ಕೃಷ್ಣಾ ನಿನ್ನ ಕನಿಷ್ಟ ಪೊಳವ ವುಂ
ಗುಷ್ಟ ಭಜಿಸುವ
ನಿಷ್ಠ ಜನರ ಉಚ್ಚಿಷ್ಟ ಎನಗದು
ಮೃಷ್ಠಾನ್ನವಾಗಲಿಷ್ಟೇ ಬೇಡಿದೆನೊ ಪ
ನರಲೋಕದ ಸುಖ ಪರಿಪರಿಯಲ್ಲಿ
ಅರಿದೆನದರೊಳು
ಪರಮ ಸೌಖ್ಯ ಎಳ್ಳರೆ ಅನಿತಿಲ್ಲ
ಬರಿದೆ ಜನನ ಮರಣ ಪರಿಯಂತಾ
ದುರಿತ ಧರೆಯೊಳಗೆ ನಿಂದಿಸಲಾರೆ ಸಾಕು
ಶರಣು ಹೊಕ್ಕೆನು
ಕರುಣಪಾಂಗನೆ ಕರವಿಡಿದು ಸಲಹೋ 1
ಆವುದುಂಟದು ದೇವ ಮಾಣಿಸು
ಈ ವರವ ಕೊಂಡು ನಾ ಒಂದನು ವಲ್ಲೆ
ಭಾವಶುದ್ಧ ವಾಕ್ಯವೆ ನಿಶ್ಚಯವೊ
ಮಾನವ ಕಾವ ನೈಯನೆ
ಕಾವ ಜೀವ ನಿನ್ನಂಘ್ರಿ ಸೇವೆ ಸಂಪದವೊ ಜಗತ್ರಯವ 2
ಹಡಗದೊಳಗಿಂದ ತಡಿಯದೆ ಬಂದಾ
ಕಡಗೋಲ ನೇಣ ಪಿಡಿದ ಪಡುವಲಾ
ಗಡಲ ತೀರದ ಉಡುಪಿನಲಿ ನಿಂದ
ಅಡಿಗಡಿಗೆ ಪೂಜೆ
ಬಿಡದೆ ಯತಿಗಳಿಂ
ಉಘಡ ವಿಜಯ ವಿಜಯವಿಠ್ಠ
ಲೊಡಿಯ ಭಕ್ತರ ಬಿರುದಿನ ಕಡು ಸಾಹಸಮಲ್ಲ3