(ಶ್ರೀ ಮಧ್ವಾಚಾರ್ಯರ ಪ್ರಾರ್ಥನೆ)
ನಂಬಿರೊ ಸರ್ವಜ್ಞ ಮುನಿಯಾ ವ್ಯರ್ಥ
ಹಂಬಲಗೊಳದಿರಿ ಹಲವು ಮೋಹದಲಿ ಪ.
ಭೀಮ ವಿಕ್ರಮ ವಾಲಿಯಿಂದ ಬಹು
ತಾಮಸಗೊಂಡ ಸೂರ್ಯಜನನು ಬಂದಾ
ತಾ ಮಾಡಿದನು ಕೃಪೆಯಿಂದ ರಘು
ರಾಮನ ತೋರಿಸಿ ನಲಿಸಿದಾನಂದಾ 1
ಮಾಗಧನುಪಟಳದಿಂದಾ ಶಿವ
ಯಾಗ ಮಾಡುವೆನೆಂದು ಗಿರಿಗೂಹ ಬಂದಾ
ಸಾಗಿದ ನೃಪವ ವೃಂದಾವೆಲ್ಲ
ಬೇಗ ಬಿಡಿಸಿ ಕಾಯ್ದ ಬಹು ಕೃಪೆಯಿಂದಾ 2
ಮಾಯಾವಾದವ ಪೇಳ್ವ ಬಾಯಿ ಕೆಟ್ಟ
ನಾಯಿಗಳನು ಸಾಯ ಬಡಿದವರಯಾ
ಈಯರಸನ ಮುಖ್ಯ ಪ್ರಿಯ ಯೀತ
ನ್ಯಾಯವ ನಡಸುವ ವೆಂಕಟರಾಯ 3