ಇಂದು ನಿನ್ನಯ ಪಾದಾ
ವಂದಿಸುವೆ ನಾನು ಛಂದದಿಂದಾ ಪ.
ಮಂದಾರೊದ್ಧರನ ಪಾದಾ ಸೇವಕರೆಂದೆನಿಸಿದಿ
ದುರ್ಮಾಯವಾದಿಗಳನು ಜಯಸಿದಿ
ಬ್ರಹ್ಮರಾಯನೆಂದೆನಿಸೀದಿ ಅ.ಪ.
ಅಂಜನಿಸುತನೆಂದೆನಿಸಿದೆ
ಸಂಜೀವನವ ತಂದಿ
ಕಂಜಾಕ್ಷಿಮುಖಿಗೆ ಉಂಗುರವನ್ನಿತ್ತಿ
ವನವ ಕಿತ್ತಿ ಸಂಜೀವರಾಯನೆ
ದುರುಳ ರಾವಣನ ಸಂಹರಿಸಿದಿ
ವಿಭೀಷಣನಿಗೆ ರಾಜ್ಯಭಾರದಲ್ಲಿ ನಿಲ್ಲಿಸಿದಿ
ಅಯೋಧ್ಯನಗರಿಗೆ ತೆರಳಿದಿ 1
ಕುಂತಿಯಾ ಕಂದಾ ಕೌರವಾದಿಗಳ ಕೊಂದ
ಯುದ್ಧದಲ್ಲಿ ಪ್ರಚಂಡಾ ಭಾರತಿಗೆ ಗಂಡಾ
ಲಂಡದುಷ್ಯಾಸನನ ತುಂಡು ತುಂಡುಮಾಡಿ ಸೀಳಿದ
ವಿರಾಟ ನಗರದಿ ಸಂಚರಿಸಿದಾ
ಕೀಚಕಾದಿಗಳ ಸಂಹರಿಸಿದಾ
ಪಾಂಚಾಲಿಗೆ ಸೌಗಂಧೀಕುಸುಮವನೆ ತಂದಾ ಆನಂದಾ 2
ಮಧ್ಯಗೇಹನಲ್ಲಿ ಉದ್ಭವಿಸಿದೆಯೋ ನೀ ಇಲ್ಲಿ
ಅದ್ವೈತ ಮತವೆಲ್ಲಾ ಕಾಲಿಲೆ ವದ್ಯೋ
ಗೆದ್ಯೋ ಮಧ್ವಮತವೆಲ್ಲ ಉದ್ಧಾರ ಮಾಡಿದಾ
ಬದರಿಕಾಶ್ರಮಕೆ ಪುನರಪಿ ಪೋದಾ
ವ್ಯಾಸಮುನಿ ಪಾದಕೆ ಅಭಿವಂದಿಸಿದಾ
ಉಡುಪಿಯೊಳು ಕಾಳಿಮರ್ಧನಕೃಷ್ಣನು ನಿಲ್ಲಿಸಿದಾ 3