ಮೂರ್ತಿ ಪ
ಲೋಕದ ಜನರಘವನು ತೊಳೆಯಲಿಕೆ ತ್ರೈ
ಲೋಕ ದೊಡೆಯ ಚದಂಬರನಾಗಿ ಭೂಕಾಂತೆಯೊಳಗೆ
ಮೂರ್ತಿ ದಯಾಪರ ಮೂರುತಿ 1
ಮಾಡಿಕೊಂಡ ಪಾಪದ ರಾಶಿಯು
ದಿನ ದಿನ ಉರಿಗೊಂಡು ಸುಟ್ಟುದು ಮರೆಹೊಕ್ಕೆನೀಗಳು
ಪಾದ ಪುಂಡರೀಕವನು ಚಿದಂಬರಮೂರ್ತಿ 2
ಹೊನ್ನು ಹಣವ ಚಿನ್ನ ಚಿಗುರು ಬೇಡುವನಲ್ಲ
ಪಾದ ಪದ್ಮದ ಸ್ಮರಣೆಯನು ಸಂಪೂರ್ಣವಾಗಿರುವ
ನಿತ್ಯ ಸುಖಾರ್ಣವಾನಂದ ಚಿದಂಬರಮೂರ್ತಿ 3
ಬೇಡುವೆನೊಂದು ವರವ ಕೊಡುವರೆ ಈ ಗೂಡಿರುವತನಕ
ಕೃಪೆಮಾಡಿ ಸಲಹೋ ಎನ್ನ
ನೋಡಿ ಬಡವನ ಚಿದಂಬರಮೂರ್ತಿ 4
ಪ್ರಾಕುನುಡಿದ ಪುಣ್ಯದಿಂದ ನಿಮ್ಮಯಪಾದ ಸೇರೆ ನಾ
ಕೃತ ಕೃತ್ಯನಾದೆ ನಿಂದಿನ ಜನ್ಮ ಸಾರ್ಥಕ ವಾಯ್ತು
ಪರಾಕೆ ಚಿದಂಬರ ನೀ ಕರುಣಿಸೋ ಎನಗಭಯವಿತ್ತು 5