ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸತ್ಯ ಸಂಕಲ್ಪ ಸ್ವಾತಂತ್ರ ಸರ್ವೇಶ ಸರ್ವೋತ್ತಮನೆ ಸಾರ್ವಭೌಮಾ ಪ ಭೃತ್ಯರಿಗೆ ಬಂದ ಪರಿಪರಿ ಭಯಗಳನೆ ಕಳೆದುನಿತ್ಯದಲಿ ಕಾಯ್ವ ಸ್ವಾಮೀ ಪ್ರೇಮೀ ಅ.ಪ. ಆವ ಜನುಮದ ಫಲವೊ | ಆವ ಕ್ರಿಯಗಳಿಂದಆವ ಸಾಧನದ ಬಗೆಯೋ ||ಆವುದಿಂದಾವುದಕೆ ಘಟನೆಯನು ಮಾಳ್ಪೆಯೊಆವುದೊ ನಿನ್ನಾಟವೋ ||ಆವ ಪರಿಯಿಂದಲ್ಲಿ ಜೀವಿಗಳ ಸಲಹುವಿಯೊಆವ ನಿನ್ನಾಧೀನವೋ |ದೇವ ದೇವೇಶ ನಿನ್ನ | ಭಾವ ಬಲ್ಲವರಾರೊಭಾವಜನ ಪಿತ ಕೃಪಾಳೊ | ಕೇಳೋ 1 ತೈಜಸ ಪ್ರಾಜ್ಞ ವಿಶ್ವರೂಪಗಳಿಂದಸ್ವಪ್ನ ಕಾಲದಲಿ ನೀನೂ ||ಸುಪರ್ವಾಣ ದೈತ್ಯರ ಸೃಜಿಸಿ ಮನೆಯನು ಮಾಡಿಅಪರಿಮಿತ ಕಾರ್ಯಗಳನೂ |ಸುಫಲ ದುಷ್ಕರ್ಮಗಳ ತೋರಿಸೀ ಜೀವಕ್ಕೆಕ್ಲುಪುತವಾಗಿದ್ದವೆಲ್ಲಾ |ಕೃಪೆಯಿಂದ ತೋರಿ ಬದಾಪತ್ತುಗಳ ಕಳೆವಅಪರಿಮಿತ ಸಾಗರಾ | ಶೂರಾ 2 ಎನ್ನಂಥ ಪಾಪಿಷ್ಠರಿನ್ನಿಲ್ಲ ಧರೆಯೊಳಗೆ ನಿನ್ನಂಥ ಕರುಣಿಯಿಲ್ಲಾ ||ಚೆನ್ನಗುರು ವಿಜಯರಾಯರ ಪೊಂದಿದವನೆಂದೂಮನ್ನಿಸಿ ಸಲಹಬೇಕೋ |ಘನ್ನ ಸಂಸಾರದೊಳು ಬವಣೆ ಬಂದಟ್ಟಿದರುನಿನ್ನ ಸ್ಮøತಿಯೊಂದು ಬರಲೀ |ಸನ್ನುತಾಂಗಿಯ ರಮಣ ವ್ಯಾಸವಿಠಲ ಮಧ್ವಮುನಿಗೊಲಿದೆ ಉಡುಪಿವಾಸಾ | ಶ್ರೀಶಾ 3
--------------
ವ್ಯಾಸವಿಠ್ಠಲರು