ಒಟ್ಟು 5 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಯ್ಯಾ ನಿತ್ಯಾತ್ಮನನ್ನು ನಿಜವಾಗಿ ನಿನ್ನೊಳಗೆ ನೀನು ನೋಡಯ್ಯಾ ನಲಿನಲಿದಾಡಯ್ಯಾ ಎರಡುದಿನಸಂಸಾರಾ ಎರವಾಗಿ ತಂದ ಶರೀರಾ ಸ್ಥಿರವಲ್ಲ ಸ್ವಾಮಿ ಗುರುಬಲ್ಲಾ ನೋಡಯ್ಯಾ 1 ಶರೀರ ಅರ್ಥಪ್ರಾಣ ಮೂರು ಗುರುಮೂರ್ತಿಗರ್ಪಿಸಿ ತೋರು ದೃಢಭಾವಾ ಆತ್ಮಸುಖವೀವಾ ನೋಡಯ್ಯಾ 2 ನರದೇಹಕ್ಕೆ ಬಂದು ನೀನು ಇರುವಂಥಾ ಸಾರ್ಥಕವೇನು ದೃಢ ಭಕ್ತಿಮಾಡಿ ಪಡೆ ಮುಕ್ತಿ ನೋಡಯ್ಯಾ3 ದೊರಕುವುದು ಪರಿಕರ ಸರ್ವಾ ಗುರುಮೂರ್ತಿ ಸಿಕ್ಕುವುದಪೂರ್ವಾ ಬಿಡಬೇಡಾ ವ್ಯರ್ಥ ಕೆಡಬೇಡಾ ನೋಡಯ್ಯಾ 4 ಭಕ್ತಿಯಲಿ ಕೈವಿಡಿದು ಹೋಗು ಭಜಿಸಿ ಜೀವನ್ಮುಕ್ತನಾಗು ಸಾರಿದೆ ಮರ್ಮವ ತೋರಿದೆ ನೋಡಯ್ಯ5 ಯುಕ್ತಿಯಲಿ ಸಾಧಿಸಲು ಬೇಕು ಇಷ್ಟೊಂದು ಸಿಕ್ಕಿದರೆ ಸಾಕು ಚಂದದಿ ಗುರುವಿಮಲಾನಂದದಿ ನೋಡಯ್ಯಾ 6
--------------
ಭಟಕಳ ಅಪ್ಪಯ್ಯ
ಸುಗುಣಿಯರಿಬ್ಬರು ಬಂದು ಹಗರಣವ ಮಾಡಿದರವ್ವ ಹಗರಣವ ಮಾಡಿದರವ್ವನಗÀಧರನ ಮುಂದೆ ನಾಚಿಕೆ ಇಲ್ಲವ್ವ ಪ. ಸಿಟ್ಟಿಲೆ ತನ್ನೆದೆಯ ಗಟ್ಟಸಿದಳವ್ವತಾ ಗಟ್ಟಿಸಿದಳವ್ವಕಷ್ಟದಿ ಭೀಷ್ಮಿಯುನಿಟ್ಟುಸಿರು ಹಾಕಿದಳವ್ವ1 ಇತ್ತ ದೂತೆಯು ತಾಥಟ್ಟನೆ ಬಂದಳವ್ವತಾ ಥಟ್ಟನೆ ಬಂದಳವ್ವಇಷ್ಟ ಏನೆಂದು ನೆಟ್ಟನೆ ಕೇಳಿದಳವ್ವ2 ಎಷ್ಟು ಹೇಳಲಿ ಈಕೆಎದೆಗಿಚ್ಚಿನವಳವ್ವಭಾವೆ ಎದೆಗಿಚ್ಚಿನವಳವ್ವÀ ಕೃಷ್ಣಗೆ ಕರೆದು ಕೊಟ್ಟಳು ವೀಳ್ಯವವ್ವ 3 ಕೆಟ್ಟ ರುಕ್ಮಿಣಿಯು ಕಲಹಗಾರುತಿಯವ್ವಬಲು ಕಲಹಗಾರುತಿಯವ್ವಅಗ್ಗಿಷ್ಟಿಗೆ ಆದಳು ಅತಿ ಸಿಟ್ಟಿನ ಹುಲಿಯವ್ವ4 ಚಿಕ್ಕ ಚೇಳೆಂದು ಬಲು ಅಕ್ಕರೆ ತೋರಿದೆನವ್ವ ಬಲು ಅಕ್ಕರೆ ತೋರಿದೆನವ್ವಭಾವೆಯ ಉಕ್ಕುಹೇಳಲು ಎನಗೆ ಶಕ್ಯ ಇಲ್ಲವ್ವ5 ಉರಗ ಹಿರಿಯದೆಂದು ಎರಗೊದೇನವ್ವಅದಕೆ ಎರಗೋದೆನವ್ವ ಉರವಣಿಗೆ ರುಕ್ಮಿಣಿಯಮುರಿಯಲಿಲ್ಲವ್ವ 6 ಕೆಂಜಿಗ ಕಚ್ಚಲು ಅಂಜೋರೇನವ್ವಅದಕಂಜುವರೇನವ್ವಭಾವೆಯ ಮಂಜುಳವಾಣಿ ಮೂಲೆಗೆ ಬೀಳಲೆವ್ವ 7 ಹದ್ದುಕುಕ್ಕಿದರೆ ಗದ್ದರಿಸೋರೇನವ್ವಅಂಜಿ ಗದ್ದರಿಸುವರೇನವ್ವರುಕ್ಮಿಣಿಯ ಮುದ್ದು ಮಾತುಗಳಸದ್ದಡಗಲಿಲ್ಲವ್ವ 8 ಒಳ್ಳೆಯವಳಲ್ಲ ಭಾವೆಮುಳ್ಳಿನಂಥವಳವ್ವಬಲುಮುಳ್ಳಿನಂಥವಳವ್ವಇವಳ ತಳ್ಳಿ ಮಾತುಗಳ ತಾಳಲಾರೆನವ್ವ9 ಸುಳ್ಳಿ ರುಕ್ಮಿಣಿ ಶೂಲದಂಥವಳವ್ವಬಲು ಶೂಲದಂಥವಳವ್ವಕಳ್ಳ ಮಾತುಗಳೆಷ್ಟುಕಲಿತಾಡುವಳವ್ವ10 ಮಸೆದ ಕತ್ತಿಯಂತೆ ಎಸೆವಳು ಭಾವೆಯವ್ವಬಲು ಎಸೆವಳು ಭಾವೆಯವ್ವಇವಳ ಹೆಸರು ಅಡಗÀಲಿಎನ್ನ ಉಸಿರು ಮುಟ್ಟಿಲಿಯವ್ವ11 ಬಾಲೆ ರುಕ್ಮಿಯು ಶೂಲದಂಥವಳವ್ವಬಲು ಶೂಲದಂಥವಳವ್ವಕಾಲು ಕೆದರಿಎನ ಮ್ಯಾಲೆ ಬಂದಿಹಳವ್ವ 12 ವೈರಿ ಸವತಿಯುಎನ್ನ ಸರಿಯಳೇನವ್ವ 13 ಶ್ರೇಷ್ಠಳಾದರೆ ನೀಉಚಿತವ ಇಟ್ಟುಕೊಳ್ಳವ್ವನೀ ತೊಟ್ಟುಕೊಳ್ಳವ್ವಇಷ್ಟೊಂದು ಸೊಕ್ಕುಕಟ್ಟಿಡಿಸುವೆನವ್ವ 14 ಸೊಕ್ಕು ಸೊಕ್ಕೆನಲಿಕ್ಕೆ ತಕ್ಕವಳೇನೆ ಭಾವೆಇವಳು ತಕ್ಕವಳೇನೆ ಭಾವೆಇವಳ ಚಕ್ಕಂದಕ್ಕೆ ಹರಿಯುಅಕ್ಕರ ಬಡುವನವ್ವ15 ಅಕ್ಕಸದ ಮಾತು ಕೇಳಲಾರೆನವ್ವನಾ ಕೇಳಲಾರೆನವ್ವಇವಳ ಉಕ್ಕಸಕೆ ಕೃಷ್ಣಧಕ್ಕನೆ ನಾಚಿದನವ್ವ16 ಮುಂಜೆರಗು ಹಿಡಿದು ಗುಂಜಿಸಿ ಎಳೆವೆನವ್ವನಾ ಎಳೆವೆನೆವ್ವಪಂಜರದ ಗಿಳಿಯಂತೆಅಂಜಲಿ ಇವಳವ್ವ17 ಕೈ ಹಿಡಿದು ಕೆಳಗೆ ಎಳೆವೆನವ್ವನಾ ಕೆಳಗೆ ಎಳೆವೆನವ್ವಭಯವೇನವ್ವ ರುಕ್ಮಿಣಿಯ ಭಯವೇನವ್ವಅಯ್ಯೊ ಅಂಜಲ್ಯಾತಕೆ ಸೈ ಸೈಯವ್ವ18 ಎಷ್ಟು ಫಾತುಕಳೆ ನಷ್ಟಳು ಭಾವೆಯವ್ವಬಲು ನಷ್ಟಳು ಭಾವೆಯವ್ವಕೃಷ್ಣನ ತೊಡೆಬಿಟ್ಟು ಇಳಿಸುವೆನವ್ವ19 ಭಾಳೆ ಘಾತುಕಳು ರುಕ್ಮಿಣಿಯವ್ವನೀ ಕೇಳೆ ರುಕ್ಮಿಣಿಯವ್ವಗೈಯ್ಯಾಳಿಯ ತೊಡೆಬಿಟ್ಟು ಇಳಿಸುವೆನವ್ವ20 ಚಂದ್ರನಿಲ್ಲದ ಚಿಕೆÀ್ಕ ಚಂದವೇನವ್ವಅದು ಚಂದವೇನವ್ವನಿಜಳೆ ಎನ್ನಮ್ಯಾಲೆಬಂದಿಹಳ್ಯಾತಕವ್ವ21 ದಾರ ಮಲ್ಲಿಗೆ ನಡುವೆ ತೋರಿದಂತವ್ವಅದು ತೋರಿದಂತವ್ವಇವಳ ಹಿರಿತನವೆಲ್ಲವಅರಿಯೆನವ್ವ22 ಸಿರಿರಮಿ ಅರಸಗೆ ಸರಿಯಿಬ್ಬರು ನೀವÀವ್ವನೀವು ಸರಿಯಿಬ್ಬರವ್ವಬರಿಯೆ ಕರಕರೆಯಹಿರಿಯರಲ್ಲವ್ವ 23
--------------
ಗಲಗಲಿಅವ್ವನವರು
ಕೌತುಕಲಕುಮಿನಾಥನು ಒಲಿದದ್ದುಭೂತಳದೊಳಗÀಂಜೋದ್ಯಾತರ ಮಾತಿದು ಪ.ವೇದ ತಂದಾತನ ಪಾದವ ನೋಡಿ ನೋಡಿಮೋದಬಟ್ಟನುಬೊಮ್ಮಮಾಧವಅಂಜಿದ್ದು1ಮಂದಾರಗಿರಿಎತ್ತಿ ತಂದ ಅಮೃತವನ್ನುಆನಂದ ಬಟ್ಟನುಬೊಮ್ಮಇಂದೈವರು ಅಂಜಿದ್ದು2ಧರಣಿ ತಂದಾತನ ವರಹಾ ಸುರರರಿಗೆ ಸುಖವಿತ್ತುದೊರೆ ಧರ್ಮನ ಕಂಡುಪರಮಭೀತನಾದ3ನರಸಿಂಹ ದೈತ್ಯನ ವಧಿಸಿಬಿಟ್ಟನೆಂದುಹರುಷವಾದನುಬೊಮ್ಮಅರಸ ಅಂಜಿದ್ದು4ವಾಮನ ರೂಪಕ್ಕೆ ಕಾಮ ಮೋಹಿತರಾಗಿಶಾಮ ವರ್ಣನ ಕಂಡು ಭೀಮ ಭೀತನಾದ 5ಜ್ಞಾನಿಗಳು ಭಾರ್ಗವನ ಧೇನಿಸಿ ನಮಿಸೋರು ಏನೆಂಬೆಪಾರ್ಥನು ತಾ ನೋಡಿ ಅಂಜಿದ್ದು 6ಚಲ್ವರಾಯನಗುಣಎಲ್ಲ ಮೋಹಿಸಬೇಕುನಲ್ಲಿ ದ್ರೌಪತಿದೇವಿಯ ವಲ್ಲಭರಂಜಿದ್ದು 7ಕೃಷ್ಣಾವತಾರಗೆ ಎಷ್ಟು ಮೋಹಿಸುವವರುಧಿಟ್ಟ ನಕುಲರಾಯ ಇಷ್ಟೊಂದು ಅಂಜಿದ್ದು 8ಬೌದ್ಧನ್ನ ಧೇನಿಸಿ ಸಿದ್ಧಿ ಪಡೆದವರೆಷ್ಟುರುದ್ರಾದಿ ವಂದ್ಯಗೆ ಬುದ್ದಿವಂತರು ಬೆದರ 9ಚಲುವ ರಂಗಯ್ಯನು ಕುದುರೆ ಏರಿ ಬರಲುಬುದ್ಧರು ನಮಿಸುವರು ಹೆದರ ಸಹದೇವನು 10ತಂದೆ ರಾಮೇಶನ ಕೊಂಡಾಡೊ ಗುಣವಿಲ್ಲಪುಂಡರಿಕಾಕ್ಷಗೆ ಪಾಂಡವ ರಂಜಿಸಿದ್ದು 11
--------------
ಗಲಗಲಿಅವ್ವನವರು
ಭಕ್ತವತ್ಸಲ ಬಂದು ಬಾಗಿಲಲಿ ನಿಂತುಎತ್ತ ಹೋದನೆಂದು ಧಿಗಿಲು ಎನುತಮತ್ಯಾಕೆ ಬರಲಿಲ್ಲವೊ ಅರ್ಜುನರಾಯ ಪ.ವೀರರಾಯರÀ ಸೇವೆ ಪರಿಪರಿ ಮಾಡಿದ್ದುಮರೆತುಕೊಂಡು ಧರ್ಮ ದೊರೆಯಾಗಿ ಕುಳಿತ 1ಪಾಂಚಾಲಿ ರಮಣನು ಪಂಚ ಪಗಡೆಯನಾಡಿವಂಚನೆ ಮಾಡದೆ ಹಂಚಿಕೆಯಲಿಕುಳಿತ 2ಧಿಟ್ಟ ಭೀಮರಾಯ ಹುಟ್ಟು ಬಚ್ಚಿಟ್ಟುಕೊಂಡುಸಿಟ್ಟಿಲಿಂದ ಮೈ ಮುಟಿಗ್ಯಾಗಿ ಕುಳಿತ 3ಪುಂಡ ಭೀಮರಾಯ ಮಂಡಿ ಕೆದರಿಕೊಂಡುಖಂಡಗನ್ನವ ಉಂಡು ದಿಂಡೆನ್ಹಾಂಗ ಕುಳಿತ 4ಚಲ್ವ ಅರ್ಜುನರಾಯ ಬಿಲ್ಲು ಮೂಲೆಗೆ ಇಟ್ಟುಒಲ್ಲಿಯ ಮುಸುಕು ಹಾಕಿ ಎಲ್ಲೋ ಹೋಗಿ ಕುಳಿತ 5ಹೆÀಚ್ಚಿನ ಗಾಂಡೀವ ಬಚ್ಚಿಟ್ಟು ಕೋಣ್ಯಾಗೆಹುಚ್ಚನ್ಹಾಂಗೆಮಾರಿಮುಚ್ಚಿಕೊಂಡು ಕುಳಿತ6ಚದುರ ನಕುಲರಾಯ ಎದುರಿಗೆ ಬಾರದೆಹೆದರಿಕೊಂಡು ತಾನು ಕುದುರೆ ಮನೆಯ ಹೊಕ್ಕ 7ಧನವೆತ್ತಿಸಹದೇವಘನವಿದ್ಯಾನರಿಯದೆದನಕರುಗಳನ್ನೆಲ್ಲ ಅನುಸರಿಸಿ ಇರುವ 8ಪಾಂಡವರೆ ಶ್ರೇಷ್ಠರು ಧೈರ್ಯವೆ ಇರಲೆಂದುಶೌರಿಕುರುರಾಯಗೆ ತಾ ನುಡಿದನು9ಇಷ್ಟೂರು ಹರಿಗಂಜಿ ಬಿಟ್ಟರು ಕೈಕಾಲುಧಿಟ್ಟ ಬಲರಾಮ ತಾ ‌ಘಟ್ಯಾಗಿ ಕೈ ಹೊಯಿದನು 10ಇಷ್ಟೊಂದು ಗಾಬರಿ ದಿಟ್ಟೆಯರೆ ಆಗದಿರಿಕೊಟ್ಟನುಅಭಯದಿಟ್ಟ ರಾಮೇಶ11
--------------
ಗಲಗಲಿಅವ್ವನವರು
ಸುಂದರಿಯರೆಲ್ಲರು ಇಂದಿರೇಶನ ಪಾಡಿಚಂದಾಗಿ ಕೋಲಹಾಕಿರೆಂದಳು ಕುಂತಿ ಪ.ವ್ಯಾಳಾಶಯನನ ಕೂಡಭಾಳಸರಸವೆಕೇಳಯ್ಯ ಕರೆ ಎಂದು ಹೇಳಿದಳು ಕುಂತಿ 1ಕೃಷ್ಣರಾಯನ ಕೂಡ ಇಷ್ಟೊಂದು ಸರಸವೆಧಿಟ್ಟರಿಗೆ ಬುದ್ಧಿಕೊಟ್ಟಳು ಕುಂತಿ 2ತಂದೆ ರಂಗನ ಕೂಡ ಚಂದವೆ ಸರಸವುಮುಂದ್ಹೋಗಿ ಕರೆ ಎಂತೆಂದಳು ಕುಂತಿ 3ಒಡೆಯ ರಂಗನ ಕೂಡ ಬಿಡುವುದೆ ಸರಸವುನಡೆದ್ಹೋಗಿ ಕರೆ ಎಂತೆಂದಳು ಕುಂತಿ 4ಸ್ವಾಮಿ ರಾಮೇಶನ ಪ್ರೇಮದಿ ಕರೆ ಬಾಲೆರಾಯನ ಸಹಿತಕಾಮಿನಿಕುಂತಿ5
--------------
ಗಲಗಲಿಅವ್ವನವರು