ಭವ ಪಾರಗಾಣಿಸಲು
ಭಾರತಿ ರಮಣ ಸಮೀರನಲ್ಲದೆ ಬೇರೆ ಪ
ವೀರ ಹನುಮ ರಘು ವೀರ ಭಕುತ ಬ್ರಹ್ಮ
ಚಾರಿಯಾಗಿ ಜೀವ ಸಾರವೆನಿಸಿದೆ ಅ.ಪ
ಶೇಷ ಗರುಡ ಶಿವ ಮುಖಸುರರೊಬ್ಬರೂ
ದೋಷದೂರಲ್ಲವೊ ಪವಮಾನ
ಈಶದಜ್ಞಾನ ಸಂಶಯ ಭ್ರಮೆ ಪೊಂದದೆ
ಶ್ರೀಶನ ಪರಮ ಸಂತೋಷಕೆ ಪಾತ್ರನು 1
ವೀರರಧಿಕರೆಲ್ಲರು ನಿನ್ನೆದುರಲಿ
ಸಾರಮೇಯದಂತಾದರೊ ಭೀಮ
ನಾರಾಯಣನಿಗೊಬ್ಬನಿಗಲ್ಲದೆ
ಶಿರಬಾಗದೆ ಮರೆದೆಯೊ ಧೀರ ಕಂಠೀರವ 2
ಶಾಂತನು ನೀ ಬಲುದಾಂತನು ನೀನೆ
ಸ್ವಾಂತದಿ ಹರಿಯು ಪ್ರಸನ್ನನು ಸತತವು
ಅಂತಿಮಭಾಷ್ಯಾದಿಗಳ ರಚಿಸಿ ವೇ
ದಾಂತ ಸಾಮ್ರಾಜ್ಯದಿ ಸಾರ್ವಭೌಮ ಯತಿ3