ಮಂಗಳಾಂಗ ಶ್ರೀಕೃಷ್ಣಗೆ ಸುದತಿಯರು
ಮಂಗಳಾರತಿ ಎತ್ತಿರೆಪ
ಭವ ಭಯ
ಭಂಗ ಶುಭಗುಣಸಾಂದ್ರನಿಗೆ ಜಯ ಅ.ಪ
ಕೂರ್ಮ ಕ್ರೋಡ ನೃಹರಿಗೆ
ದಾನವ ಬೇಡಿದಗೆ
ಮಾನದಿ ಭೃಗು ಶ್ರೀರಾಮ ಶ್ರೀಕೃಷ್ಣಗೆ
ಬುದ್ಧ ಕಲ್ಕ್ಯನಿಗೆ ಜಯ 1
ಅನಿರುದ್ಧ ಮೂರುತಿಗೆ
ಪಕ್ಷಿವಾಹನ ಹರಿಗೆ
ಕುಕ್ಷಿಯೊಳೀರೇಳು ಜಗವನಿಂಬಿಟ್ಟಗೆ
ಲಕ್ಷ್ಮೀನಾರಾಯಣ ಶ್ರೀ ಶ್ರೀಶನಿಗೆ ಜಯ 2
ಗೋಕುಲದೊಳು ಗೋಪಾಲಕರೊಡಗೂಡಿ
ಗೋವ್ಗಳ ಕಾಯ್ದವಗೆ
ಗೋವರ್ಧನಗಿರಿ ಎತ್ತಿದ ಧೀರಗೆ
ಗೋಪಿದೇವಿಗೆ ಬಾಲಲೀಲೆಯ ತೋರ್ದಗೆ 3
ವೃಂದಾವನದಿ ಮೃತ್ತಿಕೆ ಮೆಲ್ಲುವೆನೆಂದು
ವೃಂದಾರಕರು ನುಡಿಯೆ
ನಂದ ಯಶೋದೆಯರು ಬಂದು ತೋರೆನಲು
ಛಂದದಿಂದ ವಿಶ್ವರೂಪವ ತೋರ್ದಗೆ 4
ಕಾಳಾಹಿವೇಣಿಯರೊಡಗೂಡಿ ನಲಿವಗೆ
ಕಾಳಿಂದಿ ರಮಣನಿಗೆ
ಕಾಲಕರ್ಮಕೆ ಈಶನಾದ ಸ್ವಾಮಿಗೆ
ಕಾಳಿಮರ್ದನ ಕಮಲನಾಭವಿಠ್ಠಲನಿಗೆ 5