ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಣ್ಣಿನಾಕರಿರಟ್ಟ ಸುಟ್ಟುಬೂದಿಯ ಮಾಡಿ ನಿನ್ನ ಈಕ್ಷಿಪ ಶುಭ್ರ ದೃಷ್ಟಿಯ ನೀಡೊ ಪ ಪುಣ್ಯಪುರುಷನೆ ಬಿಂಬಪೂರ್ಣ ಮಂಗಳ ಶೌರಿ ಧನ್ಯ ಮಾಡೆನ್ನ ಮುನ್ನ ನಿಲ್ಲಲಿ ಸÉಳಿಯೊ ಅ.ಪ ವಿಷಯಸುಖ ದುರ್ಗುಣದ ಪಂಕದಲಿ ಮನನೆನೆದು ವಿಷಕ್ರಿಮಿಯಂತಿಹದೊ ಇದಕೆ ಮದ್ದು ಸನ್ನುತ ಹರಿಯೆ ವಿರಜ ಮಾಡೊ ಮನವ 1 ಭಾವಸೂತ್ರಗಳಿಂದ ವಿಧಿಭವರೆ ಮೊದಲಾದ ಜೀವರನು ಆಡಿಸುವ ಶ್ರೀಶ ಎನ್ನ ಪಾವನ್ನ ಗುಣನಿಧಿಯೆ ಶ್ರೀ ವೇಣುಗೋಪಾಲ ದೇವ ಅಜಮಿಳಪಾಲ ಪೂತ ಭಾವದಿ ನಿಲಿಸೊ 2 ಕಾತುರವಪಡುತಿಹೆನೊ ಅಸುರಕರ್ಮದಿ ಸಿಕ್ಕಿ ಪಾತಕಿಗಳ ಸಹವಾಸ ಬಿಡಿಸಿ ಕಾಯೊ ಆತುಮಕೆ ಅತಿಮಿತ್ರ ಜಯೇಶವಿಠಲ ನಿನ್ನೊಲುಮೆಪಾತ್ರರಲಿ ಇಟ್ಟೆನ್ನ ಕಾಪಾಡು 3
--------------
ಜಯೇಶವಿಠಲ
ಶ್ರೀ ಶಿವ74ಸೋಮಶೇಖರ ಶಿವನೆ ಹೈಮವತಿವರ ನಿನ್ನತಾಮರಸಪದಯುಗಳಕಾ ನಮಿಪೆ ಕಾಯೋಪಕಾಮಹರ ಸ್ಕಂಧಪಿತ ಅಮರೇಂದ್ರ ಮುಖವಿನುತರಾಮ ನರಹುದಾಸ ಅಮರತಟನೀಧರನೆ ಅಪರುದ್ರನೇ ನಮೋ ಎನ್ನುಪದ್ರವಗಳನು ತರಿದುಭದ್ರವನು ಇಟ್ಟೆನ್ನ ಉದ್ಧರಿಸೊ ದಯದಿರುದ್ರ ಭವಬಂಧಹರ ದುರ್ಗಾರಮಣನಾದಪದ್ಮಭವತಾತನಿಗೆ ಪ್ರಿಯತರನೆ ತ್ರಿಪುರಾರಿ 1ಈಶ ಶಿವ ಮಹದೇವ ಈಶಾನ ನಮೋ ನಿನಗೆವಾಸವಾದ್ಯಮರ ಜಗದ್ಗುರುವೆ ಶರಣೆಂಬೆಈಶ ಕೇಶವ ದೋಷದೂರ ಸುಖಮಯ ಶ್ರೀಶದಾಶಾರ್ಹನಲಿ ಎನ್ನ ಮನವ ಚಲಿಸದೆ ನಿಲಿಸೊ 2ತೀರ್ಥಪಾದನು ಸರ್ವ ಚೇತನರ ದೇಹಸ್ಥಕೃತ್ತಿವಾಸನು ಶ್ರೀ ಪ್ರಸನ್ನ ಶ್ರೀನಿವಾಸಕೃತಿಜಯಾಶ್ರದ್ಧೇಶ ಸಹ ಜ್ವಲಿಪ ನಿನ್ನೊಳಗೆಕೃತ್ತಿವಾಸನೆ ನಮೋ ಶುಭದಪಾರ್ವತೀಶ3
--------------
ಪ್ರಸನ್ನ ಶ್ರೀನಿವಾಸದಾಸರು