ಡಂಭಕ ಹರಿದೂರ ಪ್ರಾಣೀ ಪ
ಅಂಬುಜನಾಭನ ಇಂಬನ ಪಡಿಯದೇ|
ಡೊಂಬನ ಪರಿಯಾಚಾರ ಪ್ರಾಣೀ ಅ.ಪ
ಅಬ್ಧಿಶಯನ ಸಿರಿನಾಥನ ಒಲುಮೆಯ|
ಲಬ್ಧ ದೊರೆಯದೆ ವಿಚಾರಾ||
ಲಬ್ಧನಾಗಿ ಧನ ಮಾನಕಬಿಟ್ಟಿನೀ|
ಶಬ್ದದಂಗಡಿ ಪ್ರಸರಾ|ಪ್ರಾಣೀ 1
ಪೊಡವಿಯೊಳಗ ಉಗ್ರಸಾಧನದಿಂದಲಿ|
ಬಿಡದೆವೆ ತವಶರೀರಾ||ಒಡನೆ ಮರೆದು ರಿಧ್ಧಿಸಿಧ್ಧಿಯ ಬಲದಲಿ|
ಹಿಡದಿ ಮನದಿ ಅಹಂಕಾರ|ಪ್ರಾಣೀ 2
ಅದಿತತ್ವದಾಗಲೆ ಸಾಧಿಸೇನೆಂದರೆ|
ಸಾಧನ ಕೇಳು ಸುಸಾರಾ||
ಭೇದಿಸು ಮಹಿಪತಿ ನಂದನ ಸಾರಿದ|
ಸಾಧು ರಾಶ್ರಯ ಮನೋಹರ|ಪ್ರಾಣೀ 3