ಮಿಗಿಲೆನೆ ನರಸಿಂಹಾ 4 ಒಂದೊಂದೊಂದೊಂದು ಮುನಿಗಳಿಗೊಲಿದು | ಅಂದಂದಂದಂದದೀಗಾಯತ ವೊಲಿದು | ಅಂದಂದಂದವ ಕಾವ ಚೊಳಂಗಿರಿ | ಮಂದಿರನೆ ವಿಜಯವಿಠ್ಠಲ ನರಸಿಂಹಾ 5
--------------
ವಿಜಯದಾಸ
ಮಡದಿ ಭಾಗ್ಯ ಎಂಬುವಿಯಾಕೊ ರಂಗಯ್ಯನಿನ್ನ ಬಡಿವಾರವ ಹೇಳಿಕೊಂಬೆ ಸಾಕೊ ಕೃಷ್ಣಯ್ಯ ಪ. ಬಿಡು ಬಿಡು ಸಣ್ಣ ಮಾರಿಯನ್ನು ನೀ ಮಾಡಬ್ಯಾಡ ಬಡಿವಾರವ ಹೇಳಿಕೊಂಬುವುದೇನೊಕಡುಭಾಗ್ಯ ಪುರುಷನಾಗೊ ನೀನು ಎತ್ತಿಕೊಂಡ್ಹೋಗಿ ಮಡುವು ಸೇರಿಕೊಂಡಿ ಮತ್ತೇನೊ1 ದೊರೆತನ ಹೇಳಿಕೊಂಬೆ ಸಾಕೊ ರಂಗಯ್ಯನಿನ್ನ ಕರಕರ ಹಲ್ಲು ತಿಂಬೊ ಸಿಟ್ಟು ಕೃಷ್ಣಯ್ಯಬಿರುಗಣ್ಣು ಬಿಡವೋದ್ಯಾಕಿಷ್ಟು ರಂಗಯ್ಯನಿನ್ನ ಉರಿಮಾರಿಗೆ ಅಂಜೋರೆಲ್ಲೊ ಅಷ್ಟು 2 ಧರೆ ಮ್ಯಾಲೆ ರಾಜ್ಯ ಹ್ಯಾಂಗ ರಂಗಯ್ಯನಿನ್ನ ತಗಿ ತಗಿ ಬಲುಲೀಲಾ ಕೈಯ್ಯ ಕೃಷ್ಣಯ್ಯಸುಗುಣನೆಂತೆಂಬೊ ಮತಿಯಾದುದಕ್ಕೆಜನರು ನಗದೆ ಸೈ ಸೈ ಎಂದಾರು ಬರಿಯ ಕೃಷ್ಣಯ್ಯ3 ಧೀರ ಧನವಂತನಲ್ಲೊ ಸಾಕೊ ರಂಗಯ್ಯಆದರೆ ವನದಿನಾರು ವಸ್ತ್ರವನುಟ್ಟುಕೊಂಡಿ ಯಾಕೊ ಕೃಷ್ಣಯ್ಯಚೋರನಂತಾಡಿಕೊಂಬಿ ಸಾಕೊ ರಂಗಯ್ಯಇದ ಕೇಳಿದ ವೀರರೆಂಬವರು ನಗತಾರೊ ಕೃಷ್ಣಯ್ಯ 4 ವಸ್ತ್ರವಿಲ್ಲೆಂಬೊ ಎಚ್ಚರಿಕಿಲ್ಲೊ ರಂಗಯ್ಯತೇಜಿ ಹತ್ತೇನು ಎಂದು ಬರುವಿಯಲ್ಲೊ ಕೃಷ್ಣಯ್ಯಕತ್ತಿ ಕೈ ಶೂರನೆಂಬೊದೆಲ್ಲೊ ರಂಗಯ್ಯರಾಮೇಶ ನಿನ್ನ ಹತ್ತಿಲ್ಲಿದ್ದರೆಲ್ಲ ನಗುವರೊ ಕೃಷ್ಣಯ್ಯ5
--------------
ಗಲಗಲಿಅವ್ವನವರು
ಕೃಷ್ಣ ಇನ್ಯಾತರ ಶ್ರೇಷ್ಠನೆಸ್ತನ ಕೊಟ್ಟ ನಾರಿಯ ಕೊಂದು ಬಿಟ್ಟಾನೆ ಪ.ಅರ್ಜುನ ಯಾತರ ಭಂಟನೆನಿರ್ಲಜ್ಯದಿ ಧನುಷ್ಯ ಕೆಳಗಿಟ್ಟಾನೆÉ ಅ.ಪ.ಏನೇನೂ ಧೈರ್ಯವಿಲ್ಲವೊ ಕೃಷ್ಣಗೆಬಲು ಮೀನಿನಂತ ಚಂಚಲವೊ 1ಇಷ್ಟು ಎದೆಗಾರನಲ್ಲವೊ ಪಾರ್ಥಯುದ್ಧ ಬಿಟ್ಟರೆ ನಗುವರಲ್ಲವೊ 2ಸೊಲ್ಲುಸಾಲವ ಕೊಡುವೊನಲ್ಲವೊದೊಡ್ಡ ಕಲ್ಲು ಹೊರಿಸಲು ನಾಚಿಕೆ ಇಲ್ಲವೊ 3ಹೆಣ್ಣು ಬಾಳ್ವೆ ಬಲು ಹೊಲ್ಲೊಹರಡು ಸಣ್ಣವಲ್ಲವೊ ನಿನಗಲ್ಲವೊ 4ತಲೆದೂಗೊ ಲಕ್ಷಣ ಹೊಲ್ಲವೊಅತಿ ಮಲೆತು ನಡೆವ ಬುದ್ದಿ ಅಲ್ಲವೊ 5ವೇಷಗಾರಿಕೆ ಬಲು ಹೊಲ್ಲವೊವಿಶೇಷ ಪರಾಕ್ರಮ ಅಲ್ಲವೊಅರ್ಜುನ6ಬಿರಿಗಣ್ಣು ಲಕ್ಷಣ ಹೊಲ್ಲವೊದೊಡ್ಡ ಉರಿಮಾರಿಪುರುಷನಲ್ಲವೊ7ಮರುಳುತನ ಬಲು ಹೊಲ್ಲವೊಮಕ್ಕಳ ಕೊರಳು ಕೊಯ್ದರೆ ನಾಚಿಕೆ ಇಲ್ಲವೊ ಅರ್ಜುನ 8ತಿರುಕತನ ಬಲು ಹೊಲ್ಲವೊಅತಿ ಹರಕ ನೀ ಪುರುಷನಲ್ಲವೊ ಕೃಷ್ಣ 9ಚೋರತನದಿಂದ ಬಲು ಕೆಟ್ಯೊನಿನ್ನ ಧೀರತನವ ತೋರಿಸಿ ಬಿಟ್ಯೊ 10ಕೊಡಲಿಗಡುಕತನ ಹೊಲ್ಲವೊಛಲ ಹಿಡಿದರೆ ಬಿಡುವನಲ್ಲವೊ ಕೃಷ್ಣ 11ಅಹಲ್ಯದೇವಿಯ ಕೆಡಿಸಿದನೆಂದುಬಹು ಭೋಳೆ ಬುದ್ದಿಹೇಳಲೊನಿಂದುಅರ್ಜುನ12ನಾರಿಯ ಒಬ್ಬಗೆ ಒಪ್ಪಿಸಿಕೊಟ್ಯೊನೀ ಊರು ಕೇರಿ ಹಂಬಲ ಬಿಟ್ಯೊ ಕೃಷ್ಣ 13ವೈರಾಗ್ಯವ ತೋರಿಕೊಂಡೆಲ್ಲೊನಾಗನಾರಿಯ ಕೂಡಿಕೊಂಡೆಲ್ಲೊ ಪಾರ್ಥ 14ಪೋರತನವು ಬಲು ಅಲ್ಲವೊ ಕೃಷ್ಣನಿನ್ನ ಜಾರತನವ ಬಿಡಲ್ಲಿವೊ 15ದಾರಿದ್ರ್ಯತನ ಬಲು ಹೊಲ್ಲವೊದೊಡ್ಡ ವೀರನೆಂಬೊ ಗರವು ಅಲ್ಲವೊ ಅರ್ಜುನ 16ಅನ್ನವಸ್ತ್ರವು ನಿನಗಿಲ್ಲವೊಬಹು ಮಾನ್ಯನೆಂಬೊ ಗರವು ಅಲ್ಲವೊ ಕೃಷ್ಣ 17ರಾಜ ಲಕ್ಷಣ ನಿನಗಿಲ್ಲವೊರೂಪಮಾಜುಕೊಂಡ ಬುದ್ಧಿ ಅಲ್ಲವೊ ಅರ್ಜುನ18ದ್ವಂದ್ವ ಯುದ್ಧವÀ ಮಾಡಿದವನಲ್ಲವೊಕುದುರೆ ಚಂದಾಗಿ ಏರಿ ಓಡಲು ಬಲ್ಯೊ ಕೃಷ್ಣ 19ಕರೆದರೆ ಯುದ್ಧಕ್ಕೆ ಹ್ಯಾಗೆಂದುನೀನುತಿರುಗಿದಿ ತೀರ್ಥಯಾತ್ರೆಗಳೆಂದು ಅರ್ಜುನ 20ಕೃಷ್ಣ ಅರ್ಜುನರ ಈ ಸಂವಾದಸಂತುಷ್ಟ ರಾಮೇಶ ಕೊಡುವಮೋದ21
--------------
ಗಲಗಲಿಅವ್ವನವರು
ತಾಳಿಯ ಹರಿದು ಬಿಸಾಡೆ ನೀಹೇಳಿದವರ ಮಾತ ಕೇಳೇ ಗೈಯ್ಯಾಳಿ ಪ.ಎಲ್ಲಮ್ಮ ಎಕಲಾತಿ ಉರಿಮಾರಿ ಉಡತಮ್ಮಬುಲ್ಲ ಮಹಿಸಾಸುರ ದೈವವೆಂದೆಎಲ್ಲ ದೈವಗಳು ನಾಯಾಗಿ ಹರಿವಾಗಕಳ್ಳದೇವರ ನೆಚ್ಚಿ ಕೆಡಬೇಡ ಮೂಳಿ 1ಕೊರಳೊಳು ಕವಡಿಯ ಶಿರದಲಿ ಹಡಲಿಗೆಕರದಲಿ ದೀವಟಿಗೆ ಉರಿಸುತಲಿಉರಿವ ಪಂಜನೆ ಪಿಡಿದು ಉಧೋ ಉಧೋ ಎನುತಲಿತಿರುಗಿದ ಕೇರಿಗುಂಟ ಮೂಳಿ 2ಸೀಡಿಯ ಮುಳ್ಳನೆ ತಂದು ನಡುಬೆನ್ನಲೂರಿಕೊಂಡುಒಡೆಯ ಮಲ್ಲಣನೆಂದು ಜೋಲಾಡುಕಡುಹರಿ ಯಮದೂತರು ಬಂದು ಎಳೆವಾಗಒಡೆಯ ಮೆಲ್ಲುಣ್ಣೆತ್ತು ಹೋದನೆ ಮೂಳಿ 3ಗುಂಡಿಗೆ ಎಣ್ಣೆಯ ಎಡಗೈಯಲಿಟ್ಟು ಕೊಂಡುಗುಂಡಿಗೆ ತುಪ್ಪವ ಮುಂದಿಟ್ಟು ಕೊಂಡುಮಿಂಡೆ ಮೈಲಾರಿಯ ಖಂಡೆರಾಯನೆಂದುಕೆಂಡದ ಮೇಲೆ ರೊಟ್ಟಿಯ ಸುಟ್ಟು ಮೂಳಿ 4ಹೊನ್ನುನಾಗರ ಮಾಡಿ ಬಣ್ಣಿಸಿ ಕಿವಿಗಿಟ್ಟುನನ್ನಯ್ಯ ನಾಗಪ್ಪ ಸಲುಹೆನ್ನುತಚಿನ್ನನಾಗರ ಬಂದು ಓಡಾಡಿ ಕಡಿವಾಗಹೊನ್ನನಾಗರ ಎತ್ತ ಹೋದನೆ ಮೂಳಿ 5
--------------
ಪುರಂದರದಾಸರು