ಇಂದು ಭಾಸ್ಕರ ಪುಣ್ಯ ಪ್ರಭೆಯ ಕೂಡಿ ಧ್ರುವ
ಪುಣ್ಯ ಎದುರಿಟ್ಟು ಬಂದು ಮುಂದೆ
ಕಣ್ಣಾರೆ ಕಂಡು ತ್ರಾಹಿ ಎಂದೆ
ಸಣ್ಣ ದೊಡ್ಡದರೊಳು ವಸ್ತು ಒಂದೆ
ಬಣ್ಣ ಬಣ್ಣಾ ಗೀಹ್ಯದರಿಂದೆ 1
ಹೇಳಬಾರದಯ್ಯ ನಿಜವರ್ಮ
ಕೇಳಿ ಶ್ರೀಸದ್ಗುರು ಪಾದಧರ್ಮ
ಅಳಿಯಿತು ನೋಡಿ ಪೂರ್ವ ಕರ್ಮ
ಹೊಳಿಯಿತೆನ್ನೊಳು ಘನ ಬ್ರಹ್ಮ 2
ಸೋಹ್ಯ ದೋರಿ ಕೊಟ್ಟೆನಗಿಂದು
ಮಹಿಪತಿಸ್ವಾಮಿ ತಾನೆ ಬಂದು
ಈಹ್ಯಪರ ಪೂರ್ಣ ಕೃಪಾಸಿಂಧು
ಸಾಹ್ಯ ಮಾಡುತೀಹ್ಯ ದೀನ ಬಂಧು 3