ಧರಣಿಪತಿ ನಿನ್ನಯ ಕರುಣವೆಂಬುದೆ ಸಾಕು ಪ
ಉರಗಾದ್ರಿನಿಲಯ ವಾಸಾ ಧರೆ ನರಾಧಮರೆನ್ನ
ಪರಿಪರಿ ಪೀಡಿಸಿ ಜರಿದುಗೈವರು ಪರಿಹಾಸ ಅ.ಪ.
ಮಾನವನು ಬಿಡದೆ ಕಾಯ್ದ
ಕಂದು ಗೊರಳನ ಬೆನ್ನಟ್ಟಿಬರೆ ರಕ್ಕಸನು ಪೆಣ್ಣಾಗಿಯವನುರುಹಿದಿ
ನರನನುಡಿ ನಿಜಮಾಡಿದಿ
ಗೀತವಾದಿ ಕೃಷ್ಣ 1
ಭರದಿಯವನುದ್ಧರಿಸಿದೀ
ಪಾಂಡವರಿಗೊಲಿದು ಪೊಂದಿ
ನಿಜ ಬೆರಳಿನಲ್ಲಿ ಗೋವರ್ಧನವ ಪಿಡಿದೆತ್ತಿ ಗೋವಿಂಡು ಸಂತೈಸಿದಿ
ಕರುಣ ಶರಧೀ ಕೃಷ್ಣಾ2
ಉಣಿಸಿ ದೇಹವ ಬೆಳೆಸಿದೆ
ಸುರಿದು ಆಯುಷ್ಯ ಗಳಿಸಿದೆ
ವಿಷಯದಲ್ಯಭಿಮಾನ ತಾಳಿ ಮೆರೆದೆ
ಕಲಿಯ ಬಾಧೆ ಕೃಷ್ಣಾ 3