ಪತಿತಪಾವನ ಕರಿವದನ ನಾರಾಯಣ
ಮತಿಗೆಮಂಗಳವೀಯೋ ಮುನಿಜನಾಭರಣ ಪ
ಇತರವ್ಯಾಕುಲಗಳ ಮಥನವು ಮನದೆ ಬಹಳ
ವ್ಯಥೆಯ ತೋರುತ್ತಲಿದೆ ಗತಿಯಾವುದೊ ಹರಿಯೆ
ಸತತ ನಿನ್ನ ಗುಣಕಥನ ಮಾಡುವ
ಅತಿಶಯ ಮಾರ್ಗದಿ ಕ್ಷತಿಯೊಳು ಪೊರೆಯ್ಯೆ 1
ಧ್ರುವ ಪ್ರಹ್ಲಾದ ನರ ದ್ರೌಪದಿ ಅಂಬರೀಷ
ಇವರ ಕಷ್ಟಗಳಿಂದ ಪಾರುಗಾಣಿಸಿದೆ
ಅವನೀಭಾರವನಿಳುಹುವ ದೊರೆಯೇ
ಕುವಲಯನೇತ್ರ ಕುಮಾರನ ಕೈಪಿಡಿ2
ಶ್ರೀರಮಣೀವರ ಸಾರಗುಣಾಕರ
ಸಿರಿ ಜಾಜೀಶ್ವರ
ಕೋರುತಿರುವೆಮಗೆ ತೋರಿಸು ತವಪದ
ನಾರದ ಮುನಿನುತ ಸಾರುತೆ ನಮಿಪೆ 3