ದ್ರೌಪದೀ ವಸ್ತ್ರಾಪಹಾರ
ಸಭೆಯನ್ನುದ್ದೇಶಿಸಿ ಹೇಳುವ ಮಾತು)
ನೀತಿಯೋ ಪುನೀತಮಾನಸರೇ ಸುಗುಣಾತಿಶಯರೇ
ನೀತಿಯೋ ಪುನೀತಮಾನಸರೇ ಪ.
ದ್ಯೂತ ಕ್ಷತ್ರಿಯ ಜಾತಿಗನುಚಿತ
ಕೈತವದ ವಿಪರೀತ ಮತಿಯಿದು
ಖ್ಯಾತರಿಂಗೀ ರೀತಿ ನ್ಯಾಯವೆ
ಪಾತಕಿ ಘಾತಕಿ ನೀತಿಯೆನಿಸುವುದು1
ಲೋಕನಿಂದಕನೀ ಕುಠಾರನು
ಭೀಕರನು ಮನವ್ಯಾಕುಲಿಸುವನು
ಶ್ರೀಕರಾತ್ಮರನೇಕರಿರುವಿರಿ
ಯಾಕಿಂತ ಮೌನ ವಿವೇಕಿಗಳಿಗೆ ಹೀಗೆ2
ನ್ಯಾಯ ಧರ್ಮ ಸಹಾಯಗೈಯ್ಯುವ
ರಾಯರೆಲ್ಲ ಮಹಾಯಶಸ್ವಿಗಳ್
ಈಯವಸ್ಥೆಗೆ ಪ್ರೀಯರಾದಿರೆ
ಕಾಯೋ ಶ್ರೀಲಕ್ಷ್ಮೀನಾರಾಯಣ ನೀಯೆನ್ನ3